ಸಂಸದ ರಾಘವೇಂದ್ರ ಮತ್ತು ಅವರ ಪಟಾಲಂರನ್ನ ಸುಮ್ಮನೆ ಬಿಡಲ್ಲ-ಬೇಳೂರು

 


ಸುದ್ದಿಲೈವ್/ಶಿವಮೊಗ್ಗ

 

ಮೊನ್ನೆ ಕೋಟ್೯ ನಲ್ಲಿ kptcl ನ‌ಸಹಾಯಕ ಇಂಜಿನಿಯರ್ ನಾನು ಬೆದರಿಕೆ ಹಾಕಿ ಪ್ರಕರಣ ದಾಖಲಿಸಿರುವುದಾಗಿ ನ್ಯಾಯಮೂರ್ತಿಗಳ ಮುಂದೆ ಹೇಳಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಮಾನ ನಷ್ಠ ಮೊಕದ್ದಮೆ ದಾಖಲಿಸುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. 


ನನ್ನ ಮೇಲೆ ಡಿಎಸ್ಪಿ ಅವರು ಶಾಂತಕುಮಾರ್ ಕೆಪಿಟಿಸಿಎಲ್‌ ಅವರು ತಾಳಗುಪ್ಪದಲ್ಲಿ ಇದ್ದಾನೆ.‌ಅದು ನನ್ನ‌ ಕ್ಷೇತ್ರ ವ್ಯಾಪ್ತಿಯಲ್ಲಿ ಅಲ್ಲ. ನಾನು ಆ ವ್ಯಕ್ತಿಯನ್ನ ನೋಡಿಲ್ಲ, ಮಾತನಾಡಿಸಿಲ್ಲ. ಅವರು ಪಿತೂರಿ ಇರಬಹುದು.  ಆತನ ಬಗ್ಗೆ ಗೊತ್ತಿಲ್ಲ. ಸುಖಾಸುಮ್ಮನೇ ಆರೋಪ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬೇಳೂರು ಸ್ಪಷ್ಟಪಡಿಸಿದರು. 


ಸಿಟಿ ರವಿ ನಾನು ರಾಜೀನಾಮೆ ನೀಡುವಂತಿದ್ದಾರೆ. ನನ್ನ ತೇಜೋವಧೆ ಮಾಡುವ ಪ್ರಯತ್ನ. ಆತನ ಮೇಲೆ ಸುಮಾರು ಕೇಸ್ ಇದೆ. ಗಾಂಜಾ ಕೇಸ್ ಇದೆ. ಜೈಲಿಗೆ ಹೋಗಿ ಅಮಾನತು ಆಗಿದ್ದಾರೆ. 11ರಿಂದ 29 ರ ವರಗೆ ಹೊರಗಡೆ ಇದ್ದೇನೆ. ಆ ವ್ಯಕ್ತಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಗುಡುಗಿದರು. 


ಸಿ.ಟಿ.‌ರವಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದರೇ ನೀವು ರಾಜೀನಾಮೆ‌ ಕೊಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ .ಸಾಕ್ಷಿ‌ ಇದ್ದರೇ ರಾಜೀನಾಮೆ ನಾನು‌‌‌ ಕೊಡುತ್ತೇನೆ. ಸೊರಬ ಕ್ಷೇತ್ರಕ್ಕೆ ಸೇರುತ್ತಾರೆ. ಅಧಿಕಾರಿ ವಿರುದ್ಧ ಮೂರು ಜನ ಹುಡುಗಿಯರ‌‌  ಕೇಸ್ ಇದೆ. ನನ್ನ ಕ್ಷೇತ್ರದವನು ಅಲ್ಲ. ಮಾನಸಿಕವಾಗಿ ಆತನು ಕುಗ್ಗಿರಬಹುದು.  ಅವನ ಮೇಲೆ‌ ತನಿಖೆ ಆಗಬೇಕು ಎಂದರು. 


ಸಿದ್ದರಾಮಯ್ಯ  ಅವರ ಮೇಲೆ‌ ಕೇಸ್ ಹಾಕಿ‌ಒಳಗೆ ಹಾಕಬೇಕು ಎಂಬುದು ಬಿಜೆಪಿಯವರು ಪಿತೂರಿ‌‌ಇದೆ. ಬಿಜೆಪಿ ಅವರ ಕೈಗೊಂಬೆಯಾಗಿ ರಾಜ್ಯಪಾಲರು. ಆರೋಪಿಸುತ್ತಿದ್ದಾರೆ. ಇವರ ಪಾದಯಾತ್ರೆ ಬೈ ಏಲೆಕ್ಷನ್ ನಲ್ಲಿ  ಖತಂ ಆಗುತ್ತದೆ ಎಂದರು. 


ಸಿಎಂ ಇಳಿಸಲು ಪ್ರಯತ್ನ. ಸಿಎಂ ರಾಜೀನಾಮೆ ಕೊಟ್ಟರೇ ಸರ್ಕಾರ ಹೇಗೆ ಹೋಗುತ್ತದೆ. ಹಡಬೆ ದುಡ್ಡು ಯಡಿಎ ಮತ್ತು‌ಅವರ ಮಕ್ಕಳು. ಪಿಎಸ್ ಐ ಹಗರಣ ತನಿಖೆ‌ಮಾಡಿದರೇ ವಿಜಯೇಂದ್ರ ಜೈಲಿಗೆ ಹೋಗುತ್ತಾನೆ. ಚೆಕ್ ಮೂಲಕ ಲಂಚ ಪಡೆದುಕೊಂಡಿದ್ದಾರೆ.  ಸಂಡೂರು ಗಣಿಗಾರಿಕೆ ಕೇಸ್ ಕುರಿತಂತೆ ಕುಮಾರಸ್ವಾಮಿ ವಿರುದ್ದ ತನಿಖೆ‌ನಡೆಸಲು ರಾಜ್ಯಪಾಲರು ಮುಂದಾಗಬೇಕು ಎಂದು ಒತ್ತಾಯಿಸಿದರು. 


ಅಹಿಂದ ವರ್ಗದ ಸಿಎಂ ಇಳಿಸಲು ಷಢ್ಯಂತ್ರ ನಡೆಯುತ್ತಿದೆ. ಧಮ್‌‌ ಇದ್ದರೇ ಸರಕಾರ ಬೀಳಿಸಲಿ. ಬಿಜೆಪಿ‌ಯಲ್ಲಿ ಮನೆಯೊಂದು ಮೂರು‌ ಬಾಗಿಲು ಆಗಿದೆ. ಸಚಿವ ಸಂಪುಟ ವಿಸ್ತರಣೆ ಮಾಹಿತಿ‌‌ ಇಲ್ಲ. ಕಂದಾಯ ಸಚಿವರು ಎರಡು ತಿಂಗಳಲ್ಲಿ ರಿಪೇರಿ‌ ಮಾಡಿಸಬೇಕು. ವರ್ಷ ಕಾಯುವುದಕ್ಕೆ ಆಗುವುದಿಲ್ಲ. 95 ಕೋಟಿ‌ ಲಾಸ್ ಆಗಿದೆ.ಜೋಗದ ಭೂಗರ್ಭ ವಿದ್ಯುತ್ ಉತ್ಪಾದನಾ ಘಟಕ ಪರಿಸರವಾದಿಗಳ ಹಾನಿಯಾಗದಂತೆ ಕಾಮಗಾರಿ ಮಾಡಲಾಗುವುದು  ನಡೆಯುತ್ತಿದೆ.  8.5 ಸಾವಿರ ಕೋಟಿ ಮಂಜೂರಾತಿ ಆಗಿದೆ ಎಂದರು.


ಡಿಸಿಸಿ ಬ್ಯಾಂಕ್‌ ಹಗರಣ ತನಿಖೆ ಮಾಡಲಾಗುವುದು ಮೊನ್ನೆ ನಡೆದ ಸಭೆಯಲ್ಲಿ ಮನವಿ ಮಾಡಲಾಗುವುದು. ಸಂಸದ ರಾಘವೇಂದ್ರ ಮತ್ತು ಅವರ ಪಟಾಲಂ‌ ಬಿಡಲ್ಲ. ಶಾಹಿ ಗಾರ್ಮೆಂಟ್ ಅವ್ಯವಹಾರ ಬಿಡಲ್ಲ. ಬೇಳೂರು‌ ತಟ್ಟೆ ಬಡಿಯಲ್ಲ. ಮಗಳು ವಿದೇಶದಲ್ಲಿ ಇದ್ದಳು ಹೋಗಿದ್ದೇನು‌‌.‌ಮಜಾ ಮಾಡಲು ಹೋಗಿಲಿಲ್ಲ. ಇವನು‌ ಮಜಾ ಮಾಡಿ ಸಿಕ್ಕಿ ಹಾಕಿಕೊಂಡಿದ್ದನಲ್ಲಾ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು