ರಾಜಕೀಯ ಸುದ್ದಿಗಳು

ಹೊಳೆಹೊನ್ನೂರಿನಲ್ಲಿ ಆಯನೂರು ಮಂಜುನಾಥ್ ಮತಯಾಚಿಸಿದ್ದು ಯಾರಿಗೆ?

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಗೆ ಮತಹಾಕಿ ಎನ್ನಲು ಹೋಗಿ ವೇದಿಕೆಯ ಮೇಲೆ ಬಿಜೆಪಿಗೆ ಮತಹಾಕಿ ಎಂದು ಹೇಳಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಯಡವಟ್ಟು ಮಾಡಿಕೊಂಡಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡು ಬಾಯಿತಪ್ಪಿನಿಂದ ಬಂದ ಮಾತು ಎಂದು ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿದ್ದಾರೆ.

ಹೊಳೆಹೊನ್ನೂರಿನಲ್ಲಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ವೇದಿಕೆಯ ಮೇಲೆ ಉಪಸ್ಥಿತರಿದ್ದ ವೇಳೆ ಭಾಷಣದ ಕೊನೆಯಲ್ಲಿ ಬಿಜೆಪಿಗೆ ಮತಹಾಕಿ ಎಂದು ಹೇಳಿದ್ದಾರೆ. ಬಿಜೆಪಿಗೆ ಮತ ಹಾಕಿ ಎಂದ ಕಾರಣ ಸಭೀಕರೆ ತಕ್ಷಣ ಎಚ್ಚರಿಸಿ ಬಿಜೆಪಿ ಅಲ್ಲ, ಕಾಂಗ್ರೆಸ್ ಎಂದು ತಿಳಿಸಿದರು.

ತಕ್ಷಣವೇ ವೇದಿಕೆಯಲ್ಲಿ ಮೊಬೈಲ್ ನೋಡಿಕೊಂಡು ಕುಳಿತಿದ್ದ ಮಧು ಬಂಗಾರಪ್ಪನವರ ಕಡೆ ತಿರುಗಿ ಕೈಮುಗಿದ ಆಯನೂರು ಮಂಜುನಾಥ್ ಬಾಯಿ ಅಂಚಿನಿಂದ ಉದುರಿದ ತಪ್ಪು ಎಂದು ಕೇಳಿ ಬಿಜೆಪಿಗೆ ಹಾಕಬೇಡಿ ಎಂದು ಹೇಳಲು ಹೋಗಿದ್ದು ಎಂದು ಸರಿಪಡಿಸಿಕೊಳ್ಳು ಪ್ರಯತ್ನ ನಡೆಸಿದರು. ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿ ಮಾತು ಮುಗಿಸಿದ ಆಯನೂರಿನ ನಂತರ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ನಾನು ವೇದಿಕೆಗೆ ಬಂದ ತಕ್ಷಣ ಸಾರ್ವಜನಿಕರು ಅಲರ್ಟ್ ಇದ್ದಾರೋ ಅಥವಾ ಇಲ್ಲವೋ ಎಂದು ಪರೀಕ್ಷೆಗೆ ಒಳಪಡಿಸಿ ಎಂದು ಆಯನೂರಿಗೆ ಹೇಳಿದ್ದೆ. ಪರೀಕ್ಷೆಯಲ್ಲಿ ನೀವು ಪಾಸ್ ಆಗಿದ್ದಾರೆ ಎಂದು ಹೇಳಿದರು. ಇದರಿಂದ ಆಯನೂರು ಅವರಿಗೆ ಬಿಜೆಪಿಯ ನಂಟು ಕಾಂಗ್ರೆಸ್ ಗೆ ಬಂದರೂ ಬಿಟ್ಟಿಲ್ಲ ಎಂಬಂತಾಗಿದೆ.

ಇದನ್ನೂ ಓದಿ-https://suddilive.in/archives/11480

Related Articles

Leave a Reply

Your email address will not be published. Required fields are marked *

Back to top button