ಬುಧವಾರ, ಸೆಪ್ಟೆಂಬರ್ 4, 2024

ಹೊಸೂಡಿ ಗ್ರಾಪಂ ನಲ್ಲಿ ಮಾರಾಮಾರಿ


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಸಮೀಪದ ಹೊಸೂಡಿ ಗ್ರಾಮ ಪಂಚಾಯತಿಯಲ್ಲಿ  ಖರ್ಚು ವೆಚ್ಚದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಮಾರಾಮಾರಿ ನಡೆದಿದೆ. 


ಗ್ರಾ.ಪಂ.ಅಧ್ಯಕ್ಷೆ ಚೈತ್ರಾ ಎದುರೇ ಈ ಮಾರಾ ಮಾರಿ ನಡೆದಿದೆ. ಗ್ರಾ.ಪಂ.ನ ಚಿಕ್ಕ ಮರಡಿಯ ನೀರಗಂಟಿ ಹನುಮಂತಪ್ಪ ಎಂಬುವರ ಮೇಲೆಯೇ ಗ್ರಾಮಸ್ಥ ಅಜರ್ ಎಂಬಾತ ತಾನು ಕುಳಿತ್ತಿದ್ದ ಮರದ ಖುರ್ಚಿಯನ್ನೇ ಎಸೆದು ಹಲ್ಲೆ ಮಾಡಿದ ವೀಡಿಯೋ ಈಗ ವೈರಲ್ ಆಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು. ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳಾದ ಸತ್ಯನಾರಾಯಣ, ವಿಜಿ, ಸಿಬ್ಬಂದಿ ಕಲ್ಲನಗೌಡ ದೌಡಾಯಿಸಿ ಪರಿಶೀಲನೆ.



ಗ್ರಾಂ.ಪಂ.ಅಧ್ಯಕ್ಷರು, ಕೆಲ ಸದಸ್ಯರ ಹಾಗೂ ಪಿಡಿಒ ಮಂಜಮ್ಮನವರೇ ಈ ಕುಕೃತ್ಯಕ್ಕೆ ಶಾಮೀಲು ಎಂಬ ಆರೋಪ ಪ್ರತ್ಯಕ್ಷ ದರ್ಶಿಗಳದ್ದು ಎನ್ನಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ