ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ-ಕೃಷ್ಣಪ್ಪ ಖಡಕ್ ಎಚ್ಚರಿಕೆ
ಸುದ್ದಿಲೈವ್/ಶಿವಮೊಗ್ಗ
ಶುಗರ್ ಫ್ಯಾಕ್ಟರಿ ಭೂಮಿಯಲ್ಲಿ ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸೋಗಾನೆ ಕೃಷ್ಣಪ್ಪ ಎಚ್ಚರಿಸಿದ್ದಾರೆ.
ಶುಗರ್ ಫ್ಯಾಕ್ಟರಿ ಜಾಗವನ್ನ ರಿಸ್ಟೋರ್ ಗೆ ನ್ಯಾಯಾಲಯದ ಮೊರೆಹೋಗಲು ಡಿಸಿ ತಿಳಿಸಿದ್ದಾರೆ. ಆದರೆ ಸದಾಶಿವಪುರದಲ್ಲಿ ಸಾಗುವಳಿ ಚೀಟಿ ನೀಡಲಾಗಿದೆ. ಜನವರಿ 12 ರಂದು ಒಕ್ಕಲೆಬ್ವಿಸದಂತೆ ಹೈಕೋರ್ಟ್ ಮೊರೆ ಹೋಗಲಾಗುತ್ತಿದೆ. ಆದರೆ ಅಧಿಕಾರಿಗಳು ರೈತರ ಪರ ನಿಲ್ಲದೆ ಶುಗರ್ ಫ್ಯಾಕ್ಟರಿಯ ಪರ ನಿಲ್ಲುತ್ತಿದ್ದಾರೆ ಎಂದು ಆರೋಪಿಸಿದರು.
ಶುಗರ್ ಫ್ಯಾಕ್ಟರಿ ಮಾಲೀಕರ ಹೆಸರು ಪರಿಗಣಿಸುವಂತೆ ನ್ಯಾಯಾಲಯ ಸೂಚಿಸಿದರು ಬಾಕಿ ಇರುವ ಪ್ರಕರಣ ಅದರ ಮೇಲೆ ಹಾಗೆ ಉಳಿದುಕೊಂಡಿದೆ. ಹಾಗಾಗಿ ಕೋರ್ಟ್ ನಲ್ಲೂ ಹೋರಾಡಲಾಗುವುದು ಒಂದು ಭಾಗವಿದೆ. ಜೊತೆಗೆ ಜನವರಿ 12 ಕ್ಕೆ ಒಕ್ಕಲೆಬ್ಬಿಸಲು ಬಂದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಯಾರು ಯಾರು ಮನೆ ಕಟ್ಟಿದ್ದಾರೆ ಅವರಿಗೆ ಹಕ್ಕು ಪತ್ರ ನೀಡಬೇಕು ಆದೇಶದ ಹಿನ್ಬಲೆಯಲ್ಲಿ ಹಕ್ಕುಪತ್ರ ನೀಡಲು ಸರ್ವೆ ನಡೆಸಲು ಡಿಸಿ ಇತ್ತೀಚೆಗೆ ಆದೇಶಿಸಿದ್ದಾರೆ. ಇದಕ್ಕೆ ಸೋಗಾನೆ ಕೃಷ್ಣಪ್ಪ ಸ್ವಾಗತಿಸಿದ್ದಾರೆ. ಹಾಗಾಗಿ ಒಡೆದು ಹಾಕಿರುವ ಮನೆಗಳನ್ನೂ ರಿಸ್ಟೋರ್ ಮಾಡಿಕೊಡಬೇಕೆಂದರು.
ರೈತರ ಭೂಮಿಯನ್ನ ಕಸಿದುಕೊಳ್ಳುವ ಪ್ರಯತ್ನವಿದೆ. ಆದರೆ ಸರ್ಕಾರ, ವಿಪಕ್ಷಗಳು ಸೇರಿ ಮನೆ ಕೊಡಿಸಬೇಕು. ಕೆಲ ಮನೆಗಳನ್ನ ಒಡೆಯಲಾಗಿದೆ. ಮನೆ ಒಡೆದ ಜಾಗವನ್ನ ಡಿಸಿ ತಪಾಸಣೆ ನಡೆಸಬೇಕು. ಮನೆಗಳನ್ನ ಕಟ್ಟಿಕೊಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಕೃಷ್ಣಪ್ಪ ಆಗ್ರಹಿಸಿದ್ದಾರೆ.
ಶುಗರ್ ಫ್ಯಾಕ್ಟರಿಯ ಮಣಿವೇಲನ್ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ತನಿಖೆಯಾಗಬೇಕು. ಶುಗರ್ ಫ್ಯಾಕ್ಟರಿಗೆ ಮೊದಲ ಮಾಲೀಕರು ಬಾಂಬೆಯವರು, ನಂತರ ತುಂಗಭದ್ರ ಶುಗರ್ ಫ್ಯಾಕ್ಟರಿ ಎಂದು ಇದೆ. ಈ ಮಣಿವೇಲನ್ ಯಾರು ಎಂಬುದೇ ತನಿಖೆಯಾಗಬೇಕು. ಹಾಗೂ ಶುಗರ್ ಫ್ಯಾಕ್ಟರಿ ಇದ್ದ ಜಾಗವನ್ನ ಅಲಿನೇಷನ್ ಗೆ ಅರ್ಜಿ ಹಾಕಿಕೊಳ್ಳಲಾಗಿದೆ. ಕಾರ್ಖಾನೆ ರಿಸ್ಟೋರ್ ಮಾಡುವುದಾದರೆ ಅಲಿನೇಷನ್ ಅರ್ಜಿಯಾಕೆ ಹಾಕಿಕೊಂಡಿರುವುದು ಎಂದು ಪ್ರಶ್ನಿಸಲಾಗಿದೆ. ಇದರ ಹಿಂದೆ ರಿಯಲ್ ಎಸ್ಟೇಟ್ ಮಾಡುವ ಹುನ್ನಾರ ಎಂದು ದೂರಿದ್ದಾರೆ.
ಸದಾಶಿವ ನಗರದ 111 ಮತ್ತು 112 ರಲ್ಲಿರುವ 655 ಎಕರೆಗೆ 2022 ರಲ್ಲಿ ಹೈಕೋರ್ಟ್ ಸ್ಟೇ ಕೊಟ್ಟಿದೆ ಸ್ಟೇ ಇದ್ದರು ಜನವರಿ 12 ರ ಒಳಗೆ ಒಕ್ಕಲೇಳುವಂತೆ ಸೂಚಿಸಲಾಗಿದೆ. ಹಾಗಾಗಿ ಹೋರಾಟ ಅನಿವಾರ್ಯ ಎಂದರು.
ಕಾರ್ಮಿಕರ 100-150 ಜನರಿಗೆ ಹಣ ನೀಡುವುದು ಬಾಕಿದೆ. 2000 ಇಸವಿ ವರೆಗೆ ತುಂಗಭದ್ರ ಶುಗರ್ ಫ್ಯಾಕ್ಟರಿ ಅಸ್ಥಿತ್ವದಲ್ಲಿ ಇಲ್ಲ ದೇವಿ ಶುಗರ್ ಅಸ್ಥಿತ್ವದಲ್ಲಿದೆ ಎಂದು ಕೃಷ್ಣಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ-https://suddilive.in/archives/5813