ಸುದ್ದಿಲೈವ್/ಶಿವಮೊಗ್ಗ
ನಗರದಲ್ಲಿ ಕಲುಷಿತ ನೀರು ಪೂರೈಕೆಯ ಬಗ್ಗೆ ಶಾಸಕ ಚೆನ್ನಬಸಪ್ಪ ಆತಂಕಕಾರಿ ವಿಷಯವನ್ನ ಪ್ರಸ್ತಾಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಶಿವಮೊಗ್ಗ ಮಾತ್ರವಲ್ಲ ಬೇರೆಡೆಗಳಲ್ಲಿ ಮಣ್ಣು ನೀರು ಮಿಶ್ರಿತವಾಗಿ ನದಿಗೆ ಸೇರುತ್ತಿರುವುದರಿಂದ ಕುಡಿಯುವ ನೀರು ಮಣ್ಣಿನ ಕಲರ್ ಗೆ ತಿರುಗಿದೆ. ಇದು ಎಲ್ಲಾ ಮನೆಗಳಿಗೆ ಪೂರೈಕೆಯಾಗುತ್ತಿದೆ. ಕಾಲೇಹಳ್ಳದ ಬಳಿ ಕಪ್ಪು ಮಿಶ್ರಿತ ನೀರು ನದಿಗೆ ಸೇರುತ್ತಿದೆ. ಇದನ್ನ ಹೇಗೆ ನೀರು ಸರಬರಾಜು ಮಾಡಬೇಕು ಎಂಬುದು ಅಧಿಕಾರಿಗಳು ಯೋಚಿಸಿದ್ದಾರೆ ಎಂದರು.
ಇಂದಿನಿಂದ ಉತ್ತಮ ನೀರು ಸರಬರಾಜಾಗುತ್ತಿದೆ. ಸಾರ್ವಜನಿಕರು ತೊಟ್ಟಿ ನೀರು ಖಾಲಿ ಮಾಡಿಕೊಂಡು ಉತ್ತಮ ನೀರು ಸಂಗ್ರಹಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು. ಇಂದಿನಿಂದ ಉತ್ತಮ ನೀರು ಸರಬರಾಜಾಗುತ್ತಿದೆ. ನಾನು ಸಹ ಪರಿಶೀಲನೆಗಾಗಿ ಸ್ಥಳ ಭೇಟಿ ಮಾಡಿರುವೆ. ಕಾಲೇಹಳ್ಳದ ಬಳಿ ಕಪ್ಪು ಮಿಶ್ರಿತ ನೀರು ನದಿಗೆ ಸೇರುತ್ತಿದೆ.
ಇದು ಶಿವಮೊಗ್ಗದಲ್ಲಿ ಮಾತ್ರ ಅಲ್ಲ ಎಲ್ಲೆಡೆ ಹೀಗೆ ಕುದಿಸಿ ಆರಿಸಿದ ನೀರು ಕುಡಿಯಲು ಸೂಚಿಸಲಾಗಿದೆ.