Suddilive || Shivamogga
ಬಿಸಿಲಿನ ಬೇಗೆಯಿಂದ ಬಳಲುವ ಪ್ರಾಣಿ ಪಕ್ಷಿಗಳ ನೆರವಿಗೆ ಧಾವಿಸಿದ ಡಿಕೆ ಶಿವಕುಮಾರ್ ಬ್ರಿಗೇಡ್! -DK Shivakumar Brigade rushed to the aid of animals and birds
ಶಿವಮೊಗ್ಗ ನಗರದಲ್ಲಿ ಕೆಲವು ದಿನಗಳಿಂದ 41 ರಿಂದ 42 ಸೆಂಟಿಗ್ರೇಡ್ ಬಿಸಿಲಿನ ತಾಪಮಾನವಿದ್ದು, ಮನುಷ್ಯರೇ ಕತ್ತರಿಸಿ ಹೋಗಿದ್ದಾರೆ. ಅದೇ ರೀತಿ ಪ್ರಾಣಿ ಪಕ್ಷಿಗಳಿಗೂ ಈ ಬಿಸಿಲ್ಲಿನ ಬೇಗೆಯಿಂದ ಆಹಾರ ಮತ್ತು ನೀರಿನ ಕೊರತೆ ಹೆಚ್ಚಾಗಿದೆ.
ಪ್ರತಿದಿನವೂ ಪರಿತಾಪಿಸುವಂತಾಗಿದೆ. ಇಂಥ ಸಂದರ್ಭದಲ್ಲಿ.. ಡಿಕೆ ಶಿವಕುಮಾರ್ ಬ್ರಿಗೇಡ್ ವತಿಯಿಂದ.. ಪ್ರಾರಂಭಿಕವಾಗಿ ಇಂದು ನಗರದ ಪ್ರವಾಸಿ ಮಂದಿರ.. ಕುವೆಂಪುರ ರಸ್ತೆ ಮಿಷನ್ ಕಾಂಪೌಂಡ್ ಪಾರ್ಕ್.. ಶರಾವತಿ ನಗರದ ರುದ್ರಭೂಮಿ.. ಮುಂತಾದ ಕಡೆಗಳಲ್ಲಿ 60ಕ್ಕೂ ಹೆಚ್ಚು ನೀರು ಮತ್ತು ಧಾನ್ಯಗಳ ಸಂಗ್ರಹಣೆ ಮಾಡಿ ಮರಗಳಿಗೆ ಕಟ್ಟಲಾಯಿತು.
ಎರಡು ದಿವಸಕ್ಕೂಮೇ ಕಟ್ಟಿರುವ ಬಾಟಲಿಗಳ ಆಹಾರ ಮತ್ತು ನೀರಿನ ಬಾಟಲಿಗಳನ್ನು ಪರೀಕ್ಷಿಸಿ ನಂತರ ನೀರು ಮತ್ತು ಆಹಾರವನ್ನು ಪುನರ ಒದಗಿಸಲಾಗುವುದು. ಮುಂಗಾರು ಮಳೆ ಪ್ರಾರಂಭವಾಗಿ ಸಮೃದ್ಧಿಯಾಗಿ ಮಳೆ ಬರುವವರೆಗೂ ಪಕ್ಷಿಗಳಿಗೆ ನೀರು ಮತ್ತು ಆಹಾರ ಒದಗಿಸುವ ಸಂಕಲ್ಪ ಮಾಡಲಾಯಿತು . ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಡಿಕೆ ಶಿವಕುಮಾರ್ ಬ್ರಿಗೇಡ್ ನಾ.. ಕೆ ದೇವೇಂದ್ರಪ್ಪ... ಕವಿತಾ ರಾಘವೇಂದ್ರ... ಕಾರ್ಮಿಕ ಕಾಂಗ್ರೆಸ್ನ ಕಾರ್ಯಾಧ್ಯಕ್ಷ ಫ್ಲವರ್ ಕುಮಾರ... ಕೆಪಿಸಿಸಿ ಸಂಯೋಜಿಕೆಯಾದ ಕವಿತಾ, ರಮೇಶ್, ಸಮೃದ್ಧಿ ಟ್ರಸ್ಟ್ ತೇಜಸ್ವಿನಿ.. ನವಾಜ್.. ಮುಂತಾದವರು ಹಾಜರಿದ್ದರು.
DK Shivakumar Brigade