ಮಂಗಳವಾರ, ಆಗಸ್ಟ್ 20, 2024

ಶಾಲೆಯ ಆವರಣದಲ್ಲಿ ನಿಲ್ಲಿಸಿದ್ದ ಬಸ್ ಗಳ ಪಾರ್ಟ್ಸ್ ಗಳು ಕಳುವು


 

ಸುದ್ದಿಲೈವ್/ಶಿವಮೊಗ್ಗ


ಗುರುಪುರದಲ್ಲಿರುವ ಖಾಸಗಿ ಶಾಲಾ ಬಸ್ ನ ಟಯರ್, ಟೂಲ್, ಸ್ಟೆಪ್ನಿ, ಲಿವರ್, ಜಾಕ್ ಮೊದಲಾದ ಸ್ಪೇರ್ ಪಾರ್ಟ್ಸ್ ಗಳನ್ನ ಕದ್ದೊಯ್ದಿರುವ ಬಗ್ಗೆ ಶಿವಮೊಗ್ಗ  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


ಶಿವಮೊಗ್ಗ ನಗರದ ಗುರುಪುರದಲ್ಲಿರುವ ಡೆಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಸೇರಿದ  ಬಸ್ಸುಗಳನ್ನು ಶಾಲಾ ಆವರಣದಲ್ಲಿರುವ ಪಾರ್ಕನ ಲಾಟ್ ನಲ್ಲಿ ನಿಲ್ಲಿಸಲಾಗಿತ್ತು. ಪ್ರತಿ ದಿನ ಮ್ಯಾನೇಜರ್ ಆದ ಚೇತನ ಬಿ ಸಿಂಗ್ ರವರು ಸಂಜೆ 07.00 ಗಂಟೆಗೆ ಶಾಲೆಗೆ ಬೀಗ ಹಾಕಿಕೊಂಡು ಮನೆಗೆ ಹೋಗುತ್ತಾರೆ. 


ಮರುದಿನ  ಬೆಳಿಗ್ಗೆ 07.00 ಗಂಟೆಗೆ ಚೇತನ ಬಿ ಸಿಂಗ್ ರವರು ಶಾಲಾ ಆವರಣಕ್ಕೆ ಬಂದು ಪರಿಶೀಲನೆ ಬಡೆಸಿ ತೆರಳುವುದು ಅವರ ಕಾಯಕವಾಗಿದೆ.  ಇತ್ತೀಚೆಗೆ  ಶಾಲೆಯ ಗೇಟಿನ ಬೀಗವನ್ನು ಮುರಿದು ಓಳ ಪ್ರವೇಶ ಮಾಡಿ ಶಾಲಾ ಆವರಣದಲ್ಲಿ ಅಳವಡಿಸಿದ್ದ, ಸಿ.ಸಿ.ಟಿ.ವಿ ಕ್ಯಾಮರದ ವೈರ್ ಗಳನ್ನು ಕಿತ್ತು ಹಾಕಿದ್ದಾರೆ.


ಪಾರ್ಕನಲ್ಲಿ ನಿಲ್ಲಿಸಿದ್ದ 11 ಶಾಲಾ ಬಸ್ಸುಗಳಲ್ಲಿ ಸುಮಾರು 07-08 ಬಸ್ಸುಗಳಿಗೆ ಸೇರಿದ 1) ಬಸ್ಸಿನ ಸೈಷ್ಟಿ-02 ಅಂದಾಜು ಬೆಲೆ-7000/- 2) ಬಸ್ಸಿನ ಜಾಕ್-02 ಅಂದಾಜು 5000/- 3) ಬಸ್ಸಿನ 02 ಲಿವರ್ ಅಂದಾಜು ಬೆಲೆ-1000 4) ಬಸ್ಸಿಗೆ ಅಳವಡಿಸುವ ಬೆಂಕಿ ಆರಿಸುವ 02 ಟ್ಯಾಂಕ್ ಅಂದಾಜು ಬೆಲೆ-6000 5) ಬಸ್ಸಿನ 02 ಟೈರ್ ಗಳು ಅಂದಾಜು ಬೆಲೆ 17000/- ಹಾಗೂ 6) ಕಳೆ ಕಟ್ ಮಾಡುವ ಯಂತ್ರ ಅಂದಾಜು ಬೆಲೆ 20000/- ರೂ ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಒಟ್ಟು ಅಂದಾಜು ಬೆಲೆ 56,000/- ರೂಗಳಾಗಿವೆ.


ನಂತರ  ಶಾಲೆಯ ಮುಂಬಾಗದ ಮನೆಯ ವಾಸಿ ಪ್ರದೀಪರವರನ್ನು ವಿಚಾರ ಮಾಡಿದಾಗ ಪ್ರದೀಪರವರು ರಾತ್ರಿ 10.30 ಗಂಟೆ ಸಮಯದಲ್ಲಿ ಸುಮಾರು 4-5 ಜನರು ಶಾಲಾ ಕಾಂಪೌಂಡ ಒಳಭಾಗದಲ್ಲಿದ್ದು, ನಂತರ ಎಲ್ಲರು ಕೆ.ಎ 15 ಎ 2372 ಸಂಖ್ಯೆ ಆಟೋದಲ್ಲಿ ನಮ್ಮ ಮನೆಯ ಮುಂಬಾಗದ ಕಾಂಪೌಂಡ ಪಕ್ಕದ ರಸ್ತೆಯಲ್ಲಿ ಹೋಗುತ್ತಿರುವಾಗಿ ತಿಳಿಸಿದ್ದಾರೆ. 


ಆಟೋದಲ್ಲಿ, ವೈರ್, ಟೈರುಗಳು ನನಗೆ ಕಂಡಿದ್ದು, ಈ ಹಿಂದೆ ನಿಮ್ಮ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ, ಶಂಕರಪ್ಪ, ರವಿಕುಮಾ‌ರ್, ಮಾಲತೇಶರವರಾಗಿದ್ದರೆಂದು ತಿಳಿಸಿದ್ದಾರೆ. ಈ ಹಿಂದೆ ಶಾಲೆಯಲ್ಲಿ ಕಳ್ಳತನವಾಗಿದ್ದು ಇದರಲ್ಲಿ ಇವರುಗಳೇ ಆರೋಪಿಗಳಾಗಿದ್ದಾರೆ.  ಈ ಬಾರಿಯ ಕಳ್ಳತನಲ್ಲಿ  ಅರುಣ, ಶಂಕರಪ್ಪ, ರವಿ ಕುಮಾರ, ಮಾಲತೇಶ ಹಾಗೂ ಇತರರ ಮೇಲೆ ಅನುಮಾನವಿದೆ ಎಂದು ಶಾಲೆಯ ಜಗದೀಶ್ ಗೌಡರ್ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ