ಮಂಗಳವಾರ, ಆಗಸ್ಟ್ 20, 2024

ಗಣಪತಿ ಹಾಗೂ ಈದ್ ಮೆರವಣಿಗೆ ನಡೆಯೋದು ಯಾವಾಗ? ಈ ಕುರಿತು ಶಾಸಕರ ಹೇಳಿಕೆ ಏನು?



ಸುದ್ದಿಲೈವ್/ಶಿವಮೊಗ್ಗ


ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮಹೋತ್ಸವ ಮತ್ತು ಈದ್ ಹಬ್ಬದ ಮೆರವಣಿಗೆ ಬಹುತೇಕ ಒಟ್ಟಿಗೆ ಬಂದಿದ್ದು ಈ ಬಾರಿಯೂ ಏನಾಗಲಿದೆ ಎಂಬ ಕುತೂಹಲ ಆರಂಭವಾಗಿದೆ.  


ಕಳೆದ ವರ್ಷ ಈದ್ ಮೆರವಣೆಗೆಯ ವೇಳೆ ರಾಗಿಗುಡ್ಡದಲ್ಲಿ ಅವಘಡ ಸಂಭವಿಸಿತ್ತು. ಈ ಹಿನ್ನಲೆಯಲ್ಲಿ ಮೆರವಣೆಗೆಗಳು ಏನಾಗಲಿದೆ ಎಂಬ ಕುತೂಹಲಕ್ಕೆ ಇಂದು ನಡೆದ ಶಾಸಕ ಚೆನ್ನಬಸಪ್ಪನವರ ಸುದ್ದಿಗೋಷ್ಠಿಯಲ್ಲೂ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕ ಚೆನ್ನಬಸಪ್ಪ ಪೊಲೀಸ್ ಅಧಿಕಾರಿಗಳ ಜೊತೆಯ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ. 


ಈ ಬಾರಿಯ ಮೆರವಣಿಗೆಗಳು ಅದಕ್ಕೆ ಸಿದ್ದತೆಗಳು ನಡೆಯಬೇಕಿದೆ. ಆಚರಣೆಯ ಬಗ್ಗೆ ಡಿವೈಎಸ್ಪಿ ಬಳಿ ಮಾತುಕತೆ ನಡೆಯುತ್ತಿದೆ. ಯಾವುದೂ ಫೈನಲ್ ಆಗಿಲ್ಲ.‌ಆಚರಣೆಗೆ ಇನ್ನೂ ದಿನಗಳಿವೆ ಎಂದರು.‌

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ