ಭಾನುವಾರ, ಆಗಸ್ಟ್ 18, 2024

ಗನ್ ಕಳುವು

 

ಸಾಂದರ್ಭಿಕ ಚಿತ್ರ

ಸುದ್ದಿಲೈವ್/ಶಿವಮೊಗ್ಗ


ವನ್ಯಜೀವಿಯಿಂದ ರಕ್ಷಣೆಗಾಗಿ ಇಟ್ಟುಕೊಂಡ ಪರವಾನಗಿ ಗನ್ ನ್ನೇ ಕದ್ದುಕೊಂಡು ಹೋಗಿರುವ ಘಟನೆ ಕಾಕನಹೊಸೂಡಿಯಲ್ಲಿ ನಡೆದಿದೆ.


ಚಿಕ್ಕಮಗಳೂರು ಜಿಲ್ಲೆಯ ನಿವಾಸಿ ಉದಯ ಕುಮಾರ್ ಅವರ ಪತ್ನಿ ಹೆಸರಿನಲ್ಲಿ  ಶಿವಮೊಗ್ಗ ತಾಲೂಕಿನ ಕಾಕನಹೊಸೂಡಿ ಗ್ರಾಮದಲ್ಲಿ  ಆಸ್ತಿಯನ್ನ ಹೊಂದಿದ್ದರು. ಇವರು ವನ್ಯಜೀವಿಗಳ ದಾಳಿ, ಫಸಲು ರಕ್ಷಣೆಗೆ ಮತ್ತು   ಆತ್ಮರಕ್ಷಣೆಗಾಗಿ ಪರವಾನಗಿ ಉಳ್ಳ ಗನ್ ನ್ನ ಹೊಂದಿದ್ದರು.


ಉದಯ ಕುಮಾರ್ ತೋಟಕ್ಕೆ ಹೋಗುವಾಗ‌ ಗನ್ ಇಟ್ಟುಕೊಂಡು ಓಡಾಡುತ್ತಿದ್ದರು. ಅದರಂತೆ ಕಾಕನಹೊಸೂಡಿಯಲ್ಲಿ ಅಡಿಕೆ ಶುಂಠಿ ಕೆಲಸ ಮಾಡಿಸಲು ಬೊಲೆರೋ ಪಿಕಪ್ ವಾಹನದಲ್ಲಿ ಬಂದಿದ್ದರು.


ಜಮೀನಿನ ಗೇಟ್ ಮುಂಭಾಗದಲ್ಲಿ ವಾಹನ ನಿಲ್ಲಿಸಿ ಜಮೀನಿನ ಕಡೆ ಹೋದಾಗ ವಾಹನದ ಬಾಗಿಲನ್ನ ಯಾವುದೋ ಕೀಯಿಂದ ತೆಗೆದು ಸೀಟಿನ ಹಿಂಭಾಗದಲ್ಲಿll



ಇಟ್ಟಿದ್ದ ಗನ್ ನ್ನ ಕದ್ದುಕೊಂಡು ಹೋಗಿದ್ದಾರೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ