ಮಂಗಳವಾರ, ಆಗಸ್ಟ್ 27, 2024

ಖಾಸಗಿ ಬಸ್ ನಲ್ಲಿ ಪ್ರಯಾಣಿಸುವಾಗ ಚಿನ್ನಾಭರಣ ಕಳುವು



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ನೆಹರೂ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್ ನಲ್ಲಿ 3 ಗ್ರಾಂ 250 ಮಿಲಿಗ್ರಾಂ ಚಿನ್ನಾಭರಣ ಖರೀದಿಸಿದ್ದ ಮಹಿಳೆಯೋರ್ವರು ಶಿವಪ್ಪ ನಾಯಕ ವೃತ್ತಕ್ಕೆ ಬಂದು ಬಸ್ ಹೊಡಿದು ಪ್ರಯಾಣಿಸುವಾಗ ಚಿನ್ನಾಭರಣ ಕಳುವಾಗಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ‌ 


ಆ.6 ರಂದು ಈ ಘಟನೆ ನಡೆದಿದೆ. ಚಿನ್ನ ಆಭರಣ ಖರೀದಿಸಿ ಗಾಂಧಿ ಬಜಾರ್ ನ ಶಿವಪ್ಪ ನಾಯಕ ಪ್ರತಿಮೆಯ ಬಸ್ ಸ್ಟಾಪ್ ನಿಂದ ಖಾಸಗಿ ನಗರ ಸಾರಿಗೆಯಲ್ಲಿ ಬಸ್ ಹತ್ತಿ ಸೀಟು ಹತ್ತಿ ಕುಳಿತಾಗ ಟಿಕೇಟ್ ಪಡೆಯಲು ಮುಂದಾಗ ಈ ಘಟನೆ ನಡೆದಿದೆ. 


ನಂತರ ಬೆಂಗಳೂರಿನಲ್ಲಿರುವ ಮಗಳಿಗೆ ಅನಾರೋಗ್ಯವಾದುದರಿಂದ ಮಗಳನ್ನ‌ನೋಡಿಕೊಂಡು ಬಂದ ನಂತರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ