ಶಿವಮೊಗ್ಗ ಗಾಂಧಿಬಜಾರ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶಿವಮೊಗ್ಗ ಗಾಂಧಿಬಜಾರ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಸೆಪ್ಟೆಂಬರ್ 14, 2024

ಬಜಾರ್‌ನ ಮಹಾದ್ವಾರದಲ್ಲಿ ಸೆಟ್ಟೇರುತ್ತಿದೆ ಹಿಂದೂ ಕೇಸರಿ ಅಲಂಕಾರ ಸಮಿತಿಯ ಕಲಾಕೃತಿ-ಏನಿರಬಹುದು ಎಂಬುದೇ ಚರ್ಚೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಮೂರು ದಿನ ಬಾಕಿ ಇದೆ. ಹಿಂದೂ ಅಲಂಕಾರ ಸಮಿತಿಯು ಕಳೆದ ಐದು ವರ್ಷದಿಂದ ಬಜಾರ್‌ನ ಮಹಾದ್ವಾರದಲ್ಲಿ ಅಲಂಕಾರವನ್ನ ಮಾಡಿಕೊಂಡು ಬರುತ್ತಿದ್ದು ಈ ವರ್ಷವೂ ಕಲಾಕೃತಿಯನ್ನ ನಿರ್ಮಿಸಿ ಜನರ ಆಕರ್ಷಣೆಗೆ ಮುಂದಾಗಿದೆ. 


ಬಜಾರ್‌ನ್ನ ಈಗಾಗಲೇ ಕೇಸರಿ ಬಂಟಿಂಗ್ಸ್‌ನಲ್ಲಿ ಅಲಂಕಾರ ಮಾಡಲಾಗಿದೆ. ಮಹಾದ್ವಾದಲ್ಲಿ ಕಲಾಕೃತಿಗಳು ಸೆಟ್ಟೇರುತ್ತಿದೆ. ದೇವಸ್ಥಾನದ ಕಲಾಕೃತಿ ಎಂಬುದು ತಿಳಿಯುತ್ತಿದೆ. ದೇವಸ್ಥಾನದ ಕೆಳಭಾಗ ಮಾತ್ರ ಸೆಟ್ಟೇರಿದೆ ಎರಡು ಗೋಪುರಗಳು ಮತ್ತು ಶಿವನ ಕಲಾಕೃತಿ ಇನ್ನೂ ಸೆಟ್ಟೇರಬೇಕಿದೆ. 



ಈ ಕಲಾಕೃತಿಯೇ ಏನು ಎಂಬುದರ ಕುತೂಹಲ ಹೆಚ್ಚಾಗಿದೆ. ದೇವಸ್ಥಾನದ ಬೇಸ್‌ಮೆಂಟ್ ಇರುವುದರಿಂದ ಇದೊಂದು ಅಯೋದ್ಯ ರಾಮಮಂದಿರನ ಎಂಬ ಯೋಚನೆ ಹೊರಹೊಮ್ಮಿದರೂ ಶಿವನ ವಿಗ್ರಹ ಇರುವುದರಿಂದ ಇದು ಅಯೋಧ್ಯ ಆಗಿರಲು ಸಾಧ್ಯವಿಲ್ಲ. ಹೆಚ್ಚಾಗಿ 2018 ರಲ್ಲಿ ಮೊದಲ ಬಾರಿಯ ಕಲಾಕೃತಿಯಾಗಿ ಸ್ಥಾಪನೆಗೊಂಡಿದ್ದೇ ಅಯೋಧ್ಯ ರಾಮ ಮಂದಿರ. ಹೀಗಾಗಿ ರಾಮಮಂದಿರ ಹೊರತು ಪಡಿಸಿ ಶಿವನ ಮಂದಿರದ ಕಲಾಕೃತಿ ಮೂಡಿ ಬರುತ್ತಿದೆ‌ 



ಕಲಾವಿದ ಜೀವನ್ ಅವರಿಂದ ಮೂಡಿ ಬರುತ್ತಿರುವ ಈ ಕಲಾಕೃತಿಗಳಿಗೆ ಐದು ವರ್ಷ ಸಂಭ್ರಮ. 2018 ರಲ್ಲಿ ಅಯೋಧ್ಯ ರಾಮಮಂದಿರ, 2019 ರಲ್ಲಿ ಶಿವಾಜಿ, 2020-21 ಕೊರೋನದ ಹಿನ್ನಲೆಯಲ್ಲಿ ಕಲಾಕೃತಿಗೆ ವಿರಾಮ. 2022 ರಲ್ಲಿ ಗೀತೋಪದೇಶ, 2023 ರಲ್ಲಿ ಉಗ್ರ ನರಸಿಂಹ, 2024 ಈ ಬಾರಿ ಸ್ಥಳೀಯರ ಪ್ರಕಾರ ಕಾಶಿ ವಿಶ್ವನಾಥನ ದೇಗುಲ ಇರಬಹುದು ಎಂದು ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ. 


ಈ ಬಗ್ಗೆ ಕಲಾಕೃತಿ ನಿರ್ಮಿಸಿರುವ ಜೀವನ್‌ ಅವರೆ ಸ್ಪಷ್ಟನೆ ನೀಡಬೇಕಿದೆ. ಜನರು ಬಜಾರ್ ಮಹಾದ್ವಾರಕ್ಕೆ ಬಂದು ಮೊಬೈಲ್ ನಲ್ಲಿ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ, ಸ್ಟೇಟಸ್ ಗೆ ಅಪ್ಲೋಡ್ ಮಾಡಿಕೊಳ್ಳಯವ ದೃಶ್ವ ಲಭ್ಯವಾಗಿದೆ.