ಕ್ರೈಂ ನ್ಯೂಸ್

ಈಶ್ವರಪ್ಪರಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್

ಸುದ್ದಿಲೈವ್/ಶಿವಮೊಗ್ಗ

ದಾವಣಗೆರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಹೇಳಿಕೆ ನೀಡಿದ್ದ ಈಶ್ವರಪ್ಪರಿಗೆ ಪೊಲೀಸರು ನೋಟೀಸ್ ನೀಡಲಾಗಿದೆ.

ರಾಷ್ಟ್ರ ದ್ರೋಹಿಗಳ ಗುಂಡಿಕ್ಕಿ ಕೊಲ್ಲುವ ಕಾನೊನು ತರುವಂತೆ ಹೇಳಿಕೆ ನೀಡಿದ್ದ ಈಶ್ವರಪ್ಪರ ವಿರುದ್ಧ ದಾವಣಗೆರೆಯಲ್ಲಿ  ಪ್ರಕರಣ ದಾಖಲಾಗಿದೆ. ಈಶ್ವರಪ್ಪ ವಿರುದ್ದ ದಾಖಲಾಗಿದ್ದ ಪ್ರಕರಣದಲ್ಲಿ ದಾವಣಗೆರೆ ಪೊಲೀಸರಿಂದ  ನೋಟೀಸ್ ಜಾರಿಯಾಗಿದೆ.

ಶಿವಮೊಗ್ಗದ ಈಶ್ವರಪ್ಪ ಅವರ ನಿವಾಸಕ್ಕೆ ಬಂದು ಪೊಲೀಸರು ನೋಟೀಸ್ ನೀಡಿದ್ದಾರೆ. ಶಿವಮೊಗ್ಗದ ಮಲ್ಲೇಶ್ವರ ಬಡಾವಣೆಯಲ್ಲಿರುವ ಈಶ್ವರಪ್ಪ ನಿವಾಸಕ್ಕೆ ಪೊಲೀಸರು ಬಂದು ನೋಟೀಸ್ ನೀಡಿದ್ದಾರೆ. ಪಿಎಸ್ ಐ ಲತಾ ಅವರಿಂದ ನೋಟೀಸ್ ನೀಡಲಾಗಿದೆ.

ದಾವಣಗೆರೆಯ ಬಡಾವಣೆ ಠಾಣೆ ಪಿಎಸ್ ಐ, ಇದೇ 15 ರಂದು ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ-https://suddilive.in/archives/8750

Related Articles

Leave a Reply

Your email address will not be published. Required fields are marked *

Back to top button