ಮಂಗಳವಾರ, ಸೆಪ್ಟೆಂಬರ್ 3, 2024

ಲ್ಯಾಪ್ ಟ್ಯಾಪ್ ಕಳುವಿನ ಕಥೆ

 


ಸುದ್ದಿಲೈವ್/ಶಿವಮೊಗ್ಗ


ಬಸ್ ನಿಲ್ದಾಣದಲ್ಲಿ ಚಿನ್ನಾಭರಣ, ಲ್ಯಾಪ್ ಟಾಪ್ ಮೊದಲಾದ ಬೆಲೆಬಾಳುವ ವಸ್ತುಗಳನ್ನ ಕಳೆದುಕೊಳ್ಳುವುದು ಸಹಜವಾಗಿಬಿಟ್ಟಿದೆ. ಶಿವಮೊಗ್ಗದ KSRTC ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿಗೆ ಬ್ರೇಕ್ ಹಾಕಿದರೂ ಸಹ ಕಳ್ಳತನ ಮುಂದು ವರೆದಿದೆ.


ಬೆಂಗಳೂರಿನಿಂದ ತೀರ್ಥಹಳ್ಳಿಯ ಕಮ್ಮರಡಿಗೆ ಹೊರಟ ಸಾಫ್ಟ್ ವೇರ್ ಇಂಜಿನಿಯರ್ ಅವರು ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಂದು ಬ್ಯಾಗ್ ಚೆಕ್ ಮಾಡಿಕೊಂಡಿದ್ದಾರೆ. ಬ್ಯಾಗ್ ಕಳುವಾಗಿದೆ. ಬ್ಯಾಗನಲ್ಲಿ ಲ್ಯಾಪ್ ಟ್ಯಾಪ್ಇದ್ದು ಬ್ಯಾಗ್ ಸಮೇತ ಎತ್ತಿಕೊಂಡು ಹೋಗಿದ್ದಾರೆ. 


ಇನ್ನೊಂದು ಅಚ್ಚರಿ ಬೆಳವಣಿಗೆಯಲ್ಲಿ ಆಂಧ್ರದಿಂದ ಹೊರಟು ಶೃಂಗೇರಿಗೆ ಪ್ರಯಾಣ ಬೆಳೆಸಿದ್ದ ಯುವತಿಯೊಬ್ಬಳು ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಂದು ಶೃಂಗೇರಿ ಬಸ್ ಗೆ ಕಾಯ್ತಾ ಕುಳಿತಿದ್ದ ವೇಳೆ . ಕಮ್ಮರಡಿಗೆ ಹೊರಟಿದ್ದ ಯುವತಿಯ ಬ್ಯಾಗ್ ನ್ನ ಕದ್ದ ಕಳ್ಳರು ಲ್ಯಾಪ್ ಟ್ಯಾಪ್ ನ್ನ ಎತ್ತುಕೊಂಡು   ಶೃಂಗೇರಿಗೆ ಹೊರಟಿದ್ದ ಯುವತಿಯ ಬಳಿ ಬ್ಯಾಗ್ ಬಿಟ್ಟು ಹೋಗಿದ್ದಾರೆ.


ಶೃಂಗೇರಿಗೆ ಹೊರಟಿದ್ದ ಯುವತಿಯ ಬ್ಯಾಗ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಆಕೆಯ ಬ್ಯಾಗ್ ನಲ್ಲಿದ್ದ ವಸ್ತುಗಳು ಏನೇನು ಕಳೆದಿದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ. ಕಮ್ಮರಡಿಗೆ ಹೊರಟಿದ್ದ ಯುವತಿಯ ಲ್ಯಾಪ್ ಟ್ಯಾಪ್ ಕಳುವಿನ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ