Suddilive || Shivamogga
ನಗರದ ಹಾಟ್ ಆಫ್ ದ ಸಿಟಿಯಲ್ಲೇ ಬೆಂಕಿಯ ದುರಂತ,ತಪ್ಪಿದ ಭಾರಿ ಅನಾಹುತ!Fire tragedy in the heart of the city, a major disaster averted!
ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬಿರಿಯಾನಿ ಹೌಸ್ ನಲ್ಲಿ ಭಾರಿ ದುರಂತವೊಂದು ತಪ್ಪಿದೆ. ಬಿರಿಯಾನಿ ಹೌಸ್ ನವರ ಸಮಯ ಪ್ರಜ್ಞೆಯಿಂದ ಈ ಅನಾಹುತ ಸಣ್ಣದರಲ್ಲಿ ಮುಗಿದಿದೆ.
ಇಂದು ಬೆಳಿಗ್ಗೆ ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಬಿರಿಯಾನಿ ಹೌಸ್ ನ ಕಿಚನ್ ಮನೆಯಲ್ಲಿ ಮಹಿಳೆಯೊಬ್ವರು ಅಡುಗೆ ಮಾಡುವ ವೇಳೆ ಗ್ಯಾಸ್ ಲೀಕೇಜ್ ನಿಂದ ಬೆಂಕಿಯೊಂದು ಕಾಣಿಸಿಕೊಂಡಿತ್ತು. ಮಹಿಳೆಯ ಕೈ ಮತ್ತು ಹಣೆಗೆ ಸುಟ್ಟಗಾಯಗಳಾಗಿ ಇನ್ನೇನು ಹರಡಬೇಕು ಅಷ್ಟರಲ್ಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ಆರಿಸಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಯವುದು ತಡವಾದರೂ ದೊಡ್ಡ ದುರಂತವೇ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ.
a major disaster averted!