ಕ್ರೈಂ ನ್ಯೂಸ್

ದರೋಡೆಗೆ ಸ್ಕೆಚ್ ಹಾಕಿದ್ದ ಗ್ಯಾಂಗ್-ಇಬ್ಬರು ಅರೆಸ್ಟ್

ಸುದ್ದಿಲೈವ್/ಶಿವಮೊಗ್ಗ

ಬಂಗಾರದ ವಸ್ತುಗಳನ್ನ ದೋಚಿಕೊಂಡು ಹೋಗಲು ಸಂಚು ಹಾಕುತ್ತಿದ್ದ ಗ್ಯಾಂಗ್ ವೊಂದನ್ನ ಹಿಡಿದ ದೊಡ್ಡಪೇಟೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಮಾ. 23 ರಂದು 4-5 ಜನರು ಅಪಾಯಕರವಾದ ಆಯುಧಗಳನ್ನು ಹೊಂದಿ ಶರಾವತಿನಗರ ಚಾನಲ್‌ ಹತ್ತಿರ ಶರಾವತಿನಗರದಿಂದ ವಿನೋಬನಗರದ ಕಡೆ ಹೋಗುವವರನ್ನು ತಡೆದು ಆಯುದಗಳನ್ನು ತೋರಿಸಿ ಹೆದರಿಸಿ ಅವರ ಬಳಿ ಇರುವ ನಗದುಹಣ ಬಂಗಾರದ ಒಡವೆಗಳನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದೆ.

ಸ್ಥಳಕ್ಕೆ ಹೋಗಿ ನೋಡಿದ ಪೊಲೀಸರಿಗೆ 4-5 ಜನರು ಅಪಾಯಕಾರವಾದ ಆಯುಧಗಳನ್ನು ಹೊಂದಿ ಸುಲಿಗೆ ದರೋಡೆಯಂತಹ ಕೃತ್ಯವನ್ನವೆಸಗಲು ಹೊಂಚು ಹಾಕುತ್ತಿರುವಂತೆ ಕಂಡುಬಂದಿದೆ. ಈ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 2 ಜನರನ್ನು ಹಿಇಯಲಾಗಿದೆ, ಮೂವರು ಓಡಿ ಹೋಗಿದ್ದಾರೆ.

ಆರೋಪಿತರನ್ನು ಕೂಲಕುಂಶವಾಗಿ ವಿಚಾರ ಮಾಡಿದಾಗ ಹಣದ ಅವಶ್ಯಕತೆ ಇದ್ದುದ್ದರಿಂದ ನಗದುಹಣ ಮತ್ತು ಬಂಗಾರದ ಒಡವೆಗಳನ್ನು ಹೊಂದಿರುವ ಜನರನ್ನು ತಡೆದು ಅವರ ಮುಖಕ್ಕೆ ಕಾರದ ಪುಡಿ ಎರಚಿ ಆಯುದಗಳನ್ನು ತೋರಿಸಿ ಹೆದರಿಸಿ ಅವರಿಂದ ನಗದುಹಣ ಮತ್ತು ಬಂಗಾರದ
ಒಡವೆಗಳನ್ನು ಕಿತ್ತುಕೊಳ್ಳಲು ಹೊಂಚು ಹಾಕುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

1ನೇ ಆರೋಪಿ ವಿನಯ್ ವಿ ಈತನ ಬಳಿ 1 ½ ಅಡಿ ಉದ್ದದ ಕಬ್ಬಿಣದ ರಾಡು, 2ನೇ ಆರೋಪಿ ಸೃಜನ್ ಈತನ ಬಳಿ 1 ಅಡಿ ಉದ್ದದ ಪ್ಲಾಸ್ಟಿಕ್ ಹಿಡಿ ಇರುವ ಸ್ಟೀಲ್ ಡ್ರಾಗನ್ ಪತ್ತೆಯಾಗಿದೆ.

ಓಡಿಹೋದ ಆರೋಪಿತರು ತಂದಿದ್ದ ಸುಮಾರು 2 ½ ಅಡಿ ಉದ್ದದ ಮರದ ಹಿಡಿ ಇರುವ ಕಬ್ಬಿಣದ ಲಾಂಗ್ ಹಾಗೂ ಸುಮಾರು 50 ಗ್ರಾಂ ತೂಕದ ಖಾರದ ಪುಡಿ ಇರುವ ಒಂದು ಪ್ಲಾಸ್ಟಿಕ್ ಕಪ್ಪು ಕವರ್ ನ್ನ ವಶಕ್ಕೆ ಪಡೆಯಲಾಗಿದೆ.

ಓಡಿ ಹೋದವರಲ್ಲಿ ಮಧು ಯಾನೆ ಕಡ್ಡಿಮಧು, ಶ್ರೀನಿವಾಸ ಕಡ್ಡಿ ಸೀನಾ, ದೀಕ್ಷಿತ್ ಎಂದು ಗುರುತಿಸಲಾಗಿದ್ದು ಐದು ಜನರ ಮೇಲೆ ಸುಮೋಟೋ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/11476

Related Articles

Leave a Reply

Your email address will not be published. Required fields are marked *

Back to top button