ಸುದ್ದಿಲೈವ್/ಶಿವಮೊಗ್ಗ
ಕಳಸವಳ್ಳಿ-ಸಿಗಂದೂರು ಸೇತುವೆ ಮುಗಿಯುವ ಹಂತಕ್ಕೆ ತಲುಪಿದೆ ಏಪ್ರಿಲ್ ನಲ್ಲಿ ಪ್ರಧಾನಿಮೋದಿಯಿಂದ ಉದ್ಘಾಟನೆಗೊಳ್ಳಲು ಸೇತುವೆ ಸಿದ್ದವಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಂಸದ ರಾಘವೇಂದ್ರ, 2019 ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೆ ಬಂದು ಕೇಬಲ್ ಹ್ಯಾಂಗಿಂಗ್ ಬ್ರಿಡ್ಜ್ ಗೆ ಚಾಲನೆ ನೀಡಿದ್ದಾರೆ. 6 ವರ್ಷಗಳ ಬಳಿಕ ಬ್ರಿಡ್ಜ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇದರ ನಿರ್ಮಾಣದಿಂದ ಕೊಲ್ಲೂರು, ಧರ್ಮಸ್ಥಳ ಮೊದಕಾದ ಪುಣ್ಯ ಕ್ಷೇತ್ರಗಳು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ ಎಂದರು.
ಡ್ರೋಣ್ ವೀವ್ ನ್ನ ಸಹ ತೆಗೆಯಲಾಗಿದ್ದು ಅದ್ಬುತವಾಗಿ ಕಂಡು ಬಂದಿದೆ. 2.25 ಕಿಮಿ ಉದ್ದದ ಸೇತುವೆಗೆ 450 ಕೋಟಿಯಲ್ಲಿ 11 ಪಿಲ್ಲರ್ ಗಳಲ್ಲಿ ನಿರ್ಮಿಸಲಾಗಿದೆ ಗ್ರಾಮಪಂಚಾಯಿತಿಯ ಮಟ್ಟದಲ್ಲಿದ್ದ ಸಾಗರ-ಕಳಸವಳ್ಳಿ ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಸೇತುವೆ ನಿರ್ಮಿಸಲಾಗಿದೆ. ಇದನ್ನ ಮೂರುವರೆ ವರ್ಷದ ಹಿಂದೆ ಪ್ರಯತ್ನಿಸಿ ಸೇತುವೆ ನಿರ್ಮಿಸಲಾಗಿದೆ ಎಂದರು.
ಅದರಂತೆ ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿಯನ್ನ 8.5 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಿಟಿಯಲ್ಲಿ ಎಂ ಆರ್ ಎಸ್ ವೃತ್ತದಿಂದ ಹರಕೆರೆಗೆ ಹೋಗುವ ಐದು ಕಿಮಿ ದೂರದ ರಸ್ತೆಗೆ ಭೂಮಿ ಬೇಕಿದೆ. ಇದಕ್ಕಾಗಿ 200 ಕೋಟಿ ವೆಚ್ಚ ತಗುಲಲಿದೆ. ಇದಕ್ಕೂ ಸಚಿವ ಗಡ್ಕರಿಯವರಿಗೆ ಮನವಿ ಸಲ್ಲಿಸಿ ಬಂದಿದ್ದೇನೆ. ಇದು ಸಹ ತಡವಾಗಿದೆ. ಆದರೆ ಆದಷ್ಟು ಬೇಗ ಸಂಪೂರ್ಣಗೊಳ್ಳಲಿದೆ ಎಂದರು.
ಮತ್ತೊಂದು ಹೊಸ ಪ್ರಸ್ತಾವನೆಯನ್ನ ಕೇಂದ್ರ ಸರ್ಕಾರಕ್ಕೆ ನೀಡಿ ಬಂದಿದ್ದೇನೆ. ಶಿವಮೊಗ್ಗ, ಹೊನ್ನಾಳಿ, ಮಲೆಬೆನ್ನೂರು, ಹರಿಹರ ಮಾರ್ಗವಾಗಿ ಹೋಗುವ ಹೊಸಪೇಟೆ ರಸ್ತೆಯೂ ಸಹ ರಾಷ್ಟ್ರೀಯ ಹೆದ್ದಾರಿಗೆ ಏರಿಸಲಾಗಿದೆ ಎಂದರು.
ರೈಲ್ವೆಯಲ್ಲೂ ಸಹ ಸಾಕಷ್ಟು ಪ್ರಗತಿ ಕಾಣಲಾಗಿದ್ದು ಶಿವಮೊಗ್ಗ-ಶಿಕಾರಿಪುರ ರೈಲ್ವೆ ಭೂಮಿ ಸ್ವಾಧೀನ ಪಡೆಯಲಾಗಿದೆ. ಅದರಂತೆ ಶಿಕಾರಿಪುರ ಮತ್ತು ರಾಣೆಬೆನ್ನೂರಿನ ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನ ಮಾಡಬೇಕಿದೆ. ಅದನ್ನೂ ಶೀಘ್ರದಲ್ಲಿ ಮುಗಿಸಲಾಗುವುದು. ಇದು ಮುಗಿದರೆ ವಂದೇಭಾರತ್ ರೈಲು ಶಿವಮೊಗ್ಗಕ್ಕೆ ಬರಲಿದೆ ಎಂದರು.
ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್
ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿರುವ ಸಂಸದರು ನೈಟ್ ಲ್ಯಾಂಡಿಂಗ್ ಅಳವಡಿಸುವ ಮೂಲಕ ವಿಸಿಬಲಿಟಿ ಕ್ಲಿಯರ್ ಮಾಡಲಾಗುತ್ತಿದೆ. ಈ ಕಾರ್ಯ ಎರಡು ಮೂರು ತಿಂಗಳಲ್ಲಿ ಮುಗಿಯಲಿದೆ. ಅದರಂತೆ 2024 ರಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ 8.5 ಸಾವಿರ ಜನ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಅದನ್ನೇ ಮೈಸೂರಿಗೆ ಹೋಲಿಸಿಕೊಂಡರೆ 7.5 ಸಾವಿರ ಜನ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಶೀಘ್ರದಲ್ಲಿಯೇ ಕಾರ್ಗೋ ವಿಮಾನ ಹಾರಾಟ
ನೈಟ್ ಲ್ಯಾಂಡಿಂಗ್ ನಂತರ ಶಿವಮೊಗ್ಗದಿಂದ ದೆಹಲಿ, ಅಹಮದಾ ಬಾದ್ ಮತ್ತು ಪೂಣೆಕಡೆಗೆ ಹೊಸ ವಿಮಾನ ಹಾರಟಕ್ಕೆ ಇಂಡಿಗೋ ಸಂಸ್ಥೆ ಅರ್ಜಿ ಹಾಕಿಕೊಂಡಿದೆ. ಅದೂ ಸಹ ಕೇಂದ್ರ ಸರ್ಕಾರ ಅಸ್ತು ಎನ್ನಲಿದೆ. ಇದಾದ ನಂತರ ರೈತರ ಬೆಳೆಯನ್ನ ಬೇರೆಡೆ ಸಾಗಿಸಲು ಕಾರ್ಗೋ ವಿಮಾನಗಳು ಶಿವಮೊಗ್ಗಕ್ಕೆ ಬಂದಿಳಿಯಲಿದೆ. 50 ಕೋಟಿ ವೆಚ್ಚದಲ್ಲಿ ಇದಕ್ಕೆ ವ್ಯಯಮಾಡಲಾಗುತ್ತಿದೆ ಎಂದರು.