ಕ್ರೈಂ ನ್ಯೂಸ್
ರಸ್ತೆ ಅಪಘಾತ-ಬಾಲಕ ಸಾವು
ಸುದ್ದಿಲೈವ್/ಶಿವಮೊಗ್ಗ
ಖಾಸಗಿ ಬಸ್ ಶಾಲೆಗೆ ತೆರಳು ಸಿದ್ದನಾಗಿದ್ದ ಬಾಲಕನಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯ ಮಲವಗೊಪ್ಪದಲ್ಲಿ ನಡೆದಿದೆ.
ನಗರದ ಮಲವಗೊಪ್ಪದಲ್ಲಿ ಚಿರಂತ್ ಎಂಬ ಬಾಲಕ ಖಾಸಗಿ ಶಾಲೆಗೆ ಹೋಗಲು ನಿಗದಿತ ನಿಲ್ದಾಣದ ಕಡೆ ಸಾಗುತ್ತಿದ್ದ ವೇಳೆ ಭದ್ರಾವತಿಯಿಂದ ಬಂದ ಬೈಕ್ ಡಿಕ್ಕಿಹೊಡೆದಿದೆ. ತಕ್ಷಣವೇ ಆತನನ್ನ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಬಾಲಕ ಮಾರ್ಗ ಮಧ್ಯೆಯಲ್ಲಿ ಅಸುನೀಗಿದ್ದಾನೆ.
ಶಿವಮೊಗ್ಗದಲ್ಲಿರುವ ಖಾಸಗಿ ಶಾಲೆಗೆ ಬರಲು ಚರಂತ್ ಬಸ್ ಗಾಗಿ ನಿಲ್ದಾಣದ ಕಡೆ ಧಾವಿಸುವಾಗ ಘಟನೆ ನಡೆದಿದೆ. ಮಲವಗೊಪ್ಪದ ಹೊಸ ಬಡಾವಣೆಯಲ್ಲಿ ಚರಂತ್ ಮತ್ತು ಪೋಷಕರು ವಾಸವಾಗಿದ್ದರು. ಮಗನನ್ನ ಕಖೆದುಕೊಂಡ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ.
ಇದನ್ನೂ ಓದಿ-https://suddilive.in/archives/7656