ಶಾಸಕ ಗೋಪಾಲಕೃಷ್ಣ ಬೇಳೂರು ಅಳಿಯನಿಗೆ ಡಾಕ್ಟರೇಟ್ ಪದವಿ



ಸುದ್ದಿಲೈವ್/ಶಿವಮೊಗ್ಗ

ಸಹ್ಯಾದ್ರಿ ಕಾಲೇಜಿನ ಇತಿಹಾಸ ವಿಭಾಗದ ಸಹಾಕ ಉಪನ್ಯಾಸಕರಾಗಿರುವ ಬಿ.ಎಂ ಚಂದ್ರಶೇಖರ್ ಅವರಿಗೆ ಹಂಪಿ ವಿಶ್ವವಿದ್ಯಾಲಯ ಪಿಹೆಚ್ ಡಿ ನೀಡಿ ಗೌರವಿಸಿದೆ. 

ಡಾ.ಮೋಹನ ಕೃಷ್ಣ ರೈ.ಕೆ ಇವರ ಮಾರ್ಗದರ್ಶನದಲ್ಲಿ ಮಲೆನಾಡಿನಲ್ಲಿ ಬದಲಾಗುತ್ತಿರುವ ಕೃಷಿ ಸ್ವರೂಪ:ಚಾರಿತ್ರ್ಯಕ ಅಧ್ಯಯನ ಕುರಿತು ಚಂದ್ರಶೇಖರ್ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್ ಡಿ ಪದವಿ ಲಭಿಸಿದೆ. 

ಚಂದ್ರಶೇಖರ್ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕರು ಆಗಿದ್ದು, ಮೂಲತಃ ಸಾಗರ ತಾಲೂಕಿನ ಭೀಮನೇರಿ ಗ್ರಾಮಸ್ಥರಾಗಿದ್ದಾರೆ. ಜೊತೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಹೋದರ ಅಳಿಯರಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close