ಮಂಗಳವಾರ, ಆಗಸ್ಟ್ 20, 2024

ಬಡತನದಲ್ಲಿ ಸಾಧನೆ ಶಿಖರವೇರಿದ ಚಂದ್ರಗುತ್ತಿಯ ಐಶ್ವರ್ಯ: ಸರ್ಕಾರ ಮತ್ತು ದಾನಿಗಳ ನೆರವು ಅಗತ್ಯ

 


ಸುದ್ದಿಲೈವ್/ಸೊರಬ


ತಾಲೂಕಿನ ಚಂದ್ರಗುತ್ತಿಯ ಕಡೆ ಜೋಳದ ಗುಡ್ಡೆ ಎಂಬ ಗ್ರಾಮದಲ್ಲಿ ಬಡ ದಂಪತಿ ವೆಂಕಟೇಶ್ ಮತ್ತು ಮಂಜುಳಾ ಅವರ ಮಗಳು, ಐಶ್ವರ್ಯ, ಅನೇಕ ರಾಜ್ಯಳಲ್ಲಿ ನಡೆದ ಕಾಯಕಿಂಗ್, ಮೌಂಟನೆರಿಂಗ್ ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಿ, ಅನೇಕ ಪದಕಗಳನ್ನು ಗೆದ್ದುಕೊಂಡಿದ್ದಾಳೆ. ಈ ಪ್ರತಿಭಾವಂತ ಕ್ರೀಡಾಪಟುವಿಗೆ ಒಲಂಪಿಕ್ ಕ್ರೀಡೆಯಲ್ಲಿ ಭಾಗವಹಿಸುವ  ತವಕ ಇದ್ದು ತನ್ನ ಸಾಧನೆಯನ್ನು ಮುಂದುವರಿಸಲು ಸರ್ಕಾರ ಮತ್ತು ಸಮಾಜಮುಖಿ ಚಿಂತನೆ ಹೊಂದಿರುವ ದಾನಿಗಳ ನೆರವು ಅತ್ಯಾವಶ್ಯಕವಾಗಿದೆ.


ಈ ಸಮಯದಲ್ಲಿ, ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಮಾಜ ಸೇವಕರಾದ  ಡಾ|| ಜ್ಞಾನೇಶ್ ಹೆಚ್. ಈ. ಅವರು ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದು, ಬಡತನದಲ್ಲಿ ಹುಟ್ಟಿ ಬೆಳೆದ ಐಶ್ವರ್ಯಳಿಗೆ ಬಡತನ ಅಡ್ಡಿಯಾಗಿರಬಹುದು  ಸಾಧಿಸುವ ಛಲ ಇದ್ದಾಗ ಯಾವುದೇರೀತಿಯ ಅಡ್ಡಿ ಆತಂಕಗಳು ದೂರವಾಗುತ್ತದೆ," ಎಂದು ಹೇಳಿದರು. ಅವರು, ಈ ಪ್ರತಿಭಾವಂತೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ, ರಾಜ್ಯಕ್ಕೆ ಮತ್ತು ತಾಲೂಕಿಗೆ ಕೀರ್ತಿಯನ್ನು ತರುತ್ತಾಳೆ," ಎಂದು ಆಶಿಸಿದರು.


ಕ್ರೀಡಾ ಸಾಧನೆಗೆ ಅಗತ್ಯವಿರುವ ನೆರವು ಈ ಪ್ರತಿಭೆಯ ಮುಂದಿನ ಹೆಜ್ಜೆಯನ್ನು ಸಹಸ್ರಗೊಳಿಸಲು  ದಾನಿಗಳು ಮತ್ತು ಸರ್ಕಾರ ಮುಂದಾಗಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ