ರಾಜಕೀಯ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಾಜಕೀಯ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಆಗಸ್ಟ್ 21, 2024

ಶ್ರದ್ಧ, ಭಕ್ತಿಗಳಿಂದ ನಡೆದ ರಾಯರ ಮಧ್ಯಾರಾಧನೆ



ಸುದ್ದಿಲೈವ್/ಶಿವಮೊಗ್ಗ


ರಾಯರ 353ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ನಗರದ ತಿಲಕ್ ನಗರದಲ್ಲಿರುವ ಮತ್ತು ಬೊಮ್ಮನ್ ಕಟ್ಟೆಯ ರಾಯರ ಮಠದಲ್ಲಿ ಮಧ್ಯಾರಾಧನೆ ಜನರ ಭಕ್ತಿ ಭಾವಕ್ಕೆ ಪರಾವಶವಾಗಿದೆ. ಅಧಿಕ ಸಂಖ್ಯೆಯಲ್ಲಿ ಈ ಎರಡೂ ಮಠಕ್ಕೆ ಆಗಮಿಸಿದ್ದರು. 


ರಾಯರ ಮಂತ್ರಾಲಯದಲ್ಲಿ ದೇವರ ಧ್ಯಾನದಲ್ಲಿರುವ ರಾಯರ ಕಣ್ಣು ಭಕ್ತರ ಕಡೆ ದೃಷ್ಟಿ ಹಾಯಿಸಿದ್ದು, ಹೀಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಇಂದು ಭಕ್ತರು ಸೇರ್ಪಡೆಯಾಗಲಿದ್ದಾರೆ. ಅದರಂತೆ ಶಿವಮೊಗ್ಗದ ಈ ಎರಡೂ ಮಠಗಳಲ್ಲಿ ಜನರು ಹೆಚ್ಚುನ ಸಂಖ್ಯೆಯಲ್ಲಿ ಆಗಮಿಸಿ ರಾಯರ ಕೃಪಾಕಟಾಕ್ಷಕ್ಕೆ ಒಳಗಾಗಿದ್ದಾರೆ. 



ಆಯನೂರಿನ ವಾದಿರಾಜ ಆಶ್ರಮದ ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ತಿಲಕ್ ನಗರ ಮತ್ತು ಬೊಮ್ಮನ್ ಕಟ್ಟೆಯ ರಾಯರ ಮಠದಲ್ಲಿಯೂ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಯರು ಜೀವಂತವಾಗಿ ವೃಂದಾವನ ಪ್ರವೇಶವಾದ ದಿನವೇ ಮಧ್ಯಾರಾಧನೆ ಆಗಿದೆ. 


ಮಧ್ಯಾರಾಧನೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳ ಜೊತೆ ಉತ್ಸವಗಳು ಶ್ರೀ ಮಠದಲ್ಲಿ ನಡೆಯುತ್ತಿದೆ, ಇವತ್ತು ಮಂತ್ರಾಲಯದ ರಾಯರ ಮಠದಲ್ಲಿ ಮಧ್ಯಾರಾಧನೆ ನಡೆಯಲಿದೆ. ರಾಯರ ಏಳು ದಿನಗಳ ಆರಾಧನಾ ಮಹೋತ್ಸವದಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾಧನೆ ಈ ಮೂರು ದಿನಗಳು ಅತಿ ಮಹತ್ವವಾಗಿವೆ.  


ತನಿಖೆ ನಡೆಯುವ ವರೆಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ-ಕೊಳ್ಳೆಗಾಲ ಮಹೇಶ್




ಸುದ್ದಿಲೈವ್/ಶಿವಮೊಗ್ಗ


ತನಿಖೆ ನಡೆಯುವವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೊಳ್ಳೆಗಾಲ ಮಹೇಶ್ ಆಗ್ರಹಿಸಿದ್ದಾರೆ. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ತನಿಖೆ ಮುಗಿದು ಅವರು ತಪ್ಪಿತಸ್ಥರಲ್ಲ ಅಂತಾ ಸಾಬೀತಾದರೆ‌ ಮತ್ತೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿ, ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ನವರು ಪ್ರತಿಭಟನೆ ನಡೆಸಿದ್ದಾರೆರಾಜ್ಯಪಾಲರ ಪರವಾಗಿ ಬಿಜೆಪಿ ನಾಳೆ ಅಂದರೆ ಆಗಸ್ಟ್ 22 ರಂದು ಪ್ರತಿಭಟನೆ ನಡೆಸುತ್ತೇವೆ ಎಂದರು. 


ಐವಾನ್ ಡಿಸೋಜಾ‌ ಹಾಗು ಜಮೀರ್ ಅಹಮದ್ ವಿರುದ್ದ ದೇಶದ್ರೋಹ, ಭಯೋತ್ಪಾದಕ ಪ್ರಕರಣ ದಾಖಲಿಸಬೇಕು. ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಮಾತನಾಡಿದ್ದಾರೆ, ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು ಎಂದರು. 

ಸಿದ್ದರಾಮಯ್ಯನವರನ್ನ ಬಜಾವ್ ಮಾಡಲು ಕಾಂಗ್ರೆಸ್ ರಾಜ್ಯಪಾಲರ ಮೇಲೆ ಮುಗಿಬೀಳುತ್ತಿದೆ-ಮಹೇಶ್



ಸುದ್ದಿಲೈವ್/ಶಿವಮೊಗ್ಗ


ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 15 ತಿಂಗಳಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬಿಜೆಪಿಯ ಮಾಜಿ ಸಚಿವ ಮಹೇಶ್ ಕೊಳ್ಳೆಗಾಲ ಆರೋಪಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್  ಸ್ವಜ‌ನ ಪಕ್ಷಪಾತ ಮಾಡಿದೆ. ಎಸ್ ಸಿ ಎಸ್ ಟಿ ಮತಗಳನ್ನು ಪಡೆದು ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ. ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಇರುವ ಹಣವನ್ನು ವಾಲ್ಮೀಕಿ ನಿಗಮದ ಹಣವನ್ನು ಖಾಸಗಿ ಬ್ಯಾಂಕ್ ಗಳಿಗೆ ವರ್ಗಾವಣೆ ಮಾಡಿದ್ದಾರೆ ಎಂದರು. 


ಇಲಾಖೆಯ ಮಂತ್ರಿ ಸಿಕ್ಕಿ ಹಾಕಿಕೊಂಡು ಜೈಲ್ಲಲ್ಲಿದ್ದಾರೆ. ಸ್ವತಃ ಸಿದ್ದರಾಮಯ್ಯ ನಿಗಮದ ಅವ್ಯವಹಾರ ಒಪ್ಪಿಕೊಂಡಿದ್ದಾರೆ. 187ಕೋಟಿ ಅಲ್ಲ ಕೇವಲ 87 ಕೋಟಿ ಭ್ರಷ್ಟಾಚಾರ ಅಂತಾ ಒಪ್ಪಿಕೊಂಡಿದ್ದಾರೆ. ಮುಡಾದಲ್ಲಿ ತಮ್ಮ ಪತ್ನಿ ಹೆಸರಿಗೆ 14 ನಿವೇಶನ ಪಡೆದುಕೊಂಡಿದ್ದಾರೆ. 


2022.23 ರಲ್ಲಿ 11140 ಕೋಟಿ ಎಸ್ ಸಿ ಎಸ್ ಟಿ ಹಣವನ್ನು ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿದ್ದಾರೆ. 2023 - 24 ರಲ್ಲಿ 14 ಸಾವಿರ ಕೋಟಿ ಎಸ್ ಸಿ ಎಸ್ ಟಿ ಹಣ ವರ್ಗಾವಣೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಿಲ್ಲ ಎಂದರು. 


ಒಂದು ದಿನ ಮೊದಲೇ ಅಧಿವೇಶನ ಮೊಟಕುಗೊಳಿಸಿ ಅನಿರ್ದಿಷ್ಟಾವಧಿಗೆ ಮುಂದೂಡಿದರು. ವಿಪಕ್ಷದ ಧ್ವನಿ ಅಡಗಿಸಲು ಮುಂದಾಗಿದ್ದಾರೆ. ವಿಪಕ್ಷದ ಧ್ವನಿ ಅಡಗಿಸಲು ಸದನ ಮುಂದೂಡಿದರು. ಬಿಜೆಪಿ - ಜೆಡಿಎಸ್ ಭ್ರಷ್ಟಾಚಾರ ಮಾಡಿದ್ದರೆ ದಾಖಲೆ ತರಿಸುವ ಅಧಿಕಾರ ಸರಕಾರಕ್ಕೆ ಇದೆ. ದಾಖಲೆ ತರಿಸಿಕೊಂಡು ಪರಿಶೀಲನೆ ನಡೆಸಿ, ಶಿಕ್ಷೆ ಕೊಡುವ ಅಧಿಕಾರ ನಿಮಗಿದೆ ಎಂದರು. 


ರಾಜ್ಯಪಾಲರು ತನಿಖೆ ಮಾಡಲು ಅನುಮತಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ತಪ್ಪು ಮಾಡದಿದ್ದರೆ ತನಿಖೆ ಆಗಲಿ. ಹೈಕೋರ್ಟ್ ಮೇಲೆ ಒತ್ತಡ ಹಾಕುವ ಕೆಲಸ ಮಾಡ್ತಿದ್ದಾರೆ. ಐವಾನ್ ಡಿಸೋಜಾ ಅವರು ಬಾಂಗ್ಲಾದೇಶಕ್ಕೆ ಬಂದ ಗತಿ ನಮಗೂ ಬರುತ್ತದೆ ಅಂದಿದ್ದಾರೆ. ಕಾಂಗ್ರೆಸ್ ನವರು ರಾಜಭವನಕ್ಕೆ ನುಗ್ಗಿ ತಮ್ಮನ್ನು ಓಡಿಸುವ ಕೆಲಸ ಮಾಡ್ತೀವಿ ಅಂತಾ ಪ್ರಚೋದನಾಕಾರಿ ಹೇಳಿಕೆ ಕೊಟ್ಟಿದ್ದಾರೆ. ನೀವು ಒತ್ತಡ ಹಾಕಿದರೆ ಹೆದರಿಕೊಂಡು ಬಿಡ್ತಾರಾ ಎಂದು ಪ್ರಶ್ನಿಸಿದರು. 


ಇದು ಸಿದ್ದರಾಮಯ್ಯ ಆಡಳಿತದ ಗೂಂಡಾ ಪ್ರವೃತ್ತಿಯಾಗಿದೆ. ಇದೊಂದು ದೇಶ ವಿರೋಧಿ, ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಐವಾನ್ ಡಿಸೋಜಾ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಬಾಂಗ್ಲಾದೇಶದಲ್ಲಿ ನಡೆದ ಘಟನೆ ಭಾರತದಲ್ಲಿ ನಡೆಯಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು. 


ಭಾರತ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾತೃಸ್ಥಾನ ಪಡೆದಿದೆ. ನಮ್ಮ ದೇಶದಲ್ಲಿ ಏನಾದರೂ ಅಂತಹ ಘಟನೆ ನಡೆದಿದ್ದರೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಮೋದಿ ಅವರ 10 ವರ್ಷದ ಆಡಳಿತಾವಧಿಯಲ್ಲಿ ಇಂತಹ ಒಂದೇ ಒಂದು ಘಟನೆ ನಡೆದಿಲ್ಲ. ಐವಾನ್ ಡಿಸೋಜಾ ಅವರ ವಿರುದ್ದ ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಬಂಧಿಸಬೇಕಿತ್ತು ಎಂದು ಆಗ್ರಹಿಸಿದರು. 


ಸಚಿವ ಜಮೀರ್ ಅಹಮದ್ ಹೇಳ್ತಾರೆ ರಾಜ್ಯದಲ್ಲಿ ಕಾನೊನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯಪಾಲರೇ ಹೊಣೆ ಅಂತಾರೆ. ಕಾನೂನು ಸುವ್ಯವಸ್ಥೆ ಹದಗೆಡಿಸುತ್ತೇವೆ ನಿಮ್ಮ ಆದೇಶ ಹಿಂಪಡೆಯಿರಿ ಎಂಬ ಒತ್ತಡವಿದೆ. ಅನೇಕ ಸಚಿವರು, ಶಾಸಕರು ಬೆದರಿಕೆಯೊಡ್ಡುವ ಹೇಳಿಕೆ ನೀಡ್ತಿದ್ದಾರೆ. ರಾಜ್ಯಪಾಲರು ದಲಿತರು ಎನ್ನುವ ಕಾರಣಕ್ಕೆ ಈ ರೀತಿ ಮಾತನಾಡ್ತಿದ್ದಾರೆ ಅನಿಸುತ್ತಿದೆ.ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ ಎಂದರು. 

ಐವಾನ್ ಅಲ್ಲ ಆತ ಹೈವಾನ್-ಈಶ್ವರಪ್ಪ ಕಿಡಿ



ಸುದ್ದಿಲೈವ್/ಶಿವಮೊಗ್ಗ


ಐವಾನ್ ಅಲ್ಲ ಹೈವಾನ್ ಡಿಸೋಜ ಎಂದು ಎಂಎಲ್ ಸಿ ಐವಾನ್ ಡಿಸೋಜರ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೇಶಕ್ಕಾಗಿ ಸ್ವಾತಂತ್ರ್ಯ ತರುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರವಹಿಸಿದೆ. ಈ ಪಕ್ಷದ ಎಂಎಲ್ ಸಿ ಹೈವಾನ್ ಡಿಸೋಜಾ ತಮ್ಮ ಪಕ್ಷಕ್ಕೆ ಮಸಿಬಳಿದಿದ್ದಾರೆ. ರಾಹುಲ್ ಗಾಂಧಿ ಮತ್ತಿತರ ನಾಯಕರು ಇದನ್ನ ಇದುವರೆಗೂ ಖಂಡಿಸಿಲ್ಲವೆಂದು ಕಿಡಿಕಾರಿದರು. 


ಇಡೀ ದೇಶದ ನಾಯಕರನ್ನ ತಲೆ ತಗ್ಗಿಸುವ ಪ್ರಯತ್ನವನ್ನ ಐವಾನ್ ಮಾಡಿದ್ದಾರೆ. ಅವರನ್ನ ಎಂ ಎಲ್ ಸಿ ಸ್ಥಾನ ಕಿತ್ತು ಹಾಕಬೇಕಿತ್ತು. ರಾಷ್ಟ್ರದ್ರೋಹ ಪ್ರಕರಣದಲ್ಲಿ ಅವರನ್ನ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.‌


ಈ ದೇಶ ಎಲ್ಲರನ್ನೂ ಸಹಿಷ್ಣುತೆ ಮೆರೆದಿದೆ. ಬಾಂಗ್ಲಾದಲ್ಲಿ ಹಿಂದೂಗಳು  ಪ್ರತಿಭಟನೆ ನಡೆಸಿದ್ದಾರೆ. ಅಲ್ಲಿ ಯಾವ ದಂಗೆ ಏಳಲಿಲ್ಲ. ಈಗಿನ ಬಾಂಗ್ಲಾ ಪ್ರಧಾನಿ ಹಿಂದೂಗಳ ಕ್ಷಮೆಕೇಳಿದ್ದಾರೆ. ಆದರೆ ಹೈವಾನ್ ಬಾಂಗ್ಲಾ ದಂಗೆಯನ್ನ ಅಧಿಕಾರ ಉಳಿಸಿಕೊಳ್ಳಲು ಹೇಳಿಕೆ ಕೊಡುತ್ತಿದ್ದಾರೆ. 


ಯಾರು ಬಾಂಗ್ಲಾ ದಂಗೆ ಪರ ಮಾತನಾಡಿ ದೇಶಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸಲಿದೆ  ಎನ್ನತಾರೋ ಅವರೆಲ್ಲ ದೇಶದ್ರೋಹಿಗಳು ಕೃಷ್ಣ ಬೈರೇಗೌಡರೂ ಸೇರಿದಂತೆ ಎಂದು ಕಿಡಿಕಾರಿದರು. 


ಬಾಂಗ್ಲಾದಲ್ಲಿ ಕ್ರಿಶ್ಚಿಯನ್, ಬೌಧ್ಧ, ಹಿಂದೂ ಸಿಖ್ ಸಾಯಿಗಳಾದ ಅಲ್ಲಿನ ಅಲ್ಪ ಸಂಖ್ಯಾತರ ಮೇಲೆ ಅತ್ಯಾಚಾರ, ಹಿಂಸೆ ಮಾಡಲಾಗಿದೆ. ಇಂತಹ ಕೃತ್ಯವನ್ನ ಭಾರತದಲ್ಲಿ ಮಾಡಲಾಗುವುದು ಎಂದು ಹೇಳಿರುವ ಐವಾನ್ ಡಿಸೋಜಾರನ್ನ ಪಕ್ಷದಿಂದ ವಜಾಗೊಳಿಸಬೇಕು ಎಂದರು. 

ಮಂಗಳವಾರ, ಆಗಸ್ಟ್ 20, 2024

ಸಾಗರ ಯುವ ಕಾಂಗ್ರೆಸ್ ಹೊಸ ಭಾಷ್ಯ ಬರೆಯಲಿ-ಬ್ರಾಹ್ಮಣರನ್ನೂ ಪುರಸ್ಕರಿಸಲಿ

 


ಸುದ್ದಿಲೈವ್/ಸಾಗರ 


ರಾಜ್ಯಾದ್ಯಂತ ನಡೆಯಲಿರುವ ತಾಲ್ಲೂಕು ಯುವ ಕಾಂಗ್ರೇಸ್ ಘಟಕದ ಚುನಾವಣೆ ಇನ್ನೇನು ಒಂದು ಒಂದೂವರೆ ತಿಂಗಳಲ್ಲಿ ನಡೆಯಲಿದೆ.


ಇದಕ್ಕೆ ಈಗಾಗಲೇ ಸಾಗರ ತಾಲ್ಲೂಕಿನ ಸ್ಪರ್ಧಿಗಳಾಗಿ ಇರುವವರು ಮಂಜುನಾಥ ಬೆಳಲಮಕ್ಕಿ, ಸಿ.ಎಂ. ಚಿನ್ಮಯ, ಸದ್ದಾಂ ಹುಸೇನ್ ಮತ್ತು ಕಿರಣ್ ದೊಡ್ಮನೆ, ಸದ್ದಾಂ‌ದೊಡ್ಮನೆ ಐದು ಜನರು ಕಾಂಗ್ರೇಸ್ ಪಕ್ಷಕ್ಕೆ ‌ಸಕ್ರಿಯ ಕಾರ್ಯಕರ್ತರು. ಎಂದೂ ಸಹ ತೆರೆಮರೆಯಲ್ಲೇ ಪಕ್ಷದ ಕೆಲಸ ಮಾಡುತ್ತ ಬಂದಿದ್ದಾರೆ.


ಈಗೇಕೆ ಈ ವಿಷಯ....ಇದರಲ್ಲೇ ಇರುವುದು ರಾಜಕೀಯ ದಾಳ ಉರುಳಿಸುವ ತಂತ್ರಗಾರಿಕೆ. ಈ ಹಿಂದೆ ಸಾಗರದಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದಿದ್ದ ಸಂದರ್ಭದಲ್ಲಿ ಈಗಿನ ಶಾಸಕರ ಕುಟುಂಬದವರಾದ ಅಶೋಕ ಬೇಳೂರು ಯುವ ಕಾಂಗ್ರೇಸ್ ಅಧ್ಯಕ್ಷ ಆಗಿದ್ದರು. ‌ಆ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಗ್ರಾಮಾಂತರ ಭಾಗದಲ್ಲಿ ಹಗಲಿರುಳು ತನ್ನದೇ ರೀತಿಯಲ್ಲಿ ಹಲವರ ಸಹಕಾರದಿಂದ ಓಡಾಟ ಮಾಡಿ ಪಕ್ಷ ಕಟ್ಟಿದರು. ಹೆಚ್ಚಿಗೆ ಪ್ರಚಾರ ಪಡೆಯದೇ ಇದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹುತೇಕ ಕಾಂಗ್ರೇಸ್ ಅಭ್ಯರ್ಥಿಗಳು ಗೆದ್ದಿದ್ದರು. ಟೌನ್'ಗೆ ಕಾಲಿಡುವಲ್ಲಿ ಸ್ವಲ್ಪ ನಿಧಾನಿಸಿದರೆಂಬ ಮಾತು ಇದೆ.


ಈಗ ಮತ್ತೆ ಅದೇ ಚುನಾವಣೆ ಹೊಸ್ತಿಲಲ್ಲಿ ಇದೆ. ಮತ್ತೆ ಮಂಜುನಾಥ ಬೆಳಲಮಕ್ಕಿ, ಕಿರಣ್ ದೊಡ್ಮನೆ ಧೀವರ ಸಮುದಾಯಕ್ಕೆ ಸೇರಿದವರಾಗಿದ್ದು ಶಾಸಕರ ಸಹಕಾರ ಕೋರಿದ್ದಾರೆ. ಇನ್ನೂ ಸದ್ದಾಂ ಹುಸೇನ್, ಸದ್ದಾಂ ದೊಡ್ಮನೆ, ಮುಸ್ಲಿಂ ಸಮುದಾಯದರಾಗಿದ್ದು ಅವರು ಸಹ ಸುಮ್ಮನೆ ಕೂತಿಲ್ಲ.


ಕಾಂಗ್ರೇಸ್ ‌ಪಕ್ಣದಲ್ಲಿ ಬ್ರಾಹ್ಮಣರಿಗೆ ಸ್ಥಾನಮಾನಗಳು ಕಡಿಮೆ ಇದೆ. ಇಡೀ ತಾಲ್ಲೂಕಿನಲ್ಲಿ‌ ಧೀವರ ಸಮುದಾಯ ಬಿಟ್ಟರೆ ಎರಡನೇ ಅತೀ ದೊಡ್ಡ ಸಮುದಾಯ ಬ್ರಾಹ್ಮಣರದ್ದು, ಬಿ.ಆರ್. ಜಯಂತ್ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಪೂರ್ಣಾವಧಿ ಕಾರ್ಯ ಮುಗಿಸಿದ್ದಾರೆ. ಇನ್ನೂ ಐ.ಎನ್. ಸುರೇಶ್'ಬಾಬು ರನ್ನಿಂಗ್ ನಲ್ಲಿರುವ ಸಾಗರ ನಗರ ಘಟಕದ ಅಧ್ಯಕ್ಷರು. 


ಹೀಗೆ ಬೆರಳೆಣಿಕೆಯ ಬ್ರಾಹ್ಮಣರನ್ನು ಮಾತ್ರ ಪಕ್ಷದಲ್ಲಿ‌ ಇಟ್ಟುಕೊಂಡಿರುವ ಕಾಂಗ್ರೆಸ್ ಈ ಬಾರಿಯ ಯುವ ಘಟಕದ ಕಾಂಗ್ರೆಸ್ ಅಧ್ಯಕ್ಣ ಸ್ಥಾನ ಬ್ರಾಹ್ಮಣರಿಗೇಕೆ ನೀಡಬಾರದು. ಈಗಿನ ಕ್ಯಾಂಡಿಡೇಟ್ ಚಿನ್ಮಯ್ ಸಿ.ಎಂ. ಎಲ್ಲರೂ ತಿಳಿದಿರುವಂತೆ ಕಾಂಗ್ರೆಸ್ ನಿಷ್ಠ, ವಿದ್ಯಾರ್ಥಿ‌ದೆಸೆಯಲ್ಲೆ ಕಾಂಗ್ರೆಸ್ ಪರ ಯಾರೂ ಇಲ್ಲದಿದ್ದರೂ ಇದೇ ಗೋಪಾಲಕೃಷ್ಣ ಬೇಳೂರು ಶಾಸಕರಗದೇ ಇದ್ದ ಕಾಲದಲ್ಲೂ ಅವರ ಬಾಲ ಹಿಡಿದುಕೊಂಡೇ ಓಡಾಡಿದ ಹುಡುಗ. ಪಕ್ಷಕ್ಕಾಗಿ ಎಲ್ಲೂ ಫೋಟೋಶೂಟ್'ಗೆ ನಿಲ್ಲದೇ ಸಂಘಟನೆ ಮಾಡಬಲ್ಲ ಶಕ್ತಿ ಹೊಂದಿರುವ ಯುವಕ. ಹೇಳಿ ಕೇಳಿ ಬ್ರಾಹ್ಮಣ ಸಮುದಾಯದ ವ್ಯಕ್ತಿ. ಬ್ರಾಹ್ಮಣರಿಗೆ ಕಾಂಗ್ರೇಸ್'ನಲ್ಲಿ‌ ಸ್ಥಾನಮಾನ ಇಲ್ಲ‌ ಎನ್ನುವ ಅಪವಾದ ತೊಡೆದು ಹಾಕಲು ಈ ಬಾರಿ ಯುವ ಘಟಕದ ಅಧ್ಯಕ್ಷ ಸ್ಥಾನ ಬ್ರಾಹ್ಮಣರಿಗೆ ನೀಡುವ ಕೆಲಸ ಕಾಂಗ್ರೇಸ್ ಮಾಡಲಿದೆಯೇ ಎಂಬುವುದನ್ನು ಕಾದು ನೋಡಬೇಕು.‌ 


ಇದು ಶಾಸಕರ ಕೈಯ್ಯಲ್ಲೂ ಇದೆ. ಶಾಸಕರು ಮನಸ್ಸು ಮಾಡಿದರೆ ಯುವ ಘಟಕದ ಅಧ್ಯಕ್ಷ ಸ್ಥಾನ ಬ್ರಾಹ್ಮಣ ವ್ಯಕ್ತಿಗೆ ಸಿಗುವುದರಲ್ಲಿ ಯಾವುದೇ ಅನುಮಾನ ಬೇಡ, ಎಲ್ಲಾ ಇರುವುದು ದ ಒನ್ & ಓನ್ಲಿ ಗೋಪಾಲಕೃಷ್ಣ ಬೇಳೂರುರ "ಕೈ" ಯಲ್ಲಿ ಮಾತ್ರ..


*ಈಗಾಗಲೇ ಸಾಗರ-ಹೊಸನಗರ ವಿದಾನಸಭಾ ಕ್ಷೇತ್ರ ಯುವ ಅಧ್ಯಕ್ಷ ಸ್ಥಾನಕ್ಕೆ ಆಶೋಕ ಬೇಳೂರು, ಉಮೇಶ ಬಾಳೆಗುಂಡಿ ಮತ್ತು ಹೊಸನಗರ ಭಾಗದ ಮಹೇಂದ್ರ ಬುಕ್ಕಿವರೆ ಆಕಾಂಕ್ಷಿಗಳಾಗಿದ್ದರು. ಇದರ ನಡುವೆ ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಧ್ಯಸ್ಥಿಕೆ ವಹಿಸಿ ಅಶೋಕ ಬೇಳೂರು ಮತ್ತು ಉಮೇಶ ಬಾಳೆಗುಂಡಿ ಇವರ ಮನವೊಲಿಸಿ ಮಹೇಂದ್ರ ಬುಕ್ಕಿವರೆ ಅವರನ್ನು ಕಣದಲ್ಲಿ ಇರುವಂತೆ ಸೂಚಿಸಿದ್ದು, ಇವರು ಅಸೆಂಬ್ಲಿ ಕ್ಷೇತ್ರಕ್ಕೆ ಅಧ್ಯಕ್ಷರಾಗಲಿದ್ದಾರೆ. ನೋಡಿ ಇಲ್ಲಿಯೂ ಧೀವರಿಗೆ ಮಣೆ ಹಾಕಿದ ಶಾಸಕರ ನಡೆ ಎಲ್ಲರೂ ಗಮನಿಸುತ್ತಿಸ್ದಾರೆ. ಸಾಗರದಲ್ಲಿಯಾದರೂ ಬ್ರಾಹ್ಮಣ ಸಮುದಾಯದ ವ್ಯಕ್ತಿಗೆ ಪ್ರಾಶಸ್ತ್ಯ ನೀಡದಿದ್ದಲ್ಲಿ ಜಾತಿವಾದದ ಗೂಬೆ ಶಾಸಕ ಗೋಪಾಲಕೃಷ್ಣ ಬೇಳೂರರ ತಲೆ ಏರುವುದು ಗ್ಯಾರಂಟಿ ಆಗಬಹುದು.

ಭದ್ರಾವತಿಯಲ್ಲಿ ನಾಳೆ ವಿದ್ಯುತ್ ವ್ಯತ್ಯಯ

 ಭದ್ರಾವತಿಯಲ್ಲಿ-ನಾಳೆ-ವಿದ್ಯುತ್-ವ್ಯತ್ಯಯ


Suddi Live/ಭದ್ರಾವತಿ ಆ.20


ಸಿಗೇಬಾಗಿ 66/11 ವಿದ್ಯುತ್ ವಿತರಣಾ ಕೇಂದ್ರದ ಅಭಿವೃದ್ಧಿ ಕಾಮಗಾರಿಯನ್ನು  ಅ 21 ರ ಬುಧವಾರ ಬೆಳಿಗ್ಗೆ  09 - 30 ರಿಂದ  ಸಂಜೆ 06-00 ಘಂಟೆವರೆಗೆ ಹಮ್ಮಿಕೊಂಡಿದೆ. ಭದ್ರಾವತಿಯ ಉಪವಿಭಾಗ ಘಟಕ - 2 ಘಟಕ -4 ಶಾಖಾವ್ಯಾಪ್ತಿಗೆ  ಒಳಪಡುವ ಈ ಕೆಳಕಂಡ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.


ಹಳೇನಗರ, ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ, ಕಂಚಿಬಾಗಿಲು, ಹಳದಮ್ಮನ ಕೇರಿ, ಖಾಜಿಮೊಹಲ್ಲಾ, ಭೂತನಗುಡಿ , ಹೊಸಮನೆ , ಎನ್. ಎಂ. ಸಿ. ರಸ್ತೆ, ಭೋವಿಕಾಲೋನಿ, ಸಂತೇ ಮೈದಾನ, ಕೇಶವಪುರ, ಬಾಬಳ್ಳಿ ರಸ್ತೆ, ಸತ್ಯಸಾಯಿ ನಗರ, ಶಿವಾಜಿ ವೃತ್ತ, ಹನುಮಂತ ನಗರ, ತಮ್ಮಣ್ಣ ಕಾಲೋನಿ, ಸುಭಾಷ್ ನಗರ, ವಿಜಯ ನಗರ, ,ಕುವೆಂಪು ನಗರ, ನೃಪತುಂಗ ನಗರ, ಸೀಗೇಬಾಗಿ, ಹಳೇ ಸೀಗೇಬಾಗಿ, 


ಅಶ್ವಥ್ಥ್ ನಗರ, ಕಬಳೀಕಟ್ಟೆ, ಭದ್ರಕಾಲೋನಿ, ಕಣಕಟ್ಟೆ, ಚನ್ನಗಿರಿ ರಸ್ತೆ, ಕನಕ ನಗರ, ಗೌರಾಪುರ, ಕೃ. ಉ. ಮಾ. ಸಮಿತಿ (ಎ.ಪಿ.ಎಂ.ಸಿ), ಗಾಂಧಿ ವೃತ್ತ, ಕೋಡಿಹಳ್ಳಿ, ಹೊಸಸೇತುವೆ ರಸ್ತೆ, ಸಿದ್ಧಾರೂಡ ನಗರ, ಶಂಕರಮಠ, ಕನಕ ನಗರ, ಸ್ಮಶಾಣ ಪ್ರದೇಶ, ಕ.ರಾ. ರ. ಸಾ.ನಿ. ಘಟಕ , ಹೊಳೆಹೊನ್ನೂರು ರಸ್ತೆ, ಖಲಂದರ್ ನಗರ,  ಜಟ್ ಪಟ್ ನಗರ, ಅನ್ವರ್ ಕಾಲೋನಿ, ಮೊಮ್ಮಿನ್ ಮೊಹಲ್ಲ, ಅಮೀರ್ ಜಾನ್ ಕಾಲೋನಿ, 


ಮಜ್ಜಿಗೆನ ಹಳ್ಳಿ, ಗೌಡರಹಳ್ಳಿ, ಬಾಬಳ್ಳಿ, ವೀರಾಪುರಾ   ಶ್ರೀ ರಾಮನಗರ ಮತ್ತು ಲಕ್ಷ್ಮೀಪುರ  ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೊರಿದೆ.

ಬಡತನದಲ್ಲಿ ಸಾಧನೆ ಶಿಖರವೇರಿದ ಚಂದ್ರಗುತ್ತಿಯ ಐಶ್ವರ್ಯ: ಸರ್ಕಾರ ಮತ್ತು ದಾನಿಗಳ ನೆರವು ಅಗತ್ಯ

 


ಸುದ್ದಿಲೈವ್/ಸೊರಬ


ತಾಲೂಕಿನ ಚಂದ್ರಗುತ್ತಿಯ ಕಡೆ ಜೋಳದ ಗುಡ್ಡೆ ಎಂಬ ಗ್ರಾಮದಲ್ಲಿ ಬಡ ದಂಪತಿ ವೆಂಕಟೇಶ್ ಮತ್ತು ಮಂಜುಳಾ ಅವರ ಮಗಳು, ಐಶ್ವರ್ಯ, ಅನೇಕ ರಾಜ್ಯಳಲ್ಲಿ ನಡೆದ ಕಾಯಕಿಂಗ್, ಮೌಂಟನೆರಿಂಗ್ ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಿ, ಅನೇಕ ಪದಕಗಳನ್ನು ಗೆದ್ದುಕೊಂಡಿದ್ದಾಳೆ. ಈ ಪ್ರತಿಭಾವಂತ ಕ್ರೀಡಾಪಟುವಿಗೆ ಒಲಂಪಿಕ್ ಕ್ರೀಡೆಯಲ್ಲಿ ಭಾಗವಹಿಸುವ  ತವಕ ಇದ್ದು ತನ್ನ ಸಾಧನೆಯನ್ನು ಮುಂದುವರಿಸಲು ಸರ್ಕಾರ ಮತ್ತು ಸಮಾಜಮುಖಿ ಚಿಂತನೆ ಹೊಂದಿರುವ ದಾನಿಗಳ ನೆರವು ಅತ್ಯಾವಶ್ಯಕವಾಗಿದೆ.


ಈ ಸಮಯದಲ್ಲಿ, ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಮಾಜ ಸೇವಕರಾದ  ಡಾ|| ಜ್ಞಾನೇಶ್ ಹೆಚ್. ಈ. ಅವರು ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದು, ಬಡತನದಲ್ಲಿ ಹುಟ್ಟಿ ಬೆಳೆದ ಐಶ್ವರ್ಯಳಿಗೆ ಬಡತನ ಅಡ್ಡಿಯಾಗಿರಬಹುದು  ಸಾಧಿಸುವ ಛಲ ಇದ್ದಾಗ ಯಾವುದೇರೀತಿಯ ಅಡ್ಡಿ ಆತಂಕಗಳು ದೂರವಾಗುತ್ತದೆ," ಎಂದು ಹೇಳಿದರು. ಅವರು, ಈ ಪ್ರತಿಭಾವಂತೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ, ರಾಜ್ಯಕ್ಕೆ ಮತ್ತು ತಾಲೂಕಿಗೆ ಕೀರ್ತಿಯನ್ನು ತರುತ್ತಾಳೆ," ಎಂದು ಆಶಿಸಿದರು.


ಕ್ರೀಡಾ ಸಾಧನೆಗೆ ಅಗತ್ಯವಿರುವ ನೆರವು ಈ ಪ್ರತಿಭೆಯ ಮುಂದಿನ ಹೆಜ್ಜೆಯನ್ನು ಸಹಸ್ರಗೊಳಿಸಲು  ದಾನಿಗಳು ಮತ್ತು ಸರ್ಕಾರ ಮುಂದಾಗಬೇಕಾಗಿದೆ.

ಐವಾನ್ ಡಿಸೋಜಾ ವಿರುದ್ಧ ಎಸ್ಪಿಗೆ ದೂರು



ಸುದ್ದಿಲೈವ್ /ಶಿವಮೊಗ್ಗ


ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಬಾಂಗ್ಲಾದೇಶ ರೀತಿಯಲ್ಲಿ ಗಲಭೆ ಆಗುತ್ತದೆ ಎಂಬ ಹೇಳಿಕೆ ವಿರುದ್ಧ ಬಿಜೆಪಿ ಜಿಲ್ಲಾ ಯುವಮೋರ್ಚಾ ಜಿಲ್ಲಾರಕ್ಷಣಾಧಿಕಾರಿ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆ ಪಿಐಗೆ ಮನವಿ ಸಲ್ಲಿಸಿದೆ. 


ಶಿವಮೊಗ್ಗದಲ್ಲಿ ಐವನ್ ಡಿಸೋಜ ವಿರುದ್ಧ ದೂರು . ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಗೆ ದೂರು ನೀಡಲಾಗಿದ್ದು, ದೂರು ನೀಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಐವತ್ತಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಎಸ್ಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಲಾಯಿತು.ಹಾಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಯಿತು. 


ಬಾಂಗ್ಲಾ ದೇಶದಲ್ಲಿ ಆದ ಹಿಂಸಾಚಾರದ ಸ್ವರೂಪ ಇಲ್ಲೂ ಆಗುತ್ತದೆ ಎಂಬ ಎಂಎಲ್ ಸಿ ಐವಾನ್ ಡಿಸೋಜ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಯುವ ಮೋರ್ಚಾ ಕಾರ್ಯಕರ್ತರು, ಕೂಡಲೇ ಈ ಬಗ್ಗೆ ಪೊಲೀಸರು ಎಫ್ ಐ ಆರ್ ದಾಖಲು ಮಾಡಿಕೊಂಡು ಐವಾನ್ ಡಿಸೋಜ ಬಂಧಿಸಬೇಕೆಂದು ಒತ್ತಾಯಿಸಿದರು.


ಇದರ ಜೊತೆ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಯಿತು. ಈ ವೇಳೆ ಮಾತನಾಡಿದ ಹರಿಕೃಷ್ಣ ಕೈಯಲ್ಲಿ ಸಂವಿಧಾನ ಹಿಡಿದು ಪರಿಪಾಲಕನಂತೆ ಬಿಂಬಿಸಿಕೊಳ್ಳುವ ರಾಹುಲ್ ಗಾಂಧಿ ಐವನ್ ಹೇಳಿಕೆ ಸಂವಿಧಾನ ಬದ್ದವಾಗಿದೆಯಾ ಅಥವಾ ಇಲ್ಲವಾ ಎಂಬುದನ್ನ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. 


ರಾಷ್ಟ್ರೀಯ ಹಬ್ಬಗಳ ಆಚರಣೆಗಳನ್ನ ನೆಹರೂ ಕ್ರೀಡಾಂಗಣ ಅಥವಾ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಾ? ಶಾಸಕರ ಆಶಾಭಾವನೆ ಏನು?



ಸುದ್ದಿಲೈವ್/ಶಿವಮೊಗ್ಗ


ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯದ ಸಂಭ್ರಮಾಚರಣೆಯನ್ನ ಇನ್ನು ಮುಂದೆ ನೆಹರೂ ಕ್ರೀಡಾಂಗಣ ಅಥವಾ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಆಶಾಭಾವನೆಯನ್ನ ಶಾಸಕ ಚೆನ್ನಬಸಪ್ಪ ವ್ಯಕ್ತಪಡಿಸಿದ್ದಾರೆ. 


ಸುಮಾರು 12 ವರ್ಷಗಳ ಹಿಂದೆ ನೆಹರೂ ಕ್ರೀಡಾಂಗಣದಲ್ಲಿ ನಡೆಯತ್ತಿದ್ದ ರಾಷ್ಟ್ರೀಯ ಹಬ್ಬವನ್ನ ಡಿಎಆರ್ ಮೈದಾನಕ್ಕೆ ಶಿಫ್ಟ್ ಆಗಿತ್ತು. ಆಗ ಸಿಂಥೆಟಿಕ್ ಟ್ರ್ಯಾಕ್ ಇರುವ ಕಾರಣ ಸಂಭ್ರಮಾಚರಣೆಯ ಜಾಗವನ್ನೇ ಬದಲಿಸಲಾಗಿತ್ತು. ಆದರೆ ಈಗ ಸಿಂಥೆಟಿಕ್ ಟ್ರ್ಯಾಕ್ ಇರುವ ಕಡೆ ರಾಷ್ಟ್ರೀಯ ಹಬ್ಬಗಳನ್ನ ನಡೆಸುವ ಬಗ್ಗೆ ಪಾಸಿಟಿವ್ ಮಾತುಗಳು ಕೇಳಿ ಬರುತ್ತಿವೆ. 


ಮೊನ್ನೆ ಪಾಲಿಕೆ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ರಾಷ್ಟ್ರೀಯ ಹಬ್ಬಗಳನ್ನ ನೆಹರೂ ಕ್ರೀಡಾಂಗಣ ಅಥವಾ ಫ್ರೀಡಂ ಪಾರ್ಕ್ ನಲ್ಲಿ ಆಚರಿಸಲು ಅವಕಾಶ ಕಲ್ಪಿಸಬೇಕು ಎಂಬ ಮಾತು ಜನಪ್ರತಿನಿಧಿಗಳಿಂದಲೇ ಕೇಳಿ ಬಂದಿದೆ.  


ಸಚಿವರು ಸಹ ಜನರ ಜೊತೆ ರಾಷ್ಟ್ರೀಯ ಹಬ್ಬ ಆಚರಿಸಬೇಕೆಂಬ ಆಸೆಯನ್ನ ಹೊರಹಾಕಿದ್ದಾರೆ. ಈ ಮೊದಲು ನೆಹರೂ ಕ್ರೀಡಾಂಗಣದಲ್ಲಿ ಸುತ್ತಲೂ ವಿದ್ಯಾರ್ಥಿಗಳು ಕುಳಿತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಗತಕಾಲ ಮರುಕಳಿಸುವ ಆಶಾಭಾವನೆ ಹೊರಬಿದ್ದಿದೆ. ಆದರೆ ಡಿಎಆರ್ ಮೈದಾನದಲ್ಲಿ ಈ ಸೊಬಗು ಕಣ್ಮರೆಯಾಗಿದೆ. 


ಸಚಿವರ ಮತ್ತು ಶಾಸಕರ ಮಾತುಗಳಿಂದ ಕಳೆದು ಹೋದ ರಾಷ್ಟ್ರೀಯ ಹಬ್ಬಗಳ ವೈಭವ ಮತ್ತೆ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಇಂದು ಶಾಸಕರ ಸುದ್ದಿಗೋಷ್ಠಿಯಲ್ಲೂ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ‌ ಪಾಲಿಕೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಸಿಟಿವ್ ಮಾತನಾಡಿದ್ದಾರೆ. ಕಾದು ನೋಡೋಣ ಎಂದಿದ್ದಾರೆ. 

ಗಣಪತಿ ಹಾಗೂ ಈದ್ ಮೆರವಣಿಗೆ ನಡೆಯೋದು ಯಾವಾಗ? ಈ ಕುರಿತು ಶಾಸಕರ ಹೇಳಿಕೆ ಏನು?



ಸುದ್ದಿಲೈವ್/ಶಿವಮೊಗ್ಗ


ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮಹೋತ್ಸವ ಮತ್ತು ಈದ್ ಹಬ್ಬದ ಮೆರವಣಿಗೆ ಬಹುತೇಕ ಒಟ್ಟಿಗೆ ಬಂದಿದ್ದು ಈ ಬಾರಿಯೂ ಏನಾಗಲಿದೆ ಎಂಬ ಕುತೂಹಲ ಆರಂಭವಾಗಿದೆ.  


ಕಳೆದ ವರ್ಷ ಈದ್ ಮೆರವಣೆಗೆಯ ವೇಳೆ ರಾಗಿಗುಡ್ಡದಲ್ಲಿ ಅವಘಡ ಸಂಭವಿಸಿತ್ತು. ಈ ಹಿನ್ನಲೆಯಲ್ಲಿ ಮೆರವಣೆಗೆಗಳು ಏನಾಗಲಿದೆ ಎಂಬ ಕುತೂಹಲಕ್ಕೆ ಇಂದು ನಡೆದ ಶಾಸಕ ಚೆನ್ನಬಸಪ್ಪನವರ ಸುದ್ದಿಗೋಷ್ಠಿಯಲ್ಲೂ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕ ಚೆನ್ನಬಸಪ್ಪ ಪೊಲೀಸ್ ಅಧಿಕಾರಿಗಳ ಜೊತೆಯ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ. 


ಈ ಬಾರಿಯ ಮೆರವಣಿಗೆಗಳು ಅದಕ್ಕೆ ಸಿದ್ದತೆಗಳು ನಡೆಯಬೇಕಿದೆ. ಆಚರಣೆಯ ಬಗ್ಗೆ ಡಿವೈಎಸ್ಪಿ ಬಳಿ ಮಾತುಕತೆ ನಡೆಯುತ್ತಿದೆ. ಯಾವುದೂ ಫೈನಲ್ ಆಗಿಲ್ಲ.‌ಆಚರಣೆಗೆ ಇನ್ನೂ ದಿನಗಳಿವೆ ಎಂದರು.‌

ಸಿದ್ದರಾಮಯ್ಯ ಆರೋಪ ಮುಕ್ತರಾಗಿ ಬರಲಿ ನಾವು ಕಾಲು ತೊಳೆಯುತ್ತೇವೆ-ಬಿಜೆಪಿ ಶಾಸಕ ಚೆನ್ನಬಸಪ್ಪ

 


ಸುದ್ದಿಲೈವ್/ಶಿವಮೊಗ್ಗ

 

ಪ್ರಜಾಪ್ರಭುತ್ವದ ಬುಡವನ್ನೇ ಕಾಂಗ್ರೆಸ್ ಅಲುಗಾಡಿಸಲು ಹೊರಟಿದ್ದಾರೆ. ಸಂಯಮವಾಗಿ ಸಂವಿಧಾನದ ಅಡಿಯಲ್ಲಿ ಹೋರಾಟ ಮಾಡಬೇಕಿದ್ದ ಕಾಂಗ್ರೆಸ್ ದಾಷ್ಟ್ಯರ ರೀತಿ ಮುನ್ನುಗ್ಗುತ್ತಿದೆ ಎಂದು ಶಾಸಕ ಚೆನ್ನ ಬಸಪ್ಪ ಆತಂಕ ವ್ಯಕ್ತಪಡಿಸಿದರು.


ಸುದ್ದಿಗೋಷ್ಠಿ ನಡೆಸಿದ ಅವರು ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರಶ್ನಿಸ ಬೇಕಿದ್ದ ಕಾಂಗ್ರೆಸ್ ತಾನು ಹೇಳಿದ್ದೇ ಅಂಬೇಡ್ಕರ್ ಕಾನೂನು ಎಂಬಂತೆ ಬಿಂಬಿಸುತ್ತಿದೆ. ರಾಜ್ಯಪಾಲರನ್ನ ಅವಮಾನಿಸಲಾಗಿದೆ. ಐವಾನ್ ಡಿಸೋಜರ ವಾಗ್ದಾಳಿ ಅಚ್ಚರಿ ಮೂಡಿಸಿದೆ. 


ಅವರು ಐವಾನ್ ಅಲ್ಲ ಹೈವಾನ್ ಡಿಸೋಜ ಎಂದು ಕರೆದ ಶಾಸಕರು ಬಾಂಗ್ಲಾ ರೀತಿಯಲ್ಲಿ ರಾಜ್ಯಪಾಲರ ಮೇಲೆ ದಾಳಿ ನಡೆಸಲಾಗುವುದು ಎಂಬ ಅವರ ಹೇಳಿಕೆ ಆತಂಕ ಮೂಡಿಸುತ್ತದೆ.  ರಾಜ್ಯದಲ್ಲಿ ಕಾನೂನು ಅಸ್ಥಿತ್ವದಲ್ಲಿ ಇದೆಯೋ ಇಲ್ಲೆವೋ. ಕಾನೂನು ಸುವ್ಯವಸ್ಥೆ ಇದ್ದರೆ ಮೊದಲು ಬಂಧಿಸಿ ಎಂದು ಆಗ್ರಹಿಸಿದರು. 


ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಖಾಸಗಿ ಬಸ್ ಜಖಂಗೊಳಿಸಲಾಗಿದೆ.  ಹಾಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತುಹೋಗಿದೆ. ಹೋರಾಟ ಪ್ರಜಾಪ್ರಭುತ್ವದಲ್ಲಿ ಸಿಕ್ಕ ಹಕ್ಕು. ಆದರೆ ಅದನ್ನ ಹೇಗಾಯಿತೋ ಹಾಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು. ಯಾರು ಯಾರ  ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದಾಗ ಅವರೆಲ್ಲ ಹೇಗೆ ನಡೆದುಕೊಂಡರು ಎಂಬುದನ್ನ‌ ವಿವರಿಸಿದರು. 


ಸಿದ್ದರಾಮಯ್ಯ ಎಲ್ಲಿ ಉತ್ತರ ಕೊಡಬೇಕಿತ್ತೋ ಅಲ್ಲಿ ಕೊಡಲಿಲ್ಲ. ಸದನದಿಂದ ಓಡಿ ಹೋದರು. ಹಾಗಾಗಿ ನಮಗೆ ಈ ಪ್ರಕರಣದಲ್ಲಿ ಅನುಮಾನ ಹುಟ್ಟಿದೆ. ಯಾರು ನಿಮಗೆ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ ಗೊತ್ತಿಲ್ಲ. ರಾಜ್ಯ ಪಾಲರ ನಡೆ ಸ್ವಾಗತಾರ್ಹ ನಡೆ. ಅವರು ಏಕಾಏಕಿ ಪ್ರಾಸಿಕ್ಯೂಷನ್ ನೀಡಿಲ್ಲ. ರಾಜ್ಯಪಾಲರು ಸರ್ಕಾರದ ಭಾಗವಾಗಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವಾಗ‌ ಒಳ್ಳೆಯವರಾಗಿದ್ದ  ರಾಜ್ಯಪಾಲರು ಮಾಡಬಾರದ ಕೆಲಸ ಮಾಡುವಾಗ ಪ್ರಾಸಿಕ್ಯೂಷನ್ ಗೆ ನೀಡಿದಾಗ ಕೆಟ್ಟವರಾಗುತ್ತಾರಾ? ಎಂದು ಕೇಳಿದರು.


ಸಿದ್ದರಾಮಯ್ಯ ನಿರಪರಾಧಿ ಎಂದ ಮೇಲೆ ಭಯವೇಕೆ. ಅವರು ಆರೋಪ ಮುಕ್ತರಾಗಿ ಬರಲಿ ನಾವು ಪಾದ ತೊಳೆಯುತ್ತೇವೆ. ಹೊಸ ಶಾಸಕರಿಗೆ ಮೂರು ಮೂರು ದಿನ ಪಾಠ ಮಾಡಿದ ಕೃಷ್ಣೇಭೈರೇಗೌಡರು ರಾಜ್ಯಪಾಲರ ವಿರುದ್ಧ ಅವಾಚ್ಯ‌ಶಬ್ದ ಬಳಕೆ ಮಾಡುತ್ತಾರೆ. ಇದು ಯಾವ ರೀತಿಯ ನಡತೆ ಎಂದು ದೂರಿದರು. 


ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನವನ್ನ ಬಿಜೆಪಿ ಮಾಡಿಲ್ಲ. 136 ಜನ ಕಾಂಗ್ರೆಸ್ ಶಾಸಕ ಅಧಿಕಾರದಲ್ಲಿದೆ. ಸಿದ್ದರಾಮಯ್ಯ ಇಲ್ಲವೆಂದರೆ ಅವರ ಜಾಗಕ್ಕೆ ಬೇರೆ ಅವರು ಬಂದು ಆಡಳಿತ ನಡೆಸುತ್ತಾರೆ. ಹಿಂದುಳಿದ ವರ್ಗಗಳ ಚಾಂಪಿಯನ್ ಎನಿಸಿಕೊಳ್ಳುವ ಸಿದ್ದರಾನಯ್ಯ 1093 ಸಮುದಾಯ ಭವನ, ಹಾಸ್ಟೆಲ್ ಗಳಿಗೆ ಬಿಜೆಪಿ ಬಿಡುಗಡೆ ಮಾಡಿದ ಅನುದಾನಗಳನ್ನ  ತಡೆ ಹಿಡಿದಿದ್ದಾರೆ. 


ತಡೆಹಿಡಿದ ಆದೇಶವನ್ನ ಸಂಪೂರ್ಣ ರದ್ದು ಮಾಡಿ 300 ಕೋಟಿ ಹಣ ವಾಪಾಸ್ ಪಡೆದಿದ್ದಾರೆ. ಸಣ್ಣ ಸಣ್ಣ ಸಮುದಾಯಗಳನ್ನ ಗುರುತಿಸಿ 10 ಲಕ್ಷ ರೂ.ಗಳಿಂದ ಕೋಟಿಗಟ್ಟಲೆ ಹಣ ಅನುದಾನ ನೀಡಲಾಗಿತ್ತು. ಅದನ್ನ ಸಂಪೂರ್ಣ ರದ್ದು ಮಾಡಿದ್ದೀರಿ. ಶಿವಮೊಗ್ಗದ ವಿದ್ಯಾರ್ಥಿ ನಿಲಯಗಳು ಸೇರಿ 99  ಸಮುದಾಯ ಭವನಗಳಿಗೆ ನೀಡಿದ ಹಣ ರದ್ದಾಗಿದೆ. 


ಇದು ಅನಾಗರೀಕ ವರ್ತನೆ. ಸಮುದಾಯಗಳಿಗೆ ಶಕ್ತಿ ನೀಡುವ ಜಾಗದಲ್ಲಿ ತಡೆಹಿಡಿದು ನಂತರ ರದ್ದು ಮಾಡಿದ್ದೇಕೆ? ಆ ಸಮಾಜವನ್ನ ಕಟ್ಟಿಕೊಂಡು ಬಿಹೆಪಿ ಹೋರಾಟ ಮಾಡಲಿದೆ. ಸರ್ಕಾರ ಪಾಪರ್ ಎದ್ದು ಹೋಗಿದೆ. ಗ್ಯಾರೆಂಟಿ ಗಾಗಿ ಹಣವನನ್ನ ಹೊಂದಿಸಿಕೊಳ್ಳುವ ಪ್ರಯತ್ನ ಮಾಡಿದ್ದೀರಿ ಎಂದು ತಿಳಿದಿದ್ದಿವಿ ಅದನ್ನೂ ಗಾಳಿಗೆ ತೂರಿದ್ದೀರಿ ಎಂದು ಗುಡುಗಿದರು. 


ದೇವರಾಜ್ ಅರಸ್ ಅಭಿವೃದ್ಧಿ ಒಕ್ಕಲಿಗ ಅಭಿವೃದ್ಧಿ ನಿಗಮ ವೀರಶೈವ ಅಭಿವೃದ್ಧಿ ನಿಗಮ, ಸೇರಿದ ಹಲವು ನಿಗಮಗಳಿಗೆ ಹಣ ನೀಡೇ ಇಲ್ಲ.  ಹೋಗಲಿ ರದ್ದು ಮಾಡುದ್ರಿ ಯಾವುದಾದರೂ ಹೊಸ ನಿಗಮಗಳಿಗೆ ನಾಲ್ಕಾಣೆ ನೀಡುದ್ರಾ ಎಂದು ಪ್ರಶ್ನಿಸಿದ ಶಾಸಕರು ಸುಖಾಸುಮ್ಮನೆ ಹಿಂದುಳಿದ ವರ್ಗಗಳ ವಿರೋಧಿ ಎಂದು ಯಾಕೆ ಬಿಜೆಪಿಯನ್ನ ದೂರುತ್ತೀರಿ. ನಿಮ್ಮ ಸಾಧನೆ ಏನು ಹೇಳಿ ಎಂದು ಪ್ರಶ್ನಿಸಿದರು. 


ಕಾಂಗ್ರೆಸ್ ಹೈಕಮಾಂಡ್ ಗೆ ಕಿಂಚಿತ್ತು ಸ್ವಾಭಿಮಾನವಿಲ್ಲ. ಯಾಕೆ ಸಿದ್ದರಾಮಯ್ಯನವರ ಸರ್ಕಾರ ಬೇಕು? ಕಾಂಗ್ರೆಸ್ ನಲ್ಲಿ ಯಾರೂ ನಾಯಕರಿಲ್ವಾ? ಅವರ ಹೈಕಮಾಂಡ್ ಮೇಲಿಂದ ಕೆಳಗೆ ಓಡಿ ಬಂದಿದೆ. ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.


ನ್ಯಾಯಾಲಯ 10 ದಿನ ಕಾಲಕೊಟ್ಟಿದ್ದು ಯೋಚಿಸಿ ರಾಜೀನಾಮೆ ನೀಡಿ ಬನ್ನಿ ಎಂದು ನನಗೆ ಅನಿಸುತ್ತಿದೆ. 10 ದಿನಗಮದ ಒಳಗೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ.  ನಿಮ್ಮ‌ಮೂಗಿನ ಅಡಿ ನಡೆದ ಅನೇಕ ಘಟನೆಗಳು ಆತಂಕ ಹುಟ್ಟಿಸುತ್ತದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ಬೇರೆ ರಾಜ್ಯದ ಚುನಾವಣೆ ಜಾಹೀರಾತು ನೀಡಿದ್ದೂರಿ. ಇದು ಭ್ರಷ್ಠಾಚಾರದ ಪರಮಾವಧಿ ಎಂದು ಬಣ್ಣಿಸಿದರು‌ 


ಬಿಜೆಪಿ ಸಗಣಿ ತಿಂದಿದ್ದಕ್ಕೆ ಕಾಂಗ್ರೆಸ್ ಗೆ ಅಧಿಕಾರ ಬಂತು. ಬಿಜೆಪಿ ಭ್ರಷ್ಠಾಚಾರ ನಡೆಸಿಲ್ಲವಾ ಎಂದು ಕೇಳುವ ಕಾಂಗ್ರೆಸ್ ನೀವು ಸರಿಯಾದ ದಾರಿಯಲ್ಲಿ ನಡೆಯುತ್ತಿಲ್ಲ ಎಂದಿದ್ದಕ್ಕೆ ಪ್ರಾಸಿಕ್ಯೂಷನ್ ಗೆ ನೀಡಲಾಗಿದೆ. ಕುಮಾರ್ ಸ್ವಾಮಿಗೂ ಪ್ರಾಸಿಕ್ಯೂಷನ್ ಗೆ ಕೊಡಿ,  ಯಾರು ತಡೆದವರು ನಿಮ್ಮನ್ನ ಎಂದು ಗುಡುಗಿದರು. 


ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ನಾಗರಾಜ್, ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

ಸೋಮವಾರ, ಆಗಸ್ಟ್ 19, 2024

ರೇಣುಕಾಂಬ ದೇಗುಲಕ್ಕೆ ಭಕ್ತರ ದಂಡು-ಶ್ರಾವಣ ನೂಲು ಹುಣ್ಣಿಮೆಯ ವಿಶೇಷ ಪೂಜೆ

 


ಸುದ್ದಿಲೈವ್/ಸೊರಬ


ಶ್ರಾವಣ ಮಾಸದ ನೂಲು ಹುಣ್ಣಿಮೆಯ ಪ್ರಯುಕ್ತ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತಾದಿಗಳು ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ಮಲೆನಾಡಿನ ಆರಾಧ್ಯ ಶಕ್ತಿ ದೇವತೆಯಾದ ಶ್ರೀ ರೇಣುಕಾಂಬೆಯ ದರ್ಶನ ಪಡೆಯಲು ಶಿವಮೊಗ್ಗ ಸೇರಿದಂತೆ ವಿವಿಧ ಹೊರಜಿಲ್ಲೆಗಳಿಂದ ಭಕ್ತರು ದೇವಳಕ್ಕೆ ಬಂದು 'ಉದೋ ಉದೋ' ಎನ್ನುವ ಗೋಶದೊಂದಿಗೆ ಭಕ್ತಿ ಸಮರ್ಪಿಸಿದರು. 


ವಿಶೇಷ ಪೂಜೆಯಲ್ಲಿ ಪರಿವಾರ ದೇವತೆಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರುಶುರಾಮ, ತ್ರಿಶೂಲ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವರ ಹೆಸರಿನಲ್ಲಿ ಧಾರ್ಮಿಕ ಸೇವೆ ಹಾಗೂ ಹರಕೆಗಳನ್ನು ಅರ್ಪಿಸಿದರು.


ತೀವ್ರ ಮಳೆಯಿಂದಾಗಿ ಸ್ವಲ್ಪಕಾಲ ಭಕ್ತರಿಗೆ ತೊಂದರೆ ಉಂಟಾದರೂ, ಭಕ್ತರ ಸಂಖ್ಯೆ ಕಡಿಮೆಯಾಗದೆ, ದೇವಾಲಯದ ವಾತಾವರಣ ಭಕ್ತಿಮಯವಾಗಿ ಕಂಗೊಳಿಸಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ, ರಥ ಬೀದಿಯಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಜೋರಾಗಿಯೇ ನಡೆಯಿತು. 


ಪೊಲೀಸ್ ಇಲಾಖೆಯಿಂದ ಭಕ್ತರ ಸುರಕ್ಷತೆಗಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು, ಭಕ್ತರ ದರ್ಶನ ಶಾಂತಿಯುತವಾಗಿ ನೆರವೇರಿತು.


ವರದಿ ಮಧು ರಾಮ್  ಸೊರಬ

ಬೆಳ್ಳಂಬೆಳಿಗ್ಗೆ ಶಾಸಕ ಚೆನ್ನಬಸಪ್ಪರಿಂದ ಸಿಟಿ ರೌಂಡ್ಸ್



ಸುದ್ದಿಲೈವ್/ಶಿವಮೊಗ್ಗ 


ಶಿವಮೊಗ್ಗದಲ್ಲಿ ದಿಡೀರ್ ಎಂದು ಕುಡಿಯುವ ನೀರಿನ ಬಗ್ಗೆ ಸಮಸ್ಯೆಗಳು ಉದ್ಭವಿಸಿದೆ. ಕೆಲ ಮನೆಗಳಿಗೆ ಕುಡಿಯುವ ನೀರು ಹೆಚ್ಚಿನ ಫೋರ್ಸ್ ಆಗಿ ಬರುತ್ತಿಲ್ಲವೆಂದು ದೂರಿದರೆ, ಕೆಲ ಬಡಾವಣೆಗಳಲ್ಲಿ ಇನ್ನೂ ಕುಡಿಯುವ ನೀರು ಮನೆಗಳಿಗೆ ಬರ್ತಾಯಿಲ್ಲ. 


ಈ ಬಗ್ಗೆ ಬೆಳ್ಳಂಬೆಳಿಗ್ಗೆ ಶಾಸಕ ಚೆನ್ನಬಸಪ್ಪ ನಗರ ರೌಂಡ್ಸ್ ಮಾಡಿದ್ದಾರೆ.   ನಗರದ ಬಿ.ಬಿ ರಸ್ತೆ ಹಾಗೂ ಕುಂಬಾರಕೇರಿಯ ಬಡಾವಣೆಗಳಿಗೆ ಜಲಮಂಡಳಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಥಳೀಯರ ಸಮಸ್ಯೆಗಳನ್ನುಆಲಿಸಿ ಕೂಡಲೇ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.


ಬಿಬಿ ರಸ್ತೆಯಲ್ಲಿ ಒಂದು ಕಡೆ 9 ಮನೆಗಳಿಗೆ ಮತ್ತು ಒಂದು ಲೈನ್ ಮನೆಗಳಿಗೆ  ಈ ಹಿಂದೆ ಕುಡಿಯುವ ನೀರನ್ನ ಮೈನ್ ವಾಲ್ ಗಳಿಂದ ನೀಡುತ್ತಿದ್ದರಿಂದ ಹೆಚ್ಚಿನ‌ಫೋರ್ಸ್ ನಲ್ಲಿ ನೀರು ಮನೆಗಳಿಗೆ ತಲುಪುತ್ತಿತ್ತು. ಆದರೆ ಈಗ ಈ ಮನೆಗಳಿಗೆ 24×7 ರ ಅಡಿಯಲ್ಲಿ ಟ್ಯಾಂಕ್ ಮೂಲಕ ನೀರು ಬರುತ್ತಿರುವುದರಿಂದ  ಹೆಚ್ಚಿನ ಫೋರ್ಸ್ ನಲ್ಲಿ ಬರುತ್ತಿಲ್ಲ ಎಂಬುದು ಸ್ಥಳೀಯರ ದೂರಾಗಿದೆ. 


ಈ ಬಗ್ಗೆ ಗಮನ ಹರಿಸಿ ಆ.22 ರ ಒಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಲಾಗಿದೆ.

ಕಟ್ಟಡ ಕಾರ್ಮಿಕರ ಹಕ್ಕೊತ್ತಾಯದ ಬೃಹತ್ ಬೈಕ್ ರ್ಯಾಲಿ



ಸುದ್ದಿಲೈವ್/ಶಿವಮೊಗ್ಗ


ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಶಿವಮೊಗ್ಗ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು. ನಂತರ  ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರನ್ನ, ಜಿಲ್ಲಾಧಿಕಾರಿಗಳನ್ನ  ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.‌ 


ಅಶೋಕ ವೃತ್ತ, ಶಿವಪ್ಪನಾಯಕ ವೃತ್ತ, ಎಮ್ಆರ್ ಎಸ್, ಬೈಪಾಸ್ ರಸ್ತೆ, ಮಂಡ್ಲಿ, ಗೋಪಾಳ, ಆಲ್ಕೊಳ ವೃತ್ತ, ವಿನೋಬ ನಗರ, ಉಷಾ ನರ್ಸಿಂಗ್ ಹೋಂ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ದುರ್ಗಿಗುಡಿ, ಗೋಪಿ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ.  ಶಿವಮೊಗ್ಗ ಜಿಲ್ಲೆಗೆ ಅಂತರ ರಾಜ್ಯದಿಂದ ಕಾರ್ಮಿಕ ಕೆಲಸಕ್ಕೆ ಎಂದು ಆಗಮಿಸಿರುವ ಕಾರ್ಮಿಕರ ಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಠಾಣೆಯ ವ್ಯಾಪ್ತಿಯಲ್ಲಿ ಪಡೆಯುವ ಕುರಿತು ಮನವಿ ಸಲ್ಲಿಸಲಾಯಿತು. 


ಮನವಿಯಲ್ಲಿನ ಬೇಡಿಕೆಗಳು


1. ಅಂತರ ರಾಜ್ಯದಿಂದ ಕೆಲಸಕ್ಕೆ ಬಂದವರು ಅವರು ಪೂರ್ವಪರ ಯಾವುದೇ ಮಾಹಿತಿ ನೀಡದೆ ಕೆಲವೇ ಕೆಲವು ದಿನ ಕೆಲಸ ಮಾಡಿ ಅಲ್ಲಿಂದ ಸಾಲ ಮಾಡಿ ಕೈಗೆ ಸಿಕ್ಕುವ ವಸ್ತುಗಳನ್ನು ತೆಗೆದುಕೊಂಡು ಹೇಳದೇ ಕೇಳದೆ ಹೋಗುತ್ತಿರುವುದು  ಕುರಿತು.


2.  ಅಂತರ ರಾಜ್ಯದಿಂದ ಕೆಲಸಕ್ಕೆ ಬರುವವರು ಆ ರಾಜ್ಯದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಇಲ್ಲಿ ಕೆಲಸ ಮಾಡಲು ಯಾವುದೇ ಮಾಹಿತಿ ನೀಡದೆ ಇರುವುದರ ಕುರಿತು.


3.  ಸ್ಥಳೀಯವಾಗಿ ಕೆಲಸ ಮಾಡುವಾಗ ಪುರುಷರು ಸ್ಥಳೀಯ ಸ್ತ್ರೀಯರನ್ನು ವರಿಸುವುದು ಹಾಗೂ ಪುಸಲಾಯಿಸಿ ಕರೆದುಕೊಂಡು ಹೋಗುತ್ತಿರುವುದರ ಕುರಿತು.


4.  ನಗರದಲ್ಲಿ ಕಟ್ಟಡ ಕಾಮಗಾರಿ ಮಾಡುವವರು ಕೆಲವು ದಿನಗಳು ಕೆಲಸ ಮಾಡಿ ಬೆಲೆಬಾಳುವ ಮಿಷನರಿ ವಸ್ತುಗಳನ್ನು ಕಳ್ಳತನ ಮಾಡುತ್ತಿರುವುದರ ಕುರಿತು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಠಾಣೆಗೆ ತೆರಳಿ ಪೊಲೀಸರಿಗೆ ರಾಖಿ ಕಟ್ಟಿದ ಕಾನೂನು ವಿದ್ಯಾರ್ಥಿನಿಯರು




ಸುದ್ದಿಲೈವ್/ಶಿವಮೊಗ್ಗ


ಮಾನವ ಬಂಧುತ್ವ ವೇದಿಕೆ ಸೊರಬ ಹಾಗೂ ಕಾನೂನು ವಿದ್ಯಾರ್ಥಿಗಳಿಂದ ಇಂದು ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು, 


ಠಾಣೆಗೆ ತೆರಳಿದ ಸಂಘಟನಾಕಾರರು ಮತ್ತು ವಿದ್ಯಾರ್ಥಿಗಳು ಪೊಲೀಸರಿಗೆ ಪೂಜೆ ಮಾಡಿ ರಾಖಿ ಕಟ್ಟಿದ್ದಾರೆ.‌ಈ ಕಾರ್ಯಕ್ರಮನ ಉದ್ದೇಶಿಸಿ  ಕಾನೂನು ವಿದ್ಯಾರ್ಥಿ ಹಾಗೂ ಸಮಾಜ ಸೇವಕರಾದ ಶಶಿಕುಮಾರ್ ಕೆ ಅವರು ರಕ್ಷಾ ಬಂಧನ ಎಂದರೆ ಒಡಹುಟ್ಟಿದ ಸಹೋದರರಿಗೆ ಮಾತ್ರ ಸೀಮಿತವಾಗಿಲ್ಲ ರಕ್ಷಾ ಬಂಧನ ವು ನಮಗೆ ರಕ್ಷಣೆ ಕೊಡುವಂತಹ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು ಎಂದು ಹೇಳಿದರು,



ಮಾನವ ಬಂಧುತ್ವ ವೇದಿಕೆ ಸೊರಬ ಅಧ್ಯಕ್ಷರಾದ ರಾಜೇಶ್ ಸಿ ಕಾನಡೆ ಅವರು ಮಾತನಾಡಿ ಪೋಲಿಸ್ ಇಲಾಖೆಯವರು ನಮಗೆ ಯಾವುದೇ ಜನಾಂಗ ಧರ್ಮ ಲಿಂಗ ಜಾತಿ ಎಂಬ ತಾರತಮ್ಯವಿಲ್ಲದೆ ನಮಗೆ ರಕ್ಷಣೆ ನೀಡುವ ಹೊರೆಯನ್ನು ಹೊತ್ತಿದ್ದಾರೆ ಆದ್ದರಿಂದ ಅವರಿಗೆ ರಾಕಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಿಸರಿಸಿದ್ದೇವೆ ಈ ರೀತಿಯಾಗಿ ನಾವು ಪೋಲಿಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದ್ದೇವೆ.


ಈ ಕಾರ್ಯಕ್ರಮದಲ್ಲಿ ಕಾನೂನು ವಿದ್ಯಾರ್ಥಿಗಳಾದ 1 ಸ್ಪಂದನ, 2 ಅಕ್ಷತಾ, 3 ಸಂಗೀತ, 4 ಐಶ್ವರ್ಯ, 5 ವಿದ್ಯಾ,  6 ಸ್ನೇಹ, 7 ಭಾರತಿ ಹಾಗೂ ಸಹೋದರಿ ಯಾದಂತಹ  ಶಿಲ್ಪ ಅಜಯ್,   ಕಾವ್ಯ, 3 ರೇವತಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಪೋಲಿಸ್ ಇಲಾಖೆಯ PSI ಕೋಮಲ ಮೇಡಂ  ಸಿಬ್ಬಂದಿಗಳಾದ ಸಚಿನ್ ಸರ್ ರಾಮಕೃಷ್ಣ ಸರ್ ಗಾಯತ್ರಿ ಮೇಡಂ ಸರೋಜಿನಿ ಮೇಡಂ ರಾಘವೇಂದ್ರ ಸರ್ ಹಾಗೂ ಹಲವಾರು ಸಿಬ್ಬಂದಿ ವರ್ಗದವರಿದ್ದರು.

ಅತ್ಯಾಚಾರ ಮತ್ತು ಹತ್ಯೆಯನ್ನ ಖಂಡಿಸಿ ಎಐಎಂಐಎಂ ಮನವಿ



ಸುದ್ದಿಲೈವ್/ಶಿವಮೊಗ್ಗ


ಉತ್ತರಖಂಡ್ ಮತ್ತು ಕೊಲ್ಕತ್ತಾದಲ್ಲಿ ವೈದ್ಯಕೀಯ ಕ್ಷೇತ್ರದ ನರ್ಸ್ ಮತ್ತು ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನ‌ ಖಂಡಿಸಿ ಎಐಎಂಐಎಂ ಶಿವಮೊಗ್ಗ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.‌


ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ವೃತ್ತಿಪರರ ಮೇಲೆ ನಡೆದ ಭಯಾನಕ ಹಿಂಸಾಚಾರಗಳು  ತೀವ್ರವಾಗಿ ದುಃಖಿತರನ್ನಾಗಿಸಿವೆ. ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ಮೇಲೆ ಅಮಾನುಷ ಅತ್ಯಾಚಾರ ಮತ್ತು ಹತ್ಯೆ, ಉತ್ತರಾಖಂಡದಲ್ಲಿ ನರ್ಸ್‌ನ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಎರಡು ಹೀನಕೃತ್ಯಗಳನ್ನು ತಕ್ಷಣವೇ ತಡೆಯಲು ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. 


ಜನಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವವರಿಗೆ ತುರ್ತು ನ್ಯಾಯ ಮತ್ತು ಬಲವಾದ ರಕ್ಷಣೆ ಸಿಗಬೇಕಿದೆ, ನಮ್ಮ ಆರೋಗ್ಯ ಕಾರ್ಯಕರ್ತರ ಪರವಾಗಿ ತ್ವರಿತ ಕ್ರಮ ಮತ್ತು ಸೂಕ್ತ ರಕ್ಷಣೆಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಮನವಿಯಲ್ಲಿ ಸಂಘಟನೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.  


ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಈ ಪ್ರತಿಭಟನೆಯಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷರು ಮೊಹಮ್ಮದ್ ರಫೀ, ನಗರಾಧ್ಯಕ್ಷರು ಮೊಹಮ್ಮದ್ ವಸೀಕ್,  ತೌಸೀಫ್ ಅಹಮದ್, ಮೊಹಮ್ಮದ್ ಖಮರುಜ್ಜಮಾ, ಜುನೇದ್ ಅಖ್ತರ್, ಶಾಬಾಜ್, ಮುನಾವರ್ ಪಾಷಾ ಮತ್ತು ಪಕ್ಷದ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

ಆ.20 ರಂದು ವಿದ್ಯುತ್ ವ್ಯತ್ಯಯ

 


ಸುದ್ದಿಲೈವ್/ಶಿವಮೊಗ್ಗ


ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ  ತ್ರೆöÊಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ  ಆ.20 ರಂದು ಬೆಳಗ್ಗೆ 09.00 ಗಂಟೆಯಿಂದ  ಸಂಜೆ 6.00 ರವರೆಗೆ ಈ ವ್ಯಾಪ್ತಿಗೆ ಸೇರಿರುವ ಪಿಯರ್‌ಲೈಟ್, ಪೇಪರ್ ಪ್ಯಾಕೇಜ್, ಓ.ಟಿ.ರಸ್ತೆ, ಪಂಚವಟಿ ಕಾಲೋನಿ, ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರ್, 


ಇಲಿಯಾಜ್‌ನಗರ 1 ರಿಂದ 13ನೇ ಕ್ರಾಸ್, ಸಿದ್ದೇಶ್ವರ ಸರ್ಕಲ್, ಫಾರೂಕ್ಯ ಶಾದಿಮಹಲ್, ತುಂಗಾನಗರ ಆಸ್ಪತ್ರೆ, ವೈಷ್ಣವಿ ಲೇಔಟ್, ಭವಾನಿ ಲೇಔಟ್, ಗದ್ದೇಮನೆ ಲೇಔಟ್, ಚಾಲುಕ್ಯನಗರ, ಕೆಹೆಚ್‌ಬಿ ಕಾಲೋನಿ, ಮಂಡಕ್ಕಿಭಟ್ಟಿ, ಮೇಲಿನ ಮತ್ತು ಕೆಳಗಿನ ತುಂಗಾನಗರ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿನಗರ 80 ಅಡಿರಸ್ತೆ, ಕಾಮತ್ ಲೇಔಟ್, ಆನಂದರಾವ್ ಬಡಾವಣೆ, 


ಗಾರ್ಡನ್ ಏರಿಯಾ, ಸಿಟಿ ಸೆಂಟ್ರಲ್ ಮಾಲ್, ರಾಯಲ್ ಆರ್ಕೇಡ್, ಸರ್ಕಾರಿ ಮತ್ತು ಖಾಸಗಿ ಬಸ್‌ನಿಲ್ದಾಣ, ಇಲಿಯಾಜ್‌ನಗರ ಲಾರಿ ಗ್ಯಾರೇಜ್, ಬಿಹೆಚ್ ರಸ್ತೆ, ಸಾಗರ ನರ್ಸರಿ, ಚಾನಲ್ ಏರಿಯಾ ಹಾಗೂ  ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ಪ್ರಕಟಣೆ ತಿಳಿಸಿದೆ

ಸಂಸದರಿಗೆ ಅಭಿಮಾನಿಗಳ ಸಂಘದಿಂದ ಶುಭಾಶಯಗಳು



ಸುದ್ದಿಲೈವ್/ಶಿವಮೊಗ್ಗ


ಯುವ ನೇತಾರರು, ಅಭಿವೃದ್ಧಿಯ ಹರಿಕಾರರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಬಿ.ವೈ.ರಾಘಣ್ಣ ಅವರಿಗೆ ಅವರ ನಿವಾಸದಲ್ಲಿ ಇಂದು ಬಿ ವೈ.ರಾಘವೇಂದ್ರ ಅಭಿಮಾನಿಗಳ ಸಂಘದ ವತಿಯಿಂದ ಜನ್ಮ ದಿನದ ಶುಭಾಶಯಗಳನ್ನು ಕೋರಲಾಯಿತು. 


ಈ ವೇಳೆ ಮಾನ್ಯ ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಖ್ಯಾತ ಕೈಗಾರಿಕೋದ್ಯಮಿಗಳಾದ ಎಸ್.ರುದ್ರೇಗೌಡ್ರು, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ್, ಬಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಹರೀಶ್, ಯುವ ಮುಖಂಡರಾದ ರಾಜೇಶ್ ಕಾಮತ್, ವೀರಭದ್ರಪ್ಪ ಪೂಜಾರಿ, ಮೋಹನ್ ರೆಡ್ಡಿ, ಎಪಿಎಂಸಿ ಮಾಜಿ ನಿರ್ದೇಶಕರಾದ ಅರುಣ್ ಬಾಬು ಸೇರಿದಂತೆ ನೂರಾರು ಅಭಿಮಾನಿಗಳು, ಕಾರ್ಯಕರ್ತರು ಹಾಜರಿದ್ದರು.

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನ ದಿಕ್ಕಾರದ ಘೋಷಣೆ

 


 

 ಸುದ್ದಿಲೈವ್/ಶಿವಮೊಗ್ಗ


ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ರಾಜ್ಯಪಾಲರು ಅನುಮತಿ ನೀಡಿರುವುದನ್ನ ಖಂಡಿಸಿ ಇಂದು ಸಹ ಕಾಂಗ್ರೆಸ್ ಶಿವಮೊಗ್ಗದಲ್ಲಿ ಪ್ರತಿಭಟನೆ ಮುಂದುವರೆದಿದೆ.


ಮೊನ್ನೆ ಶನಿವಾರ ಬೆಳಿಗ್ಗೆ ರಾಜ್ಯಾಪಾಲ ಗೆಹ್ಲಾಟ್ ಅವರು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರು. ಸಂಜೆಯಿಂದಲೇ ಈ ಪ್ರಕರಣ ರಾಜಕಾರಣ ಪಡೆದುಕೊಂಡು ಪ್ರತಿಭಟನೆಯ ರೂಪ ಪಡೆದುಕೊಂಡಿದೆ. 



ಶಿವಮೊಗ್ಗದಲ್ಲಿ ಈ ಬೆಳವಣಿಗೆ ನಡೆದರೆ ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್ ವೈ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆದಿದೆ. ಇಂದು ಸಹ ಪ್ರತಿಭಟನೆ ಮುಂದುವರೆದಿದ್ದು, ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. 


ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪುವ ಮುನ್ನ ಗೋಪಿ ವೃತ್ತದ ಬಳಿ ಟಯರ್ ಸುಡಲಾಗಿದೆ. ರಾಹ್ಯಪಾಲರೆ ನೀವು ಕೇಂದ್ರದ ಕೈಗೊಂಬೆ ನಿಮಗೆ ದಿಕ್ಕಾರ, ಸಂವಿಧಾನ ವಿರೋದಿ ರಾಜ್ಯ ಪಾಲರ ವಿರುದ್ಧ ದಿಕ್ಕಾರ ಎಂಬ ಹಲವು ರಾಜ್ಯಪಾಲರ ವಿರುದ್ಧ ಪ್ಲಕಾರ್ಡ್ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆದಿದೆ. ರಾಜ್ಯಪಾಲರನ್ನ ವಜಾಗೊಳಿಸಬೇಕು ಹಾಗೂ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ವಾಪಾಸ್ ಪಡೆಯುವಂತೆ ಆಗ್ರಹಿಸಲಾಗಿದೆ. 


ಮೋಹನ್ ಮಾತನಾಡಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಸಾಬೀತಾದರೆ ಮೊದಲು ನೇಣು ಹಾಕಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ. ಯಡಿಯೂರಪ್ಪನವರ ಮಕ್ಕಳ ಭ್ರಷ್ಠಾಚಾರ ಎಷ್ಟಿದೆ ಗೊತ್ತಾ? ಅದನ್ನ ಮೊದಲು ವಿಚಾರಣೆಗೆ ಅನುಮತಿ ಕೊಡಬೇಕು ಎಂದು ಆಗ್ರಹಿಸಿದರು. 


ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಯಡಿಯೂರಪ್ಪನವರ ಮಕ್ಕಳ ಹಗರಣವಿಲ್ಲವಾ? ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ನೀಡಿರುವುದು ರಾಜಕೀಯ ದುರದ್ದೇಶ ಅಡಗಿದೆ ಎಂದು ಗುಡುಗಿದರು.  


ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಿಕಾರಿಪುರದ ನಾಗರಾಜ್ ಗೌಡ, ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಹೆಚ್ ಸಿ, ಯೋಗೀಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮೊದಲಾದ ನಾಯಕರು ಉಪಸ್ಥಿತರಿದ್ದರು.

ಭಾನುವಾರ, ಆಗಸ್ಟ್ 18, 2024

ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಪ್ರತಿಭಟನೆ



ಸುದ್ದಿಲೈವ್/ಭದ್ರಾವತಿ


ಕೋಲ್ಕತ್ತಾದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಭದ್ರಾವತಿಯಲ್ಲಿ ಭರ್ಜರಿ ಪ್ರತಿಭಟನೆ ನಡೆಸಲಾಗಿದೆ. 


ಭದ್ರಾವತಿಯ ನಿರ್ಮಲಾ ಅಸ್ಪತ್ರೆ ವೈದ್ಯರು ಮತ್ತು ಕಲಿಕಾ ವಿಧ್ಯಾರ್ಥಿ ಗಳು ನಗರದ ಪ್ರಮುಖ ರಸ್ತೆ ಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.