Suddilive || Shivamogga
ವಿಶ್ವ ಮತ್ತು ಸಂದೀಪನ ಮೇಲೆ ಅಟ್ಯಾಕ್ ಗೆ ಯತ್ನ!Attempted attack on Vishwa and Sandeep!
ಭದ್ರಾವತಿಯಲ್ಲಿ ನಿನ್ನೆ ಮುಸ್ಸಂಜೆ ಹೊತ್ತಲ್ಲಿ ಕಾರಲ್ಲಿ ಬಂದ ಐವರು ಯುವಕರ ಗುಂಪೊಂದು ಬೈಕ್ ಸವಾರರೀರ್ವರಿಗೆ ಲಾಂಗು,ಮಚ್ಚುಗಳಿಂದ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ನಗರದ ಹಳದಮ್ಮನ ಬೀದಿ ವಾಸಿ ಗಳಾದ ವಿಶ್ವ ಯಾನೆ ಮುದ್ದೆ ಮತ್ತು ಸಂದೀಪ ಯಾನೆ ಕಡ್ಡಿ ಸಂದೀಪ ಎನ್ನುವವರು ಶುಕ್ರವಾರ ಸಂಜೆ ಬೈಕಿನಲ್ಲಿ ಕುಳಿತು ಕಂಚಿಬಾಗಿಲ ವೃತ್ತದ ಮೂಲಕ ಹಾದು ಹೋಗುತ್ತಿದ್ದಾಗ ಕಾರೊಂದರಲ್ಲಿ ಬಂದ ಐವರು ಯುವಕರ ಗುಂಪು ಬೈಕಿನ ಹಿಂಬಾಗಕ್ಕೆ ಡಿಕ್ಕಿಹೊಡೆದಿದ್ದಾರೆ.
ಬೈಕ್ನಿಂದ ವಿಶ್ವ ಮತ್ತು ಸಂದೀಪ ಕೆಳಗೆಬಿದ್ದಿದ್ದಾರೆ, ಕಾರಲ್ಲಿ ಬಂದವರು ಕಾರಿಂದ ಕೆಳಗಿಳಿದು ಕೈಯಲ್ಲಿ ಮಚ್ಚು ಲಾಂಗುಗಳನ್ನು ಹಿಡಿದುಕೊಂಡು ವಿಶ್ವ ಮತ್ತು ಸಂದೀಪರ ಮೇಲೆ ಹಲ್ಲೆಗೆ ಪ್ರಯತ್ನಿಸಿದಾಗ ಇಬ್ಬರು ಹಲ್ಲೆಯಿಂದ ತಪ್ಪಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜನ ಸೇರುತ್ತಿದ್ದಂತೆ ಕಾರಲ್ಲಿ ಬಂದ ಐವರು ಕಾರಲ್ಲಿ ಕುಳಿತು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಲ್ಲೆಯಿಂದ ತಪ್ಪಸಿಕೊಂಡ ವಿಶ್ವ ಮತ್ತು ಸಂದೀಪ ಅವರುಗಳಿಗೆ ಕಾರು ಬೈಕಿಗೆ ಗುದ್ದಿದ ಪರಿಣಾಮ ಕೆಳಗೆ ಬಿದ್ದು ಸಣ್ಣ ಪುಟ್ಟ ಪೆಟ್ಟಾಗಿದ್ದು, ಅವರಿಬ್ಬರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಘಟನೆ ಕುರಿತಂತೆ ಹಳೇನಗರ ಪೋಲಿಸ್ ಠಾಣೆಯಲ್ಲಿ ದೂರುದಾಖಲಾಗಿದೆ.
ಹಲ್ಲೆಗೆ ಯತ್ನಿಸಿ ಪರಾರಿಯಾದವರ ಪತ್ತೆಗಾಗಿ ಪೋಲಿಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಎರಡು ತಂಡಗಳ ನಡುವೆ ಕೆಲವು ತಿಂಗಳ ಹಿಂದೆ ತರಿಕೆರೆ ರಸ್ತೆಯಲ್ಲಿ ನಡೆದ ಹೊಡೆದಾಟದ ಸಂಬಂಧ ಪ್ರತಿಕಾರಕ್ಕಾಗಿ ಈ ಘಟನೆ ನಡೆದಿದೆ ಎನ್ನಲಾಗಿದ್ದುಪೋಲಿಸರ ತನಿಖೆಯಿಂದ ಸತ್ಯಾಂಶ ತಿಳಿದುಬರಬೇಕಿದೆ.
Attempted attack