ಗಣಪತಿ ವಿಸರ್ಜನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗಣಪತಿ ವಿಸರ್ಜನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಸೆಪ್ಟೆಂಬರ್ 14, 2024

ಸಂತೆಕಡೂರಿನಲ್ಲಿ ಯುವಕರ ನಡುವೆ ಬಡಿದಾಟ-ಮೂವರು ಮೆಗ್ಗಾನ್‌ಗೆ ದಾಖಲು

 


ಸುದ್ದಿಲೈವ್/ಶಿವಮೊಗ್ಗ


ನಿನ್ನೆ ಗಣಪತಿ ವಿಸರ್ಜನೆಯಲ್ಲಿ ಆದ ಯುವಕರ ನಡುವಿನ ಕಿರಿಕ್ ಇಂದು ಬೆಳಿಗ್ಗೆ ಮತ್ತೆ ಮುಂದುವರೆದ ಪರಿಣಾಮವಾಗಿ ಮೂವರು ಗಾಯಗೊಂಡು ಮೆಗ್ಗಾನ್‌ಗೆ ದಾಖಲಾಗಿದ್ದಾರೆ.


ಶಿವಮೊಗ್ಗ ತಾಲೂಕಿನ ಸಂತೆಕಡೂರಿನ ನಿನ್ನೆ ಗಣಪತಿ ವಿಸರ್ಜನಾ ಮೆರವಣಿಗೆ ನಡೆದಿದೆ.  ಪ್ರಮೋದ್ ಮತ್ತು ಯೋಗೀಶ್ ಯಾನೆ ಸ್ವಾಮಿ ನಡುವೆ ಸಣ್ಣ ಕಿರಿಕ್ ಆಗಿದೆ. ಎಣ್ಣೆ ಏಟಿನಲ್ಲಿ ಈ ಕಿರಿಕ್ ಆಗಿದೆ ಎನ್ನಲಾಗಿದೆ. ಸ್ವಾಮಿಯ ಸ್ನೇಹಿತರಾದ ಪ್ರವೀಣ ಮತ್ತು ವಿವೇಕ ಜಗಳ ಬಿಡಿಸಿದ್ದಾರೆ.


ಇಂದು ಸಹ ಪ್ರಮೋದ್ ಜಿದ್ದು ಸಾಧಿಸಿದ್ದಾನೆ. ತನ್ನ ಕಡೆಯ ಹುಡುಗರನ್ನ ಕರೆದುಕೊಂಡು  ಸ್ವಾಮಿಯ ಬಳಿ ಬಂದು ಬ್ಯಾನರ್ ಕಟ್ಟುವ ಅಡಿಕೆ ದಬ್ಬೆಯನ್ನ ಕಿತ್ತುಕೊಂಡು ಸ್ವಾಮಿ, ಪ್ರವೀಣನ ಮೇಲೆ ಹಲ್ಲೆ ಮಾಡಿದ್ದಾನೆ.


ಗಲಾಟೆ ಸಂತೆಕಡೂರಿನಲ್ಲಿ ಸಂಚಲನ ಉಂಟು ಮಾಡಿದೆ. ಮೆರವಣಿಗೆ ವೇಳೆ ಯಾವ ವಿಷಯದಲ್ಲಿ ಗಲಾಟೆ ನಡೆದಿದೆ ಎಂಬುದು ಪೊಲೀಸ್ ತನಿಖೆ ಅಥವಾ ಎಫ್ಐಅರ್ ನಿಂದ ತಿಳಿದು ಬರಬೇಕಿದೆ. ಪ್ರಕರಣಕ್ಕೆ ಸಂಭಂಧಿಸಿದಂತೆ ತುಂಗ ನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಕೆ.ಟಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಗುರುವಾರ, ಸೆಪ್ಟೆಂಬರ್ 12, 2024

ರಾಗಿಗುಡ್ಡದಲ್ಲಿ ಸರಳ ಗಣಪತಿ ವಿಸರ್ಜನಾ ಮೆರವಣಿಗೆ



ಸುದ್ದಿಲೈವ್/ಶಿವಮೊಗ್ಗ


ಈ ಬಾರಿಯ ರಾಗಿಗುಡ್ಡದ ಗಣಪತಿ ಉತ್ಸವಕ್ಕೆ ಅಲಂಕಾರಗಳನ್ನ ನಿರ್ಬಂಧಿಸಲಾಗಿದೆ. ರಾಗಿಗುಡ್ಡದ ಮುಖ್ಯ ರಸ್ತೆಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಬ್ಯಾನರ್, ಫ್ಲೆಕ್ಸ್, ಬಂಟಿಂಕ್ಸ್ ಗಳಿಗೆ ಬ್ರೇಕ್ ಬಿದ್ದ ಪರಿಣಾಮ ಹಬ್ಬದ ಕಳೆಗುಂದಿದೆ.  ಕಳೆದ ಬಾರಿ ರಾಗಿಗುಡ್ಡದ ಮೆರವಣಿಗೆಯಲ್ಲಿ ಇವೆಲ್ಲವೂ ರಾರಾಜಿಸಿದ್ದವು. 




ಈ ಬಾರಿ ಮುಖ್ಯರಸ್ತೆಯಲ್ಲಿ ಕೇಸರಿ ಅಲಂಕಾರ, ಬ್ಯಾನರ್, ಫ್ಲೆಕ್ಸ್ ಮೊದಲಾದ ಅಲಂಕಾರಗಳಿಗೆ ನಿರ್ಬಂಧಿಸಲಾಗಿದೆ. ಯಾವ ತಿರುವಿನಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗಿದೆಯೋ, ಅಲ್ಲಿಂದ ಮುಖ್ಯ ರಸ್ತೆಗೆ ತಲುಪುವ ಮಾರ್ಗದಲ್ಲಿ ಮಾತ್ರ  ಕೇಸರಿ ಬಂಟಿಂಗ್ಸ್ ಕಟ್ಟಲು ಅವಕಾಶ ಕಲ್ಪಿಸಲಾಗಿದೆ. 


ಗಣಪತಿ ಮತ್ತು ಈದ್ ಮೆರವಣಿಗೆ ವೇಳೆ ಮುಖ್ಯ ರಸ್ತೆಯಲ್ಲಿ ಅಲಂಕಾರ ನಿರ್ಬಂಧಿಸುವಂತೆ ಜಿಲ್ಲಾಡಳಿತವೇ ತೀರ್ಮಾನ‌ಕೈಗೊಂಡ ಪರಿಣಾಮ ಈ ಬಾರಿಯ ಗಣೇಶ ಹಬ್ಬದ ಮೆರವಣಿಗೆ  ಸರಳವಾಗಿ ನಡೆದಿದೆ. 





ಛತ್ರಪತಿ ಶಿವಾಜಿ ಯುವಕರ ಸಂಘ, ತಿಲಕ್ ಭಾಯ್ಸ್, ಭುವನೇಶ್ವರಿ ಯುವಕರ ಸಂಘ, ಭಗತ್ ಸಿಂಗ್ ಯುವಕರ ಸಂಘ, ವಿಶ್ವಪ್ರಿಯ ಗಣಪತಿ ಯವಕರ ಸಂಘ, ಕುವೆಂಪು ಯುವಕರ ಸಂಘ, ಮಾರಿಕಾಂಬ ಯುವಕರ ಸಂಘ, ಸಿದ್ದಿ ವಿನಾಯಕ ಸ್ಟಾರ್ ಯುವಕರ ಸಂಘ, ವೀರಸಾವರ್ಕರ್ ಸೇರಿದಂತೆ 14 ಪ್ರತಿಷ್ಠಾಪನಾ ಗಣಪತಿ ಮೂರ್ತಿಗಳನ್ನ ಇಂದು ಸಂಜೆ ವಿಸರ್ಜಿಸಲಾಗುತ್ತಿದೆ. 


ಭರ್ಜರಿ ಬಂದೋ ಬಸ್ತ್, 


ಚಾನೆಲ್ ಏರಿ ಶಾಂತಿನಗರದ ಮಹಾದ್ವಾರಕ್ಕೆ ಬರುತ್ತಿದ್ದಂತೆ ಮಹಾಗಣಪತಿ ದೇವಸ್ಥಾನದ ಬಳಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಪೊಲೀಸರಿಂದ ತಪಾಸಣೆ ನಡೆಸಲಾಗುತ್ತಿದೆ. ರಾಗುಗುಡ್ಡದ ಸರ್ಕಲ್ ಬಳಿ ಶಿವಮೊಗ್ಗ ಹೆಚ್ಚುವರಿ ರಕ್ಷಣಾಧಿಕಾರಿ ಕಾರ್ಯಪ್ಪ ನೇತೃತ್ವದಲ್ಲಿ ಆರ್‌ಎಎಫ್, ಕೆಎಸ್‌ಆರ್‌ಪಿ, ಟ್ರಾಫಿಕ್ ಪೊಲೀಸ್ ಇನ್ ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು. 




14 ಗಣಪತಿಗಳು ರಾಗುಗುಡ್ಡದ ಗಲ್ಲಿ ಗಲ್ಲಿಗಳಲ್ಲಿ ಮೆರವಣಿಗೆ ಹೊರಟು ಚಾನೆಲ್ ಗೆ ಬಂದು ವಿಸರ್ಜಿಸಲಾಗುತ್ತದೆ. ವಿಸರ್ಜನಾ ಸ್ಥಳಗಳಲ್ಲಿ ಚಾನೆಲ್ ಗೆ ಕಂಬಕಟ್ಟಲಾಗಿದೆ. ಗಣಪತಿ ಸಾಗುವ ವೇಳೆ ಮನೆಯ ಮುಂದೆ ಮಹಿಳೆಯರು ರಂಗೋಲಿ ಬಿಡಿಸಿದ್ದಾರೆ. ಒಟ್ಟಿನಲ್ಲಿ ಸರಳ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯುತ್ತಿದೆ.