ರಾಜಕೀಯ ಸುದ್ದಿಗಳು

ಈಶ್ವರಪ್ಪನವರ ಲೋಕ ಸ್ಪರ್ಧೆಗೆ ಭೀಮನಟ್ಟೆಯ ಶ್ರೀಗಳ ಆಶೀರ್ವಾದ ಹೇಗಿತ್ತು ಗೊತ್ತಾ?

ಸುದ್ದಿಲೈವ್/ತೀರ್ಥಹಳ್ಳಿ

ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ಕೆ.ಎಸ್‌.ಈಶ್ವರಪ್ಪ ಅವರಿಗೆ ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ಬೆಂಬಲ ಸೂಚಿಸಿ, ನಾಮಪತ್ರ ಠೇವಣಿಗೆ ಒಂದು ಸಾವಿರ ರು.ಗಳನ್ನು ಆಶೀರ್ವಾದ ಪೂರ್ವಕವಾಗಿ ನೀಡಿದ್ದಾರೆ.

ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠಕ್ಕೆ ಈಶ್ವರಪ್ಪ ಬೆಂಬಲಿಗರು ಭಾನುವಾರ ಭೇಟಿ ನೀಡಿದಾಗ, ಈಶ್ವರಪ್ಪ ಅವರು ಬಿಜೆಪಿಯ ಹಿರಿಯ ನಾಯಕರು ಅಂತವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದೇ ಎಂದು ಬಗ್ಗೆ ಸ್ವಾಮೀಜಿ ವಿಚಾರಿಸಿದ್ದಾರೆ.

ಯಾವ ಉದ್ದೇಶಕ್ಕಾಗಿ ಈಶ್ವರಪ್ಪ ಸ್ಪರ್ಧೆಗೆ ಮುಂದಾಗಿದ್ದಾರೆ ಎಂಬುದರ ಬಗ್ಗೆ ಬೆಂಬಲಿಗರು ಸಂಪೂರ್ಣ ಮಾಹಿತಿ ತಿಳಿಸಿದ ಬಳಿಕ ಸ್ವಾಮೀಜಿಯವರು ಈಶ್ವರಪ್ಪ ಅವರು ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ಈಶ್ವರಪ್ಪ ಹಿಂದುತ್ವ ಹಾಗೂ ಧರ್ಮದ ಪರವಾಗಿ ಹೋರಾಟ ಮಾಡಿದವರು. ಅಂತವರ ನಾಯಕತ್ವದ ಅಗತ್ಯತೆ ಇದೆ. ಅವರು ರಾಜಕಾರಣದಲ್ಲಿ ಇರಬೇಕು.

ಅವರಿಗೆ ಅನ್ಯಾಯ ಆಗಬಾರದು. ಅವರಿಗೆ ನಮ್ಮ ಬೆಂಬಲ ಇದೆ. ತಾವು ಅವರಿಗೆ ಮತ ನೀಡುತ್ತೇವೆ. ಈಶ್ವರಪ್ಪ ಸ್ಪರ್ಧೆ ಮಾಡಿ ಗೆಲ್ಲಬೇಕು ಎಂದು ಆಶೀರ್ವಾದ ಮಾಡಿದರು.

ಇದನ್ನೂ ಓದಿ-https://suddilive.in/archives/12358

Related Articles

Leave a Reply

Your email address will not be published. Required fields are marked *

Back to top button