ಒಳ ಮೀಸಲಾತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಒಳ ಮೀಸಲಾತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಸೆಪ್ಟೆಂಬರ್ 9, 2024

ಒಳಮೀಸಲಾತಿಗಾಗಿ ದಸಂಸನಿಂದ ಬೃಹತ್ ತಮಟೆ ಚಳುವಳಿ



ಸುದ್ದಿಲೈವ್/ಶಿವಮೊಗ್ಗ


ಒಳಮೀಸಲಾತಿ ಯಾಗುವಂತೆ ಒತ್ತಾಯಿಸಿ ಸೆ.12 ರಂದು ರಾಜ್ಯಾದ್ಯಂತ ಎಲ್ಲಾ‌ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ. 


ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ ಗುರುಮೂರ್ತಿ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಆದೇಶಿಸಿದೆ. ಆದೇಶ ಹೊರಡಿಸಿ ಎರಡು ತಿಂಗಳಾದರೂ ಕಾನೂನು ಜಾರಿಯಾಗಿಲ್ಲ ಎಂದು ದೂರಿದ್ದಾರೆ. 


ಪ.ಜಾಯ ಒಳಮೀಸಲಾತಿ ಜಾರಿಗೆ ಸಂವಿಧಾನ ಬದ್ದವಾಗಿದೆ. ಸುಪ್ರೀಂ ತೀರ್ಪು ಐತಿಹಾಸಿಕ ತೀರ್ಪಾಗಿದೆ. ಶ್ರೇಣಿಕೃತ ಜಾತಿ ವ್ಯವಸ್ಥೆಯಿದೆ. ಪಂಚಮರು, ಶೂದ್ರರು ವೈಶ್ಯರು, ಕ್ಷತ್ರಿಯರು ಹಾಗೂ ಬ್ರಾಹ್ಮಣರಿದ್ದಾರೆ. ಆದರೆ ಪಂಚಮರ ಉದ್ದಾರಕ್ಕಾಗಿ ಡಾ.ಬಾಬಸಾಹೇಬ ಅಂಬೇಡ್ಕರ್ ಅವರು ಮೀಸಲಾತಿ ನೀಡಿದೆ. 


ಈ ಮೀಸಲಾತಿಗೆ ಒಳ ಮೀಸಲಾತಿ ನೀಡಲು ಸುಪ್ರೀಕೋರ್ಟ್ ಆದೇಶ ಬಂದು ಎರಡೂ ತಿಂಗಳು ಕಳೆದರೂ ಜಾರಿಗೆ ತರಲು ಮೀನಾಮೇಷ ಎಣೆಸಿದೆ. ನಿದ್ರಾವಸ್ಥೆಯಲ್ಲಿರುವ ಸರ್ಕಾರಕ್ಕೆ ಎಚ್ಚರಿಸಲು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ತಮಟೆ ಚಳುವಳಿ ನಡೆಯುತ್ತಿದೆ ಎಂದರು. 


ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಜಾಂಚಿ ಕಾಟಕಿ, ಎಂ ಏಳುಕೋಟಿ, ನಾಗರಾಜ್ ಬೊಮ್ಮನ್ ಕಟ್ಟೆ ಕೃಷ್ಣ, ರಮೇಶ್ ಚಿಕ್ಕಮರಡಿ, ಹಸವಿ ಬಸವರಾಜ್, ಹರಿಗೆ ರವಿ ಮೊದಲಾದವರು ಉಪಸ್ಥಿತರಿದ್ದರು. 

ಮಂಗಳವಾರ, ಸೆಪ್ಟೆಂಬರ್ 3, 2024

ಮೀಸಲಾತಿ ಕುರಿತು 9 ನೇ ಬೆಂಚ್ ನಲ್ಲಿ ಕಾನೂನು ಹೋರಾಟಕ್ಕೆ ತೀರ್ಮಾನ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟ ಇವರ ಆಶ್ರಯದಲ್ಲಿ ಒಳ ಮೀಸಲಾತಿ - ಬಂಜಾರ ಸಮುದಾಯಕ್ಕೆ ಪೂರಕವೇ ಬಾಧಕವೇ ಒಂದು ಅವಲೋಕನ ರಾಜ್ಯ ಮಟ್ಟದ ವಿಚಾರ ಸಂಕಿರಣ ವನ್ನು ವಿಧಾನ ಸಭಾ ಉಪ ಸಭಾಪತಿ ರುದ್ರಪ್ಪ ಲಾಂಬಾಣಿ ಉದ್ಘಾಟಿಸಿದರು,           


ಉಮೇಶ್ ಜಾದಾವ್   :- ಸಮಾಜದ ಉಳಿಗೆ ಆಳುವರ ಜವಾಬ್ದಾರಿ ಬಹಳ ಮಖ್ಯವಿದೆ, ಜನಗಣತಿ ಅದ ಮೇಲೆ ಒಳ ಮೀಸಲಾತಿ ಜಾರಿ ಮಾಡುವುದು ಬಹಳ ಮುಖ್ಯ ಎಂದರು.                      


ಎಂ ಎಲ್ ಸಿ  ಪ್ರಕಾಶ್ ರಾಠೋಡ್ ಮಾತನಾಡಿ,   ಒಳಮೀಸಲಾತಿ ಜಾರಿ ಮಾಡಲು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ  ಇದರ ಹಿನ್ನಲೆಯಲ್ಲಿ  ಸಮಾಜ ನಾವುಗಳ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಬೇಕಾಗಿದೆ. 


ಸರ್ಕಾರ ಬಳಿ ಯಾವುದೆ ಮಾಹಿತಿ ಇಲ್ಲಾ ಹಾಗಾಗೀ ಜನಗಣತಿ ಮಾಡಿ, ವಿಭನ್ನವಾದ ಆದೇಶವಿರುವುದರಿಂದ ಇಡೀ ದೇಶದಲ್ಲಿ ಒಂದೆ ರೀತಿಯ ಕಾನೂನು ತರಬೇಕಾಗಿದೆ.  7ಸ್ಥಾನ ಬೇಂಜ್ ನ್ಯಾಯಲಯದಲ್ಲಿ ಈ ಆದೇಶವಾಗಿದೆ, ಮುಂದಿನ ದಿನದಲ್ಲಿ ಸಮಾಜ 9 ಸ್ಥಾನ ಪೀಠದ ನ್ಯಾಯದಲ್ಲಿ ಕೇಸ್ ದಾಖಲಿಸಲು ಕಟ್ಟಿಬದ್ಥವಾಗಬೇಕಿದೆ ಎಂದರು. 


ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಾಗೂ ಬಂಜಾರ ಸಂಘದ ಅಧ್ಯಕ್ಷರಾದ ಆಶೋಕನಾಯ್ಕ ವಹಿಸಿದ್ದರು, ಮುಖ್ಯ ಅತಿಥಿ ಯಾಗಿ ಎಂಎಲ್ ಸಿ ಪ್ರಕಾಶ್ ರಠೋಡ್, ಶಾಸಕ ಅವಿನಾಶ್ ಜಾದವ್,ಡಾ. ಚಂದು ಲಾಂಬಾಣಿ,  ಶಾರದ ಪೋರ್ಯಾನಾಯ್ಕ, ಮಾಜಿ ಶಾಸಕ ರಾಜೀವ್ ಕುಡುಚಿ, ಬಸವರಾಜನಾಯ್ಕ, ಮನೋಹರ ಐನಾಪೂರ ಹಾಗೂ ಮಾಜಿ ಸಂಸದ ಉಮೇಶ್ ಜಾದವ್, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರು ಜಯದೇವ್ ನಾಯ್ಕ, ಮಾಜಿ ನಿಗಮದ ಅದ್ಯಕ್ಷ ಬಾಲರಾಜ್ ನಾಯ್ಕ, ಒಕ್ಕೂಟದ ಕಾರ್ಯಧ್ಯಕ್ಷ ರಾಘವೇಂದ್ರನಾಯ್ಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.