Girl in a jacket

ಚಾರ್ ದಾಮ್ ಯಾತ್ರೆ ಮಾಡಿಸುವುದಾಗಿ ವಂಚನೆ



ಸುದ್ದಿಲೈವ್/ಶಿವಮೊಗ್ಗ

ಚಾರ್ ದಾಮ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹಣ ವಂಚಿಸಿರುವ ಘಟನೆ  ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬೆಂಗಳೂರಿನ ವಾಸಿ ಮೋಹಿತ್ ನರಸಿಂಹಮೂರ್ತಿ ಎಂಬುವವರು ವಿನಯಾಕನಗರದಲ್ಲಿರುವ ಕನ್ನಿಕ ಪರಮೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ಸತೀಶ್ ಎಂಬುವರಿಗೆ  ಕರೆ ಮಾಡಿ "ಚಾರ್ ದಾಮ್" ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ನಂಬಿಸಿ ಮೊದಲಿಗೆ 10 ಸಾವಿರ ರೂ. ಹಣವನ್ನ ಫೋನ್ ಪೇ ಮೂಲಕ ಹಾಕಿಸಿಕೊಂಡಿದ್ದಾರೆ. 

ಮುಂಗಡ ಹಣವಾಗಿ ಪಡೆದ ಮೋಹಿತ್ ಗೆ ಸತೀಶ್ ನಂತರ  ಬ್ಯಾಂಕ್ ಖಾತೆಯ ಮೂಲಕ 26 ಸಾವಿರ ರೂ. ಹಣ ಪಡೆದು ಯಾವುದೇ ಪ್ರವಾಸ ಯಾತ್ರೆಯನ್ನು ಮಾಡಿಸದೆ, ಯಾವ ಕರೆಯನ್ನೂ ಸ್ವೀಕರಿಸದೇ ವಂಚಿಸಿರುವುದಾಗಿ ಸತೀಶ್ ದೂರಿನಲ್ಲಿ ದಾಖಲಿಸಿದ್ದಾರೆ. 

ಮೋಹಿತ್‌ಗೆ ಪೋನ್ ಪೇ ಹಾಗೂ ಆಕೌಂಟ್ ಟ್ರಾನ್ಸರ್ ಮೂಲಕ ಒಟ್ಟು 36000/- ರೂಗಳನ್ನು ಹಾಕಿರುವ ವಿಚಾರವಾಗಿ ಮೊದಲು ಸತೀಶ್ ಸೈಬರ್ ಪೋರ್ಟಲ್ ನಲ್ಲಿ ದೂರು ದಾಖಲಿಸಿದ್ದರು. ಈವರೆಗೂ ಹಣ ವಾಪಸ್ ಬಾರದ ಕಾರಣ ತಡವಾಗಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live