ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ ವೇಳೆ ನಡೆದಿದ್ದೇನು?



ಸುದ್ದಿಲೈವ್/ಶಿವಮೊಗ್ಗ


ಮುಖ್ಯಮಂತ್ರಿ ಸಿದ್ದರಾಯ್ಯನವರ ಹುಟ್ಟು ಹಬ್ಬದ ವೇಳೆ ನಾಲ್ವರು ಕಿಡಿಗೇಡಿಗಳಿಂದ ಕಲ್ಲುತೂರಿ ಫ್ಲೆಕ್ಸ್ ಹರಿದು ಹಾಕಿರುವ ಘಟನೆ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಆ.03 ರಂದು ಸಂಜೆ ಮಿಳಘಟ್ಟದ ಇಂದಿರಾ ಕ್ಯಾಂಟೀನ್ ನ ಬಳಿ ಕಾಂಗ್ರೆಸ್ ಕಾರ್ಯರ್ತರು ಸಿದ್ದರಾಮಯ್ಯನವರ 75 ನೇ ವರ್ಷದ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದರು.‌ ನಾಲ್ವರು ಬೈಕ್ ನಲ್ಲಿ ಬಂದು ಹುಟ್ಟು ಹಬ್ಬ ಆಚರಿಸುತ್ತಿರುವವರ ಮೇಲೆ ಕಲ್ಲುಬೀಸಿರುವುದಾಗಿ ಆರೋಪಿಸಲಾಗಿದೆ. 

https://www.suddilive.in/2024/04/07.html

ಅಷ್ಟೆ ಅಲ್ಲದೇ ಸಿದ್ದರಾಮಯ್ಯನವರಿಗೆ ಶುಭಕೋರಿ ಹಾಕಲಾಗಿದ್ದ ಫ್ಲೆಕ್ಸ್ ನ್ನ ಹರಿದು ಹಾಕಿರುವುದಾಗಿ ರೆಹಮತ್ ಎಂಬುವರು ನ್ಯಾಯಾಲಯದ ಅನುಮತಿ ಪತ್ರ ಪಡೆದು ದೊಡ್ಡಪೇಟೆಯಲ್ಲಿ ನಾಲ್ವರ ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket