ಪ್ರತಿಭಟನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರತಿಭಟನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಆಗಸ್ಟ್ 29, 2024

ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ



ಸುದ್ದಿಲೈವ್/ಶಿವಮೊಗ್ಗ


ಇಲ್ಲಿನ ವಿನೋಬನಗರದ ಸೂಡ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕ ಓಡಾಡುವ ರಸ್ತೆಯನ್ನೇ ಬಂದ್ ಮಾಡಲಗಿದ್ದು ಇದನ್ನ ಒಂದು ವಾರದ ವರೆಗೆ ಗಡುವು ನೀಡಿದರೂ ಪ್ರಯೋಜನೆಯಾಗದ ಹಿನ್ನಲೆಯಲ್ಲಿ ಶಿವಮೊಗ್ಗದ ನಾಗರೀಕ ಹಿತರಕ್ಷಣೆಯ ವೇದಿಕೆ ನಿನ್ನೆಯಿಂದ ಪಾಲಿಕೆ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ. 


ಇಂದು ಅದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪಾಲಿಕೆ ಅಥವಾ ಜಿಲ್ಲಾಡಳಿತ ನಿರ್ಲಕ್ಷದಿಂದಾಗಿ ಆಹೋರಾತ್ರಿ ಧರಣಿಗೆ ಕಾರಣವಾಗಿದೆ.  ಇಬ್ಬರೂ ಅಧಿಕಾರಿಗಳಿಗೆ 3 ತಿಂಗಳ ಹಿಂದೆಯೇ ದೂರು ನೀಡಿದರೂ ಕಡೆಗಾಣಿಸಲಾಗಿದೆ, ಇಷ್ಟೇಲ್ಲಾ ಹೋರಾಟ  ಮಾಡಿದರೂ ತಾವು ಒಂದೇ ಒಂದು ಮೀಟಿಂಗ್ ಮಾಡಿಲ್ಲ ಅಥವಾ ಪರಿಹಾರ ಕೊಡಿಸಿಲ್ಲ. ನಾವು ತಮ್ಮನ್ನು ಈ ವಿಚಾರವಾಗಿ ಬೇಟಿ ಆದಾಗ ಸೌಜನ್ಯ ವರ್ತಿಸಿಲ್ಲ ಎಂಬ ನೊವು ನಮ್ಮಲ್ಲಿ ಇದೆ ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡಿದ್ದಾರೆ. 



ಇದೇ ವೇಳೆ ಶಾಸಕ ಚೆನ್ನಬಸಪ್ಪ ಶಿವಮೊಗ್ಗ ನಾಗರೀಕ‌ಹಿರತಕ್ಷಣಾ ವೇದಿಕೆಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ ಸೂಡ ಆಯುಕ್ತ ವಿಶ್ವನಾಥ್ ಮಜ್ಜಿಗಿಗೆ ಕರೆವಮಾಡಿ ನಾನು ಹುಟ್ಟಿ ಬೆಳೆದ ಊರಿದು. ಸಾರ್ವಜನಿಕರ ಓಡಾಟಕ್ಕೆ ಇರುವ ಜಾಗದಲ್ಲಿ ಶೆಡ್ ನಿರ್ಮಿಸಿರುವುದನ್ನ ಕೂಡಲೇ ತೆಗೆಯಿರಿ ಎಂದು ನಿರ್ದೇಶಿಸಿದ್ದಾರೆ. ಎರಡು ದಿನಗಳಲ್ಲಿ ಸಭೆ ನಡೇಯಲಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಆಯಕ್ತರು ಭರವಸೆ ನೀಡಿದ್ದಾರೆ. 

ಟೋಲ್ ವಿರೋಧಿಸಿ ನಗರದಲ್ಲಿ ಪ್ರತಿಭಟನೆ

 


ಸುದ್ದಿಲೈವ್/ಶಿವಮೊಗ್ಗ


ಹಾನಗಲ್ ನಿಂದ ಶಿಕಾರಿಪುರ ಮೂಲಕ ಶಿವಮೊಗ್ಗಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಎರಡು ಟೋಲ್ ಗಳನ್ನ ನಿರ್ಮಿಸಿರುವ ವಿರುದ್ಧ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 


ನಗರದ ಉಷಾ ನರ್ಸಿಂಗ ಹೋಮ್ ವೃತ್ತದಿಂದ ಡಿಸಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಸರ್ಷಕ್ಕೂ ಮೊದಲೇ ಸಹಕಾರ ನೀಡಿ, ಹೋರಾಟ, ಹೋರಾಟ ಟೋಲ್ ತೆಗೆಯುವರೆಗೂ ಹೋರಾಟ, ಒಂದು ರಸ್ತೆಯ ಟೋಲ್ ನಲ್ಲಿ ಕೊಳ್ಳೆ ಹೊಡೆಯುವುದನ್ನ ನಿಲ್ಲಿಸಿ, 


ಮೊಂಡಾಟ ಬಿಡಿ, ಟೋಲ್ ಬಿಟ್ಟು ನಡೆಯಿರಿ, ನಮ್ಮ ನಡಿಗೆ ಟೋಲ್ ತೆರವುಗೊಳಿಸುವ ಕಡೆಗೆ ಎಂಬ ಪ್ಲಕಾರ್ಡ್ ಹಿಡಿದು ಪ್ರತಿಭಟನಾ ಮೆರವಣೆಗೆಯಲ್ಲಿ ಭಾಗಿಯಾಗಿದ್ದಾರೆ. 15 ದಿನಗಳಲ್ಲಿ ಮನವಿಗೆ ಯಾವ ಅಧಿಕಾರಿಗಳು ಸ್ಪಂಧಿಸದಿದ್ದರೆ ಎರಡು ಟೋಲ್ ಗಳಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು. 


ಎರಡೂ ಟೋಲು ಯಾವ ಮಾನದಂಡನೆಯಲ್ಲಿ ನಿರ್ಮಿಸಲಾಗಿದೆ ಎಂಬುದು ಮಾಹಿತಿ ಬೇಕು. 60 ಕಿ.ಮೀ ದೂರದ ಅಂತರದಲ್ಲಿ ಅಳವಡಿಸಬೇಕೆಂಬ ನಿಯಮವುದ್ದರೂ ಶಿರಾಳಕೊಪ್ಪದ  ಕುಟ್ರಳ್ಳಿಯಿಂದ ಕಲ್ಲಾಪುರದ ಟೋಲ್ ನಡುವೆಇರುವ 35 ಕಿಮಿ ಅಂತರದಲ್ಲಿ ಮತ್ತೊಂದು ಟೋಲ್ ನಿರ್ಮಿಸಲಾಗಿದೆ. 


ಅವೈಜ್ಞಾನಿಕ ಟೋಲ್ ನಿರ್ಮಿಸಲಾಗಿದೆ. ಬಸ್ ನಲ್ಲಿ ಶಿರಾಳಕೊಪ್ಪದಿಂದ ಶಿವಮೊಗ್ಗಕ್ಕೆ ಬಂದರೆ 35 ರೂ ಹೆಚ್ಚಳವಾಗುತ್ತದೆ.ಈ ಅವೈಜ್ಞಾನಿಕ ತೆರಿಗೆ ವಸೂಲಿ ನಿಲ್ಲಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ ಪದ್ಮನಾಭ್ ಭಟ್, ಸಮಿತಿಯ ಅಧ್ಯಕ್ಷ ಶಿವರಾಜ್ ಜಿ.ಪಿ, ಪತ್ರಕರ್ತ ನವೀದ್, ಪ್ರಸನ್ನ, ಮೊದಲಾದವರು ಭಾಗಿಯಾಗಿದ್ದರು.



ಬುಧವಾರ, ಆಗಸ್ಟ್ 28, 2024

ಸೂಡಾ ಶೆಡ್ ಪರ ವಿರುದ್ಧದ ಹೋರಾಟ

 


ಸುದ್ದಿಲೈವ್/ಶಿವಮೊಗ್ಗ


ಚಿತ್ರದುರ್ಗದ ರೇಣುಕಾಚಾರ್ಯರ ಹತ್ಯೆ ಪ್ರಕರಣದಲ್ಲಿ ಶೆಡ್ ನ ವಿಷಯ ಕರ್ನಾಟದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದರೆ ವಿನೋಬ ನಗರದ ಸೂಡ ಕಚೇರಿಯಲ್ಲಿನ ಶೆಡ್ ಈಗ ಎರಡು ಸಂಘಟನೆಯ ಪ್ರತಿಭಟನೆ ಕಾರಣವಾಗಿದೆ.


ಇಂದು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆಗಳ ಒಕ್ಕೂಟ ರಸ್ತೆಯ ಮೇಲೆ ಸೂಡದವರು ಕಚೇರಿ ನೌಕರರ ವಾಹನ ನಿಲುಗಡೆಗೆ ನಿರ್ಮಿಸಿರುವ ಅನಧಿಕೃತ ಶೆಡ್ ತರವಿಗೆ ಅಹೋ ರಾತ್ರಿ ಧರಣಿಗೆ ಮುಂದಾಗಿದ್ದಾರೆ.


ತಕ್ಷಣವೇ ರಸ್ತೆಯಲ್ಲಿರುವ ಶೆಡ್ ತೆರವುಗೊಳಿಸಬೇಕು. ಸಾರ್ವಜನೊಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಕಾನೂನು ಬಾಹಿರವಾಗಿ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಸೂಡ ಆಯುಕ್ತ ವಿಶ್ವನಾಥ್ ಮುತ್ತಜ್ಜಿ, ನಗರ ಯೋಜನೆ ಸದಸ್ಯೆ ರೂಪ, ಸಹಾಯಕ ಇಂಜಿನಿಯರ್ ಬಸವರಾಜುಮತ್ತು ಗಂಗಾಧರ್ ಸ್ವಾಮಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವೇದಿಕೆ ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದೆ.


ಆದರೆ ಇದರ ವಿರುದ್ಧವಾಗಿ ಭಗತ್ ಸಿಂಗ್ ಕನ್ನಡ ಯುವಕ ಸಂಘ ಶೆಡ್ ತೆರವುಗೊಳಿಸಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದೆ. ಭಗತ್ ಸಿಂಗ್ ಕನ್ನಡ ಯುವಕ ಸಂಘದ ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.


ಶೆಡ್ ನ್ನ ನಿರ್ಮಾಣ ಪ್ರಾಧಿಕಾರದ ಕಟ್ಟಡ ನಕ್ಷೆಯಂತೆಯೇ ಪಾರ್ಕಿಂಗ್ ಜಾಗದಲ್ಲಿ ನಿರ್ಮಿಸಿರುವುದು ಸರಿಯಿದೆ. ಸೂಡಾ ಮತ್ತು ಪಾಲಿಕೆ ಜಂಟಿ ಕಾರ್ಯಾಚರಣೆ ನಡೆಸಿ ವರದಿ ಸಲ್ಲಿಸಿದ ಮೇಲೆ ಮುಂದಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ. ಸೂಡಾ ಶೆಡ್ ನ ತೆರವಿನ ಹೋರಾಟದ ಹಿಂದೆ ವೇದಿಕೆಯು ಬೇರೆಂದು ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡಲು ಹೊರಟಿದೆ ಎಂದು ಕನ್ನಡ ಯುವಕರ ಸಂಘ ದೂರಿದೆ.


ಒಟ್ಟಿನಲ್ಲಿ ಎರಡೂ ಸಂಘಟನೆಗಳ ಹೋರಾಟ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕಾದು ನೋಡಬೇಕಿದೆ. 


ಸೋಮವಾರ, ಆಗಸ್ಟ್ 26, 2024

ಬಿಜೆಪಿಯ ನಗರ ಮಹಿಳ ಮೋರ್ಚಾ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ



ಸುದ್ದಿಲೈವ್/ಶಿವಮೊಗ್ಗ


ಮಹಿಳೆಯರ ಮೇಲೆ ಇತ್ತೀಚೆಗೆ ನಡೆಯುತ್ತಿರುವ ದೌರ್ಜನ್ಯವನ್ನ ಖಂಡಿಸಿ ಬಿಜೆಪಿಯ ನಗರ ಮಹಿಳ ಮೋರ್ಚಾ ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. 


ಮಹಿಳೆಯರ ಮೇಲೆ ದೌರ್ಜನ್ಯ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಹೆಣ್ಣುಮಕ್ಕಳ ರಕ್ಷಣೆ ಇಲ್ಲದಂತಾಗಿದೆ. ಹುಬ್ಬಳ್ಳಿಯ ನೇಹಾ ಹತ್ಯೆ, ಮಡಿಕೇರಿಯಲ್ಲಿ ಮೀನಾಳ ರುಂಡಕತ್ತರಿಸಿ ಕೊಲೆ, ಅಂಜಲಿ ಕೊಲೆ ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. 


ಇದೀಗ ಉಡುಪಿಯ ಕಾರ್ಕಳದ ಕೌಡೂರು ಗ್ರಾಮದ ರಂಗನ ಪಾಲ್ಕೆ ಗ್ರಾಮದಲ್ಲಿ ಮಾಧಕ ದ್ರವ್ಯಗಳನ್ನ ಸೇವನೆ ಮಾಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಮತ್ತು ಹುಬ್ಬಳ್ಳಿಯ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ಹೀನಾಯ ಕೃತ್ಯವಾಗಿದೆ. 


ಕಾಂಗ್ರೆಸ್ ಸರ್ಕಾರದಲ್ಲಿ ಕ್ರಿಮಿನಲ್ ಗಳು, ಕೊಲೆಗಡುಕರಿಗೆ ರಕ್ಷಣೆ ಇದೆವಿನಃ ಮಹಿಳೆಯರಿಗಿಲ್ಲವಾಗಿದೆ. ಇಂತಹ ಕೃತ್ಯ ನಡೆದಾಗಲೂ ಅನುಮಾನವೆನಿಸಿದೆ. ನ್ಯಾಯಾಲಯಕ್ಕೆ ತ್ವರಿತ ಗತಿಯಲ್ಲಿ ವಿಚಾರಣೆ ಮಾಡಬೇಕು. ಮುಂದಿನಗಳಲ್ಲಿ ತುರ್ತು ಕಾನೂನು ಕ್ರಮ ಜರುಗಿಸದಿದ್ದರೆ ಸಂಘಟನೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದರು. 


ಪ್ರತಿಭಟನೆಯಲ್ಲಿ ಸಂಘಟನೆಯ, ಗೌರಿ ಶ್ರೀನಾಥ್, ಯಶೋಧ, ನಿರ್ಮಲಾ, ಚೈತ್ರಾ, ಸುರೇಖಾ ಮುರುಳೀಧರ್ ಮೊದಲಾದವರು ಉಪಸ್ಥಿತರಿದ್ದರು.