Girl in a jacket

ಕಳುವಾಗಿದ್ದ ಮಾಲು ಪತ್ತೆ



ಸುದ್ದಿಲೈವ್/ಸಾಗರ

ಮನೆಯ ಪಕ್ಕದ ಶೆಡ್‌ನಲ್ಲಿದ್ದ ತಾಮ್ರದ ಹಂಡೆ, ಅಡಿಕೆ ಹಾಗೂ ಮರಕತ್ತರಿಸುವ ಯಂತ್ರವನ್ನ‌ ಕಳ್ಳತನ ಮಾಡಿದ್ದ ಆರೋಪಿಗಳನ್ನ ಸಾಗರದ ಪೊಲೀಸರು ಹಿಡಿದು ಆರೋಪಿಗಳಿಂದ 2,33,000 ರೂ ಮಾಲುಗಳನ್ನ ವಶಕ್ಕೆ ಪಡೆದಿದ್ದಾರೆ. 

ಜು.7ರಂದು ರಾತ್ರಿ ಸಾಗರ ತಾಲೂಕಿನ ಬೈದೂರು ಗ್ರಾಮದ  ತ್ರಿಭುವನ್‌ರವರು  ಮನೆಯ ಪಕ್ಕದ ಶೆಡ್ ನಲ್ಲಿ ಇಟ್ಟಿದ್ದ  ಮರ ಕತ್ತರಿಸುವ ಯಂತ್ರ, ತಾಮ್ರದ ಹಂಡೆಯನ್ನು ಕಳ್ಳತನವಾಗಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಪ್ರಕಣದಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ  ಎಸ್ಪಿ  ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಅಡಿಷನಲ್ ಎಸ್ಪಿ-1 ಅನಿಲ್ ಕುಮಾರ್ ಭೂಮಾರೆಡ್ಡಿ,   ಮತ್ತು ಅಡಿಷನಲ್ ಎಸ್ಪಿ-2 ಕಾರಿಯಪ್ಪ ಎ.ಜಿರವರ ಮಾರ್ಗದರ್ಶನದಲ್ಲಿ ಸಾಗರದ ಡಿವೈಎಸ್ಪಿ  ಗೋಪಾಲ ಕೃಷ್ಣ ಟಿ ನಾಯಕ್ ಇವರ ಮೇಲ್ವಿಚಾರಣೆಯಲ್ಲಿ  ಮಹಾಬಲೇಶ್ವರ ನಾಯ್ಕ್ ಪೊಲೀಸ್ ನಿರೀಕ್ಷಕರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ, ಪಿಎಸ್ಐ ಸಿದ್ದರಾಮಪ್ಪ, ಹಾಗೂ ಸಿಬ್ಬಂಧಿಗಳಾದ ಸಿ.ಹೆಚ್.ಸಿ – ಷೇಖ್ ಫೈರೋಜ್ ಅಹಮ್ಮದ್, ಸಿ.ಪಿ.ಸಿ – ನಂಧೀಶ್, ರವಿಕುಮಾರ್, ಪ್ರವೀಣ್ ಕುಮಾರ್, ವಾಹನ ಚಾಲಕರಾದ ಎ.ಹೆಚ್.ಸಿ ಗಿರೀಶ್ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂಧಿಗಳಾದ ಸಿ.ಹೆಚ್.ಸಿ ಗುರುರಾಜ್, ಇಂದ್ರೇಶ್ ಮತ್ತು ವಿಜಯ್ ರವರುಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತು. 

ತನಿಖಾ ತಂಡವು ಇಂದು ಪ್ರಕರಣದ ಆರೋಪಿತರಾದ 1) ನಾಗರಾಜ @ ಕರಡಿ, 24 ವರ್ಷ, ನೆಹರೂ ನಗರ ಸಾಗರ ಟೌನ್ ಮತ್ತು 2) ರಾಘವೇಂದ್ರ @ ರೊಡ್ಡಿ, 22 ವರ್ಷ, ಎಸ್. ಎನ್ ನಗರ ಸಾಗರ ಟೌನ್ ರವರುಗಳನ್ನು ದಸ್ತಗಿರಿ ಮಾಡಿ ಸದರಿಯವರಿಂದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮೇಲ್ಕಂಡ ಪ್ರಕರಣ ಮತ್ತು ಸಾಗರ ಟೌನ್ ಪೊಲೀಸ್ ಠಾಣೆಯ 02 ಅಡಿಕೆ ಕಳವು ಪ್ರಕರಣಗಳು ಸೇರಿ ಒಟ್ಟು 03  ಪ್ರಕರಣಗಳಿಗೆ ಸಂಬಂಧಿಸಿದ 1) ಅಂದಾಜು ಮೌಲ್ಯ 18,000/- ರೂಗಳ ಮರ ಕತ್ತರಿಸುವ ಯಂತ್ರ, 2) ಅಂದಾಜು ಮೌಲ್ಯ 1,05,000/-  ರೂಗಳ ಚಾಲಿ ಅಡಿಕೆ, 3) ಅಂದಾಜು ಮೌಲ್ಯ 1,00,000/-  ರೂಗಳ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ, 4)  ಅಂದಾಜು ಮೌಲ್ಯ 10,000/-  ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನ ಸೇರಿ ಒಟ್ಟು 2,33,000/-  ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. 

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು