Follow on Google news Follow on Google news
ಸ್ಥಳೀಯ ಸುದ್ದಿಗಳು

ನೂತನ ಶಾಸಕರ ಭೇಟಿ ನಂತರವಾದರೂ ಖಾಸಗಿ ಬಸ್ ನಿಲ್ದಾಣಕ್ಕೆ ಮುಕ್ತಿ ಸಿಗುತ್ತಾ?

ಸುದ್ದಿಲೈವ್/ಶಿವಮೊಗ್ಗ

ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ವಾಹಣೆ ತಪ್ಪಿ ದಶಕಗಳೇ ಕಳೆದಿದೆ. ಈ ಹಿಂದಿನ ಶಾಸಕರು ಭೇಟಿ ನೀಡಿ ಬಂದರೂ ಯಾವ ಪ್ರಯೋಜನವಾಗಿಲ್ಲ. ಕಂಡಕಂಡಲ್ಲಿ ಕುಡುಕರ ಹಾವಳಿ, ಮಲಮೂತ್ರಗಳ ದೃಶ್ಯಗಳು ಕಣ್ಣಿಗೆ ರಾಚುವಂತೆ ಕಾಣುತ್ತದೆ.

ಭಿಕ್ಷುಕರ ಹಾವಳಿ, ರಾತ್ರಿಯ ನಂತರ ಖಾಸಗಿ ಬಸ್ ನಿಲ್ದಾಣದಲ್ಲಿ ಅಂಗಡಿಗಳು ಇರದ ಕಾರಣ ಇಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಇಂದು ನೂತನ ಶಾಸಕಶಾಸಕ ಚನ್ನಬಸಪ್ಲ ಬಸ್ ನಿಲ್ದಾಣಕ್ಕೆ  ದಿಢೀರ್ ಭೇಟಿ ನೀಡಿದರು

ಶಿವಮೊಗ್ಗದ ಹೃದಯ ಭಾಗದಲ್ಲಿ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ನೂತನ ಶಾಸಕ ಚನ್ನಬಸಪ್ಪಗೆ  ಶಿವಮೊಗ್ಗ ಪಾಲಿಕೆ ಮೇಯರ್ ಶಿವಕುಮಾರ್ ಗೆ ಸಾಥ್ ನೀಡಿದ್ದಾರೆ. ಖಾಸಗಿ ಬಸ್ ನಿಲ್ದಾಣದ ಬಗ್ಗೆ ಹಲವು ದೂರಿನ ಹಿನ್ನೆಲೆ ದಿಢೀರ್ ಭೇಟಿ ನೀಡಲಾಗಿದೆ.

ಭೇಟಿ ವೇಳೆ ಅಧಿಕಾರಿಗಳಿಗೆ ತರಾಟೆಗೆ  ಶಾಸಕ ಚನ್ನಿ. ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ.ಬಸ್ ನಿಲ್ದಾಣದ ಸ್ವಚ್ಚತೆಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಇನ್ನು ಮುಂದಾದರೂ ಬಸ್ ನಿಲ್ದಾಣ ಸ್ವಚ್ಛತೆ ಕಾಣಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/?p=18091

Related Articles

Leave a Reply

Your email address will not be published. Required fields are marked *

Follow on Google news
Back to top button