ರಾಷ್ಟ್ರೀಯ ಮಹಿಳೆಯರ ಟೆನ್ನಿಸಬಾಲ ಕ್ರಿಕೇಟ ಚಾಂಪಿಯನಶಿಪ್ ಗೆ ಶಿವಮೊಗ್ಗದ ಗಾಡಿಕೊಪ್ಪದ ಜ್ಞಾನ ಗಂಗಾ ಶಾಲೆಯ ವಿದ್ಯಾರ್ಥಿನಿ ಆಯ್ಕೆ



ಸುದ್ದಿಲೈವ್/ಶಿವಮೊಗ್ಗ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನವರಿ 3 ರಿಂದ ನಡೆಯಲಿರುವ ರಾಷ್ಟ್ರೀಯ ಮಹಿಳೆಯರ ಟೆನ್ನಿಸಬಾಲ ಕ್ರಿಕೇಟ ಚಾಂಪಿಯನಶಿಪದಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ಮಹಿಳೆಯರ ಟೆನ್ನಿಸಬಾಲ ಕ್ರಿಕೇಟ ತಂಡಕ್ಕೆ ಶಿವಮೊಗ್ಗ ಗಾಡಿಕೊಪ್ಪದ  ಜ್ಞಾನ ಗಂಗಾ ಶಾಲೆಯ ಸ್ಪಂದನಾ ಆರ್.  ಗುಡಿಗಾರ ಇವಳು ಆಯ್ಕೆಯಾಗಿದ್ದಾಳೆ.  

ಮಧ್ಯಮ ವೇಗದ  ಬೌಲಿಂಗ್ ಆಲ್-ರೌಂಡರ್ ಆಗಿರುವ ಸ್ಪಂದನಾಳ ಆಯ್ಕೆಯ ಬಗ್ಗೆ  ಹಾಗೂ ಆಯ್ಕೆಯಾಗಿರುವ ಆಟಗಾರ್ತಿಯರ ಹೆಸರುಗಳನ್ನು ರಾಜ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರಾದ ಡಾ. ಅಶೋಕಕುಮಾರ ಜಾಧವ ಇವರು   ತಂಡದ ಪಟ್ಟಿ ಬಿಡುಗಡೆಗೊಳಿಸಿದ್ದಾರೆ. 

ಇದೇ ಡಿಸೆಂಬರ 31 ರಂದು ತಂಡವು ವಾರಣಾಸಿಗೆ ಪ್ರಯಾಣ ಬೆಳೆಸಲಿದ್ದು, ಸ್ಪಂದನಾಳ ಈ ಸಾಧನೆಗೆ ಜ್ಞಾನ ಗಂಗಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ M N ದಿನೇಶ್ ,ಸಂಸ್ಥಾಪಕ B ಶೇಖರಪ್ಪ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಅಭಿನಂದಿಸಿ ಶುಭ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close