Suddilive || Shivamogga
ಕೂಡ್ಲಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ ಪರಮೇಶ್ವರಪ್ಪ ಉಪಾಧ್ಯಕ್ಷರಾಗಿ ಅರಳಿಹಳ್ಳಿ ರಾಜಣ್ಣ ಅವಿರೋಧ ಆಯ್ಕೆ-M Parameshwarappa elected unopposed as President of Kudligere Agricultural Cooperative Society, Aralihalli Rajanna as Vice President
ಕೂಡ್ಲಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೂಡ್ಲಿಗೆರೆ ಎಂ ಪರಮೇಶ್ವರಪ್ಪ ರವರು ಹಾಗೂ ಉಪಾಧ್ಯಕ್ಷರಾಗಿ ಅರಳಿಹಳ್ಳಿ ರಾಜಣ್ಣ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸದಸ್ಯರಾದ ಜಿ ಆರ್ ಪಂಚಾಕ್ಷರಿ, ಮಹೇಶ್ವರ ನಾಯ್ಕ, ರಾಜ್ ಕುಮಾರ್, ಜಿ ಆರ್ ಸಿದ್ದೇಶಪ್ಪ, ರುದ್ರೇಶ ಆರ್ ಎನ್, ಗಿರಿಜಮ್ಮ, ವಿಜಯಲಕ್ಷ್ಮಿ ಬಾಯಿ, ವೆಂಕಟೇಶ್, ಆರ್ ಶಿವಣ್ಣ, ಟಿ ತಿಪ್ಪೆಸ್ವಾಮಿ ಹಾಜರಿದ್ದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಎನ್ ಎಚ್ ಮಹೇಶಣ್ಣ ರವರು, ಪಿ. ಎಲ್. ಡಿ ಬ್ಯಾಂಕ್ ಅಧ್ಯಕ್ಷರಾದ ಬಿ. ಕೆ. ಶಿವಣ್ಣ ರವರು,
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಣಿಶೇಖರ್ ರವರು, ಅರಳಿಹಳ್ಳಿ ಮಲ್ಲಿಕಣ್ಣ ರವರು, ಕಾಂಗ್ರೆಸ್ ಪಕ್ಷದ ಪ್ರಮುಖರು, ಕೂಡ್ಲಿಗೆರೆ, ಸೀತಾರಾಮಪುರ, ಅತ್ತಿಗುಂದ, ಅರಳಿಹಳ್ಳಿ, ಕಲ್ಪನಹಳ್ಳಿ, ಬಸಲೀಕಟ್ಟೆ, ತಿಪ್ಲಾಪುರ, ಕೋಡಿಹಳ್ಳಿ ಗ್ರಾಮದ ಗ್ರಾಮಸ್ಥರು, ಹಿತೈಷಿಗಳು ಶುಭಕೋರಿದರು.
Kudligere Agricultural Cooperative Society