ಗುರುವಾರ, ಆಗಸ್ಟ್ 22, 2024

ಕೆರೆಗೆ ಇಳಿದ ದಳಪತಿ



ಸುದ್ದಿಲೈವ್/ಶಿಕಾರಿಪುರ


ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಖಾಸಗಿ ಬಸ್ಸ್ ಚುರ್ಚುಗುಂಡಿ-ಚಿಕ್ಕಜೋಗಿಹಳ್ಳಿ ಮದ್ಯ ಬರುವ ಹೆಗ್ಗೆರಿ ಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಇಳಿದಿದೆ.‌ ಸಣ್ಣಪುಣ್ಣ ಗಾಯಗಳಿಂದ ಪ್ರಯಾಣಿಕರು ಮತ್ತು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



ಕೆರೆ ತುಂಬಿಕೊಂಡಿದ್ದು ಸ್ವಲ್ಪ ಎಡವಟ್ಟಾಗಿದ್ದರೂ ಬಸ್ ಸಂಪೂರ್ಣ ಮುಳುಗುವ ಆತಂಕ ಎದುರಾಗಿತ್ತು.  ಪೂರ್ತಿ ಬೀಳದೆ ಬಸ್ ನ ಮುಂಭಾಗ ನೀರಿಗೆ ಇಳಿದಿದೆ.‌ 15 ವರ್ಷದಿಂದ ಕೆರೆ ಏರಿ ಎಷ್ಟು ಸರಿ ಮಾಡಿದರೂ  ಮಳೆಗಾಲದಲ್ಲಿ ಮಣ್ಣು ಕುಸಿಯುವುದರಿಂದ  ಇದಕ್ಕೆ ಶಾಶ್ವತ ಪರಿಹಾರ ಇನ್ನೂ ಕೂಡ ಸಿಕ್ಕಿಲ್ಲ.


ಪ್ರತಿದಿನ ಇಲ್ಲಿ ಚಾಲಕರು ಮತ್ತು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಭಯ ಎದುರಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುವಂತೆ ಸ್ಞತಳೀಯರು ಕೇಳಿಕೊಂಡಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ