ಸಾಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಾಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಸೆಪ್ಟೆಂಬರ್ 6, 2024

ಸಾಲ ಬಾದೆಗೆ ರೈತ ಆತ್ಮಹತ್ಯೆ

 


ಸುದ್ದಿಲೈವ್/ಶಿವಮೊಗ್ಗ


ಸಾಲಬಾದೆಗೆ ಬೆದರಿ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯ ದ್ಯಾವಿನಕೆರೆಯಲ್ಲಿ ನಡೆದಿದೆ.


ತಿಮ್ಮರಾಜು ಎಂಬ 50 ವರ್ಷದ ರೈತ ದ್ಯಾವಿನಕೆರೆಯ ಸರ್ವೆ ನಂ 83 ರಲ್ಲಿ ಎರಡು ಎಕರೆ ಜಮೀನು ಹೊಂದಿದ್ದರು. ಅರ್ಧ ಅಡಿಕೆ ಅರ್ಧ ಜೋಳ ಬೆಳೆದಿದ್ದರು. ಕಳೆದ ವರ್ಷ ಜೋಳ ಬೆಳೆದರೂ ಮೂರು ಬೋರು ಕೈಕೊಟ್ಟ ಪರಿಣಾಮ ಬೆಳೆ ನಾಶವಾಗಿತ್ತು.


ಹೊಸ ಬೋರು ಕೊರೆಯಿಸಲು ಮತ್ತು ಬೆಳೆ ಸಾಲವಾಗಿ ಡಿಸಿಸಿ ಬ್ಯಾಂಕ್ ನಲ್ಲಿ 2,20,000 ಸಾವಿರ ರೂ. ಹಣವನ್ನ ಸಾಲ ಮಾಡಿದ್ದರು. ಈ ವರ್ಷವೂ ಅತಿವೃಷ್ಠಿಯಿಂದಾಗಿ ಜೋಳ ಕೈಕೊಟ್ಟಿದೆ. ಈ ವಿಷಯವಾಗಿ ತಿಮ್ಮರಾಜು ಮಗನ ಬಳಿ ಹೇಳಿಕೊಂಡಿದ್ದರು.


ಮಗನೂ ಸಹ ಹೇಗಾದರೂ ಸಾಲ ತೀರಿಸೋಣ ಅದರ ಬಗ್ಗೆ ಚಿಂತಿಸ ಬೇಡಿ ಎಂದು ಧೈರ್ಯ ನೀಡುದ್ದರು. ನಿನ್ನೆ ಜಮೀನಿಗೆ ಹೋಗಿಬರುವುದಾಗಿ ಹೇಳಿ ಹೊಲದ ಕಡೆಹೋಗಿದ್ದರು. ಮಧ್ಯಾಹ್ನ ಊಟಕ್ಕೆ ಬಾರದ ತಿಮ್ಮರಾಜುವಿಗೆ ಮಗಳು ಕರೆ ಮಾಡಿದಾಗ ತೊದಲು ಮಾತನಾಡಿದ್ದಾರೆ.


ಎಲ್ಲಿದ್ದೀರ ಎಂದಾಗ ತೋಟದಲ್ಲಿ ಇರುವುದಾಗಿ ಹೇಳಿದ್ದರು. ತಕ್ಷಣ ಮಗಳು ಅಳಿಯ ಸ್ಥಳಕ್ಕೆ ಧಾವಿಸಿದ್ದಾರೆ. ಮಲಗಿಕೊಂಡು ವಾಂತಿ ಮಾಡುತ್ತಿದ್ದ ತಿಮ್ಮರಾಜುವರನ್ನ ತಕ್ಷಣವೇ ಮೆಗ್ಗಾನ್ ಗೆ ಕರೆತರಲಾಗಿತ್ತು‌. ನಿನ್ನೆ ಮಧ್ಯಾಹ್ನದಿಂದ ಸಂಜೆಯವರೆಗೆ ಈ ಘಟನೆ ಸಂಭವಿಸಿದೆ.


ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿಮ್ಮರಾಜು (50) ಇಂದು ಬೆಳಿಗ್ಗೆ ಅಸುನೀಗಿದ್ದಾರೆ. ಪ್ರಕರಣ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶನಿವಾರ, ಆಗಸ್ಟ್ 24, 2024

ಆನ್ ಲೈನ್ ಇನ್ ವೆಸ್ಟ್ ಮೆಂಟ್-ಯುವಕ ಆತ್ಮಹತ್ಯೆ




ಸುದ್ದಿಲೈವ್/ಭದ್ರಾವತಿ


ಭದ್ರಾವತಿಯಲ್ಲಿ ಸಾಲು ಸಾಲು ಆತ್ಮಹತ್ಯೆ ಮುಂದುವರೆದಿದೆ. ಮೊನ್ನೆ ಅಪ್ಪ ಮಾಡಿದ ಸಾಲಕ್ಕೆ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಸಿದ ಬೆನ್ನಲ್ಲೇ ಪೇಪರ್ ಟೌನ್ ನಡೆದಿದೆ.


ಪೇಪರ್ ಟೌನ್ 6 ನೇ ನಿವಾಸಿ ಪ್ರದೀಪ್ ಸುಮಾರು 27 ವರ್ಷ ಯುವಕ ಆನ್ ಲೈನ್  ನಲ್ಲಿ ಹಣತೊಡಗಿಸಿ ಕೈಸುಟ್ಟಿಕೊಂಡ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. 


ಆನ್ ಲೈನ್ ಇನ್ ವೆಸ್ಟ್ ಮೆಂಟ್ ಗಾಗಿ ಸುಮಾರು 1.5 ಲಕ್ಷ ರೂ. ಇನ್‌ವೆಸ್ಟ್ ಮೆಂಟ್ ಮಾಡಿದ್ದ ಪ್ರದೀಪ್ ಇಷ್ಟು ಹಣವನ್ನ ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದನು. ಮಾಚೇನಹಳ್ಳಿಯ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದ ಪ್ರದೀಪ್ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾನೆ. 


ಮೊನ್ನೆ ಸ್ಟೀವನ್ ಎಂಬ ಯುವಕ ಅಪ್ಪ ಮಾಡಿಕೊಂಡ ಸಾಲಕ್ಕೆ ಉತ್ತರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದ. ನಿನ್ನೆ ಪ್ರದೀಪ್ ಕನಸುಕಟ್ಟಿಕೊಂಡು ಇನ್ ವೆಸ್ಟ್ ಮೆಂಟ್ ಮಾಡಿದ್ದ. ಕನಸು ಕೈಕೊಟ್ಟ ಪರಿಣಾಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.