ತಮಟೆ ಬಾರಿಸದಂತೆ ಕಿರಿಕ್-ಎಫ್ಐಆರ್ ದಾಖಲು

 


ಸುದ್ದಿಲೈವ್/ಶಿವಮೊಗ್ಗ


ಟಿಪ್ಪುನಗರದ ಮೊದಲನೇ ತಿರುವಿನಲ್ಲಿ ಆ.4 ರಂದು  ರಾತ್ರಿ ಶವ ಸಂಸ್ಕಾರದ ವೇಳೆ ತಮಟೆ ಹೊಡೆಯದಂತೆ ಆಕ್ಷೇಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಅಪರಿಚಿತ 5 ಜನ ಮುಸ್ಲೀಂ ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಟಿಪ್ಪುನಗರದ ಮುರುಗನ್ ಎಂಬುವರ ಸಹೋದರಿ ಸರಸ್ವತಿ ಎಂಬುವರು ಅಸುನೀಗಿದ್ದು, ಶವಸಂಸ್ಕಾರಕ್ಕಾಗಿ ಟಿಪ್ಪುನಗರ ಚಾನೆಲ್ ನಲ್ಲಿ ಗಂಗೆಪೂಜೆ ಮಾಡಿ ನೀರು ತರುವಾಗ ಮಲ್ನಾಡ್ ಕಾಂಪ್ಲೆಕ್ಸ್ ಬಳಿ 5-6 ಜನ ಮುಸ್ಲೀಂ ಯುವಕರು ಅಡ್ಡಿಪಡಿಸಿರುವುದಾಗಿ ದೂರಲಾಗಿದೆ.


ಇಲ್ಲಿ ತಮಟೆ ಬಾರಿಸದಂತೆ ಬೈದು ಕೂಗಾಡಿದ್ದಾರೆ. ತಮಟೆ ಬಾರಿಸುವುದನ್ನ ನಿಲ್ಲಿಸಿ ಮುಂದೆ ಸಾಗುವಾಗ ಮುರುಗನ್  ಕಡೆಯ ಮಹಿಳೆಯರ ಮೇಲೆ ಕೈ ಮತ್ತು ಕಲ್ಲುಗಳಿಂದ ಹೊಡೆದು ಅವ್ಯಚ್ಯ ಶಬ್ದಗಳಿಂದ ಬೈದಿರುವುದಾಗಿ ದೂರಲಾಗಿದೆ.


ಕೆಲವರು ಬಿಡಿಸಲು ಮುಂದಾದರೂ ಸಹ 10-15 ಜನರ ಗುಂಪು ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಪೊಲೀಸರು ಬಂದಿದ್ದನ್ನ ಕಂಡು ಜಾಗ ಖಾಲಿ ಮಾಡಿರುವುದಾಗಿ ಎಫ್ಐಆರ್ ನಲ್ಲಿ ತಿಳಿಸಲಾಗಿದೆ. 5-6 ಜನ ಮುಸ್ಲೀಂ ಯುವಕರ ಮೇಲೆ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು