ಮಂಗಳವಾರ, ಆಗಸ್ಟ್ 13, 2024

ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಮೆ



ಸುದ್ದಿಲೈವ್/ಶಿವಮೊಗ್ಗ


ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಕ್ಲಾರ್ಕ್ ಪೇಟೆಯಲ್ಲಿ ನಡೆದಿದೆ. 


ಕ್ಲಾರ್ಕ್ ಪೇಟೆಯ ನಿವಾಸಿಗಳಾದ ಭುವನೇಶ್ವರಿ, ಮೋಹನ್ ಮತ್ತು ದರ್ಶನ್ ವಿಷ ಸೇವಿಸಿ ಆತ್ಹತ್ಯೆ ಮಾಡಿಕೊಂಡಿದ್ದಾರೆ. ಭುವನೇಶ್ವರಿ ಮತ್ತು ಮೋಹನ್ ಸಹೋದರರಾಗಿದ್ದಾರೆ. ಭುವನೇಶ್ವರಿ ಮಗ ದರ್ಶನ್ ಆಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 



ಆತ್ಮಹತ್ಯೆಗೆ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಎರಡು ದಿನದಿಂದ ಮತ್ತೋರ್ವ ಸಹೋದರ ಶಿವು ಎಂಬುವರು ಈ ಮೂವರನ್ನ ಮೋಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದ್ದಾರೆ. 



ಯಾರೂ ಕರೆಯನ್ನ ಸ್ವೀಕರಿಸದೆ ಇರುವ ಕಾರಣಕ್ಕೆ ಕ್ಲಾರ್ಕ್ ಪೇಟೆಗೆ ಬಂದು ಮನೆಯ ಬಾಗಿಲು ತೆಗೆದಾಗ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ತಿಳಿದು ಬಂದಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ