Girl in a jacket

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿಯವರ ಹುಟ್ಟುಹಬ್ಬ ಆಚರಣೆ



ಸುದ್ದಿಲೈವ್/ಶಿವಮೊಗ್ಗ

ಕೆಪಿಸಿಸಿ ಕಾರ್ಯಾದ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿಯವರ ಹುಟ್ಟು ಹಬ್ಬದ ಅಂಗವಾಗಿ ಶಿಕಾರಿಪುರ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಸೀರೆ ಹಾಗು ಸಿಹಿ ವಿತರಿಸಲಾಯಿತು.  

ನಂತರ ಮಾತನಾಡಿದ ಪುರಸಭಾ ಸದಸ್ಯ ಹಾಗು ಉಳ್ಳಿ ಫೌಂಡೇಶನ್ ಅದ್ಯಕ್ಷರಾದ ಉಳ್ಳಿ ದರ್ಶನ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿಯವರ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲಾಗಿದೆ. ಸರಳ ಸಜ್ಜನ ವ್ಯಕ್ತಿತ್ವದವರಾದ ಅವರು, ಶಿಕ್ಷಣ ಪ್ರೇಮಿ ಹಾಗು ಯುವಕರ ಸ್ಪೂರ್ತಿ, ನನ್ನಂತ ಬಾಹಳಷ್ಟು ಯುವಕರಿಗೆ ಮಾರ್ಗದರ್ಶಕರಾಗಿ ಮುನ್ನಡೆಸಿದ್ದಾರೆ.

ಕರೋನಾ ಸಂಧರ್ಭದಲ್ಲಿ ತಮ್ಮ ಜೀವದ ಹಂಗನ್ನು  ತೊರೆದು ಕರ್ತವ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ, ಆದ್ದರಿಂದ ಅವರಿಗೆ ನಮ್ಮ ಫೌಂಡೇಶನ್ ವತಿಯಿಂದ ಬಾಗಿಣ ರೂಪದಲ್ಲಿ ಸೀರೆ ಹಾಗು ಸಿಹಿ ವಿತರಿಸುವುದಾಗಿ ತಿಳಿಸಿದರು. ಆ ದೇವರು ಭಂಡಾರಿಯವರಿಗೆ ಆಯುರ್-ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದರು.

ಕೆಪಿಸಿಸಿ ಸದಸ್ಯರಾದ ಗೋಣಿ ಮಾಲತೇಶ್ ಮಾತನಾಡಿ ಸಾಮಾನ್ಯ ಕುಟುಂಬದಿಂದ ಬಂದ ಮಂಜುನಾಥ್ ಭಂಡಾರಿಯವರು ಪಕ್ಷ ನಿಷ್ಠೆಯಿಂದ ಇದ್ದ ಪರಿಣಾಮ ಇಂದು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಮಂತ್ರಿಯಾಗುವ ಎಲ್ಲಾ ಅರ್ಹತೆ ಅವರಿಗೆ ಇದೆ ಎಂದರು.

ಈ ಸಂದರ್ಭದಲ್ಲಿ ಉಳ್ಳಿ ದರ್ಶನ್ ರವರು, ಗೋಣೆ ಮಾಲತೇಶ್ ರವರು, ಶಿವು ನಾಯಕ್, ಮುನಿಯಪ್ಪ, ತಿಮ್ಮಣ್ಣ, ನಗರದ ಮಾಲತೇಶ್, ಸಂತೋಷ್ ಗುಡ್ಡಳ್ಳಿ, ದುರ್ಗಾವರ್ ಗಿರೀಶ್, ರಬ್ಬಾನಿ ಮುಂತಾದ ಮುಖಂಡರು ಪಾಲ್ಗೊಂಡಿದ್ದರು..*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು