ಪ್ರೀತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರೀತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಆಗಸ್ಟ್ 27, 2024

ಐದು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಯುವಕ ನೇಣಿಗೆ ಶರಣು



ಸುದ್ದಿಲೈವ್/ಶಿವಮೊಗ್ಗ


ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.  


ಪ್ರೀತಿಸಿ ಮದುವೆಯಾದರೂ ಗಂಡ ಹೆಂಡತಿಯರ ನಡುವೆ ಬಿರುಕು ಮೂಡಿತ್ತು. ವಾಸಿಂ ಅಕ್ರಂ (30) ನೇಣು ಬಿಗಿದುಕೊಂಡ ದುರ್ದೈವಿಯಾಗಿದ್ದಾನೆ. ಐದು ತಿಂಗಳ ಹಿಂದಷ್ಟೆ ವಾಸಿಂ ಅಕ್ರಂ ಮದುವೆಯಾಗಿದ್ದರು. ಐದು ತಿಂಗಳಲ್ಲೇ ಪ್ರೀತಿಸಿ ವರಿಸಿದ ಪತ್ನಿಯ ಜೊತೆ ಜಗಳ ಉಂಟಾಗಿತ್ತು. 


ಕೂಲಿ ಕೆಲಸ ಮಾಡಿಕೊಂಡಿದ್ದ ವಾಸಿಂ ಅಕ್ರಂ ಇಂದು ಬೆಳಿಗ್ಗೆ ಕಲ್ಲೂರಿನ ಆಶ್ರಯ ಬಡಾವಣೆಯಲ್ಲಿರುವ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಾಸಿಂ ಅಕ್ರಂ ಪತ್ತೆಯಾಗಿದ್ದಾನೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಶನಿವಾರ, ಆಗಸ್ಟ್ 24, 2024

ಪ್ರೀತಿ, ಪ್ರೇಮ ಹಾಗೂ ದೋಖಾ

 


ಸುದ್ದಿಲೈವ್ ‌/ಶಿವಮೊಗ್ಗ


ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾಭ್ಯಾಸ ಮಾಡಿಕೊಂಡಿದ್ದ ವಿದ್ಯಾರ್ಥಿನಿಗೆ ಪ್ರೀತಿ, ಪ್ರೇಮ ಎಂದು ನಂಬಿಸಿ ವಂಚಿಸಿದ್ದು, ಅಷ್ಟು ಸಾಲದೆಂದು ಮನೆಯವರಿಗೆಲ್ಲಾ ಗತಿ ಕಾಣಿಸುವುದಾಗಿ ಬೆದರಿಕೆ ಹಾಕಿರುವ ಘಟನೆ ಈಗ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸೂಳೆಬೈಲಿನ ನಿವಾಸಿಯ ವಿದ್ಯಾರ್ಥಿನಿಗೆ ಸಾಗರ ತಾಲೂಕಿನಲ್ಲಿ ಕುರಿ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿ ಕುರಿ ಮಾರಾಟ ಮಾಡಲು ಮನೆಗೆ ಬಂದಾಗ ಪರಿಚಯವಾಗಿದೆ. ಪರಿಚಯ ಪ್ರೀತಿ, ಪ್ರಣಯಕ್ಕೆ ತಿರುಗಿದೆ. ಯಾವಾಗ ವಿದ್ಯಾರ್ಥಿನಿಗೆ ಪ್ರಿಯಕರ ಮದುವೆಯಾಗಿ ಮಕ್ಕಳಿರುವುದು ಗೊತ್ತಾಯಿತೋ ಆಗ ಆತನ ಜತೆಸಲುಗೆಯಿಂದ ಇರುವುದರಿಂದ ಹಿಂದೆ ಸರಿದಿದ್ದಾಳೆ.


ಹಿಂದೆ ಸರಿದರೂ ಸುಹೇಲ್ ಖಾನ್ ನೀನು ಒಬ್ವಳೇ ಸಿಗು ಮಾತನಾಡೋಣ ಎಂದು ಕರೆಯಲು ಪ್ರಯತ್ನಿಸಿದ್ದಾನೆ. ಆದರೆ ವಿದ್ಯಾರ್ಥಿನಿ ತಪ್ಪಿಸಿಕೊಂಡಿದ್ದಾಳೆ. ಮತ್ತೆ ಸಂಪರ್ಕಕ್ಕೆ ಬಂದ ಸುಹೇಲ್ ಸಿಗದಿದ್ದರೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ.


ಇದರಿಂದ ಹೆದರಿದ ವಿದ್ಯಾರ್ಥಿನಿ ಸುಹೇಲ್ ಖಾನ್ ನ ನಾದಿನಿಗೆ ಕರೆ ಮಾಡಿ ಹಿಂಸೆ ನೀಡುತ್ತಿರುವ ಬಗ್ಗೆ ಹೇಳಿದ್ದಾಳೆ. ಇಷ್ಟಕ್ಕೆ ಸುಹೇಲ್ ನ ಕುಟುಂಬಸ್ಥರು ಮನೆ ಹತ್ತಿರ ಬಂದು  ತಾಯಿ ಮತ್ತು ಮಗಳನ್ನ ಬೈದು ಅವಮಾನಗೊಳಿಸಿದ್ದಾರೆ. ಇಷ್ಟಕ್ಕೆ ಸಾಲದು ಎಂಬಂತೆ ವಿದ್ಯಾರ್ಥಿನಿ ಸುಹೇಲ್ ಜೊತೆ ಪ್ರೀತಿಯಲ್ಲಿದ್ದಾಗ ಖಾಸಗಿ ಫೊಟೊಗಳನ್ನ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವುದರಿಂದ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.