Girl in a jacket

ಕಲೂಷಿತ ನೀರು ಸರಬರಾಜು-ಎಸ್ ಡಿಪಿಐ ಆಕ್ರೋಶ


ಸುದ್ದಿಲೈವ್/ಶಿವಮೊಗ್ಗ

ಸ್ಮಾರ್ಟ್ ಸಿಟಿಯ 24×7 ಮತ್ತು ಪಾಲಿಕೆಯ ಕುಡಿಯುವ ನೀರು ಕೆಂಪು ಮಿಶ್ರಿತವಾಗಿ ನೀರು ಸರಬರಾಜು ಆಗುತ್ತಿರುವ ಬೆನ್ನಲ್ಲೇ ಎಸ್ ಡಿಪಿಐ ಆಕ್ರೋಶ ವ್ಯಕ್ತಪಡಿಸಿದೆ. ನಗರದಲ್ಲಿ ಶುದ್ಧ ಮತ್ತು ಆರೋಗ್ಯಕರ ಕುಡಿಯುವ ನೀರು ಸರಬರಾಜು ಮಾಡುವುದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕರ್ತವ್ಯ ಎಂದು ಆಗ್ರಹಿಸಿದೆ. 

ಕಳೆದ 3- 4 ದಿನಗಳಿಂದ ಶಿವಮೊಗ್ಗ ನಗರದಲ್ಲಿ ಸರಬರಾಜು ಆಗುವ ನೀರು ಕಲುಷಿತಗೊಂಡಿದ್ದು, ಜನ ಸಾಮಾನ್ಯರು ಆ ನೀರು ಕುಡಿಯಲಾಗದೆ. ಪರದಾಡುತ್ತಿದ್ದಾರೆ, ನಿಜವಾಗಿಯೂ "ನೀರು ಶುದ್ಧೀಕರಣ ಘಟಕ"ದಿಂದ ಸರಬರಾಜು ಆಗುತ್ತಿರುವ ನೀರು ಶುದ್ಧೀಕರಣ ಆಗುತ್ತಿದೆಯೇ? ಎಂಬ ಪ್ರಶ್ನೆ ಉಂಟಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಇಮ್ರಾನ್ ಆಗ್ರಹಿಸಿದ್ದಾರೆ.

ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇದರ ಜವಾಬ್ದಾರಿ ವಹಿಸಿದ್ದು, ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ರೋಗ ಹರಡುವ ಕಲುಷಿತ ನೀರು ಸರಬರಾಜು ಆಗುತ್ತಿದೆ. ನೀರಿನ ಶುದ್ಧೀಕರಣ ಘಟಕಗಳನ್ನು ಸರಿಪಡಿಸಿಕೊಂಡು ಶುದ್ಧ ಮತ್ತು ಸ್ವಚ್ಛ ಹಾಗೂ ಆರೋಗ್ಯಕರ ನೀರು ಸರಬರಾಜು ಮಾಡುವುದು ಮಂಡಳಿಯ ಕರ್ತವ್ಯ. ನಿಮ್ಮ ಈ ನಿರ್ಲಕ್ಷ್ಯತನದಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ನಿಮ್ಮ ವಿರುದ್ಧ ಹೋರಾಟ ಮಾಡುವುದು ಖಂಡಿತ.

ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಎಂದು ಹೆಸರು ಪಡೆದರು ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣವಾಗಿ ನೀಡಲು ಇಲ್ಲಿನ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಜಿಲ್ಲಾಡಳಿತ ಮತ್ತು ವಿಶೇಷವಾಗಿ ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡು ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರೋಗಗಳಿಂದ ನಾಗರಿಕರಿಗೆ ರಕ್ಷಿಸಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Suddi Live