ಒಳಮೀಸಲಾತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಒಳಮೀಸಲಾತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 12, 2024

ಒಳಮೀಸಲಾತಿ ಜಾರಿಗೆ ದಸಂಸನಿಂದ ಬೃಹತ್ ತಮಟೆ ಚಳುವಳಿ ಜಾರಿಗೆ ದಸಂಸ ಬೃಹತ್ ತಮಟೆ ಚಳುವಳಿ

 


ಸುದ್ದಿಲೈವ್/ಶಿವಮೊಗ್ಗ


ಒಳಮೀಸಲಾತಿ ಜಾರಿಯಾಗುವಂತೆ ಒತ್ತಾಯಿಸಿ ಇಂದು ರಾಜ್ಯಾದ್ಯಂತ ಎಲ್ಲಾ‌ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲ ಬೃಹತ್ ತಮಟೆ ಚಳುವಳಿ ನಡೆಸಿದೆ. 


ಇಂದು ಬಿ.ಹೆಚ್ ರಸ್ತೆಯಲ್ಲಿರುವ ಶಿವಪ್ಪನಾಯಕನ ಪ್ರತಿಮೆ ಎದುರು ಮೆರವಣಿಗೆ ಹೊರಟ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆ, ಗೋಪಿ ವೃತ್ತದ ಮೂಲಕ ಡಿಸಿ ಕಚೇರಿ ತಲುಪಿ ಡಿಸಿಗೆ ಮನವಿ ಸಲ್ಲಿಸಿದೆ. 


ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಆದೇಶಿಸಿದೆ. ಆದೇಶ ಹೊರಡಿಸಿ ಎರಡು ತಿಂಗಳಾದರೂ ಕಾನೂನು ಜಾರಿಯಾಗಿಲ್ಲ ಎಂದು ದೂರಿದ್ದಾರೆ. 


ಪ.ಜಾಯ ಒಳಮೀಸಲಾತಿ ಜಾರಿಗೆ ಸಂವಿಧಾನ ಬದ್ದವಾಗಿದೆ. ಸುಪ್ರೀಂ ತೀರ್ಪು ಐತಿಹಾಸಿಕ ತೀರ್ಪಾಗಿದೆ. ಶ್ರೇಣಿಕೃತ ಜಾತಿ ವ್ಯವಸ್ಥೆಯಿದೆ. ಪಂಚಮರು, ಶೂದ್ರರು ವೈಶ್ಯರು, ಕ್ಷತ್ರಿಯರು ಹಾಗೂ ಬ್ರಾಹ್ಮಣರಿದ್ದಾರೆ. ಆದರೆ ಪಂಚಮರ ಉದ್ದಾರಕ್ಕಾಗಿ ಡಾ.ಬಾಬಸಾಹೇಬ ಅಂಬೇಡ್ಕರ್ ಅವರು ಮೀಸಲಾತಿ ನೀಡಿದ್ದಾರೆ.  


ಈ ಮೀಸಲಾತಿಗೆ ಒಳ ಮೀಸಲಾತಿ ನೀಡಲು ಸುಪ್ರೀಕೋರ್ಟ್ ಆದೇಶ ಬಂದು ಎರಡೂ ತಿಂಗಳು ಕಳೆದರೂ ಜಾರಿಗೆ ತರಲು ಮೀನಾಮೇಷ ಎಣೆಸಿದೆ. ನಿದ್ರಾವಸ್ಥೆಯಲ್ಲಿರುವ ಸರ್ಕಾರಕ್ಕೆ ಎಚ್ಚರಿಸಲು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಬೃಹತ್ ತಮಟೆ ಚಳುವಳಿ ನಡೆಸಲಾಯಿತು.


ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಮೂರ್ತಿ, ಖಜಾಂಚಿ ಕಾಟಕಿ, ಎಂ ಏಳುಕೋಟಿ, ನಾಗರಾಜ್ ಬೊಮ್ಮನ್ ಕಟ್ಟೆ ಕೃಷ್ಣ, ರಮೇಶ್ ಚಿಕ್ಕಮರಡಿ, ಹಸವಿ ಬಸವರಾಜ್, ಹರಿಗೆ ರವಿ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. 

ಶನಿವಾರ, ಆಗಸ್ಟ್ 31, 2024

ಒಳಮೀಸಲಾತಿ ವಿರುದ್ಧ ಮಾತನಾಡಿದರೆ ನ್ಯಾಯಾಂಗ ನಿಂದನೆ-ಮಾದಿಗ ದಂಡೋರ ಎಚ್ಚರಿಕೆ

 


ಸುದ್ದಿಲೈವ್/ಶಿವಮೊಗ್ಗ


ಸರ್ವೋಚ್ಛ ನ್ಯಾಯಾಲಯ ಒಳ ಮೀಸಲಾತಿ ಕುರಿತಂತೆ ಈಗಾಗಲೇ ಆದೇಶ ನೀಡಿದರೂ ಸಹ ನ್ಯಾಯಾಲಯದ ಆದೇಶದ ವಿರುದ್ಧ ನ್ಯಾಯಾಂಗ ನಿಂದನೆ ನಡೆಯುತ್ತಿದೆ ಎಂದು ಕರ್ನಾಟಕ ಮಾದಿಗ ದಂಡೋರದ ಹನುಮಂತಪ್ಪ ಮಂಗೋಟೆ ಆಗ್ರಹಿಸಿದರು. 


ಒಳ ಮೀಸಲಾತಿ ಅವಶ್ಯಕತೆ ಇದೆ ಎಂದು ಸದಾಶಿವ ಆಯೋಗ ಮತ್ತು ಮಾಧುಸ್ವಾಮಿ ಆಯೋಗ ವರದಿಯನ್ನ ತರಿಸಿಕೊಂಡು ರಾಜ್ಯ ಸರ್ಕಾರ  ಕೇಂದ್ರ ಸರ್ಕಾರಕ್ಕೆ 17% ಮೀಸಲಾತಿ ಹೆಚ್ಚಳಿಸಿ ಕಳುಹಿಸಲಾಗಿತ್ತು. 


ಕೇಂದ್ರ ಸರ್ಕಾರ ಈ ಮೀಸಲಾತಿಯನ್ನ ತಿರಸ್ಕರಿಸಿತು. ನಂತರ  ಸುಪ್ರೀಂ ಕೋರ್ಟ್ ಗೆ ಹೋಗಲಾಯಿತು. ರಾಜ್ಯದಲ್ಲಿ ಜಾತಿಗಳ ಅನುಗುಣವಾಗಿ ಒಳಮೀಸಲಾತಿ ಹೆಚ್ಚಿಸಲು ಆದೇಶಿಸಿಸಿತ್ತು. ಆದರೆ ಮೈಸೂರಿನಲ್ಲಿ ವಿವಿಯ ನಿರ್ದೇಶಕರಾದ ಜೆ. ಸೋಮಶೇಖರ್ ಅವರು ಸಂವಾದ ನಡೆಸಿ ಒಳ ಮೀಸಲಾತಿಗೆ ಹೊಸದಾಗಿ ಜನಸಂಖ್ಯೆ ಹೆಚ್ಚಾಗಬೇಕು ಮತ್ತು ಆಗದಿದ್ದರೆ ಬಾಂಗ್ಲಾ ಮಾದರಿಯ ಹೋರಾಟ ನಡೆಯಲಿದೆ ಎಂದು ಹೇಳಿರುವುದು ನ್ಯಾಯಾಂಗ ನಿಂದನೆ ಆಗಿದೆ.  


ಹಾವನೂರು, ಸದಾಶಿವ ಆಯೋಗ ಮತ್ತು ಮಾಧು ಸ್ವಾಮಿಗಳ ಆಯೋಗದ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಕೂಲಂಕುಷವಾಗಿ ಚರ್ಚೆಯಾಗಿದೆ.  ಆದೇಶವನ್ನೆ ಉಲ್ಲಂಘಿಸಲಾಗುತ್ತಿದೆ. ಕಾನೂನು ಕ್ರಮ ಕೈಗೊಳ್ಳುವ ಇಂತಹವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕಿದೆ ಎಂದರು‌


ಒಳ ಮೀಸಲಾಯಾತಿಯ ಕುರಿತಂತೆ  ಸರ್ವೋಚ್ಚ ನ್ಯಾಯಾಲಯದ ವಿರುದ್ಧ ಮೈಸೂರಿನಲ್ಲಿ ಸಂವಾದ ನಡೆದಿದ್ದಕ್ಕೆ ಕಾನೂನು ಮತ್ತು ನ್ಯಾಯಾಂಗದ ಆದೇಶದ ಉಲ್ಲಂಘನೆಯಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೋಮಶೇಖರ್ ಅವರನ್ನ ಮೈಸೂರು ವಿವಿಯಿಂದ ವಜಾಗೊಳಿಸುವಂತೆ ಆಗ್ರಹಿಸಿದರು.