ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹಾಗೂ ಆನಂದಣ್ಣ ಎನ್ ಬ್ರಿಗೇಡ್ ವತಿಯಿಂದ ಇಂದಿರಾಗಾಂಧಿ ಬಡಾವಣೆ ನೂರು ಅಡಿ ರಸ್ತೆ ಕಟ್ಟೆ ಸುಬ್ಬಣ್ಣ ಬಸ್ ನಿಲ್ದಾಣದ ಪಕ್ಕದಲ್ಲಿ ವಾಸವಿರುವ ಹಾಗೂ ಕುಟುಂಬ ನಿರ್ವಹಣೆಗೆ ತೊಂದರೆಯಾಗಿ ಇರತಕ್ಕಂತಹ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಲಾಯಿತು ಹಾಗೂ ಆರ್ಥಿಕವಾಗಿ ಸಹಾಯ ಮಾಡಲಾಯಿತು.
ಕುಟುಂಬದ ಆದರ ಸ್ತಂಭಗಳಾದ ಲಲಿತ್ ಬೋರ ಹಾಗೂ ಹೆಂಡತಿ ಅಶ್ವಿನಿ ಬೋರಾ ಮಗ ಪ್ರಶಾಂತ್ ಬೋರ ಇವರ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು ಇದನ್ನು ತಿಳಿದ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಭೇಟಿ ಮಾಡಿ ಸಾಂತ್ವಾನ ಹಾಗೂ ಧೈರ್ಯ ತುಂಬಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಅಧ್ಯಕ್ಷ ಕರವೇ ಕಿರಣ್ ಮಾತನಾಡಿ ಈ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಮಾಡುವ ದಾನಿಗಳು ಅವರ ಬ್ಯಾಂಕ್
A/no89270100025267 ಹಾಗೂ ಅವರ ದೂರವಾಣಿ ಸಂಖ್ಯೆ 900 868 5482 ಹಾಗೂ 97 4078 8328 ಸಂಪರ್ಕಿಸಲು ವಿನಂತಿ ಮಾಡಿದ್ದಾರೆ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಅಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಯು ಕೆ ಜಿಲ್ಲಾ ಖಜಾಂಚಿ ಗಣೇಶ್ ಜಿಲ್ಲಾ ಕಾರ್ಯದರ್ಶಿ ರಾಮು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ಮುಖಂಡರಾದ ನೂರುಲ್ಲಾ ಖಾನ್ ಕೃಷ್ಣಪ್ಪ ಪತ್ರಿಕಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಾಲ್ತೇಶ್ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ .ಮಾಲತಿ ಪದಾಧಿಕಾರಿಗಳು ಹಾಗು. ಕಾರ್ಯಕರ್ತರು ಹಾಜರಿದ್ದರು