ಸೋಮವಾರ, ಆಗಸ್ಟ್ 26, 2024

ಸುದ್ದಿಲೈವ್ ನ ಫಲಶೃತಿ-ಗಾಂಜಾ ಕಿಟ್ ಪೂರೈಕೆ

 


ಸುದ್ದಿಲೈವ್/ಶಿವಮೊಗ್ಗ


ನಿನ್ನೆ ಭದ್ರಾವತಿಯಲ್ಲಿ ಗಾಂಜಾ ಪ್ರಕರಣದಲ್ಲಿ ಬೆಳಕಿಗೆ ಬಂದಿದ್ದ, ಆಸ್ಪತ್ರೆಗಳಲ್ಲಿನ ಗಾಂಜಾ ಕಿಟ್ ನ ಕೊರತೆಯ ಬಗ್ಗೆ ಮೆಗ್ಗಾನ್ ನ ಡಿಎಸ್ ಸ್ಪಂಧಿಸಿದ್ದಾರೆ. ಮುಂದಾಗಬಹುದಿದ್ದ ಮುಜುಗರದಿಂದ ಪಾರು ಮಾಡಿದ್ದಾರೆ.


ನಿನ್ನೆ ಭದ್ರಾವತಿ ತಾಲೂಕಿನಲ್ಲಿ ಗಾಂಜಾ ಪ್ರಕರಣದಲ್ಲಿ ಇಬ್ಬರು ಯುವಕರನ್ನ ಗ್ರಾಮಸ್ಥರು 112 ಗೆ ಹಿಡಿದುಕೊಟ್ಟಿದ್ದರು. ಇದೇ ಆರೋಪಿಗಳನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದಾಗ ಭದ್ರಾವತಿಯಲ್ಲೂ ಕಿಟ್ ಖಾಲಿಯಾಗಿತ್ತು.


ಇದರಿಂದ ಭದ್ರಾವತಿಯಿಂದ ಶಿವಮೊಗ್ಗದ ಮೆಗ್ಗಾನ್ ಗೆ ಕರೆತರಲಾಗಿತ್ತು. ಒಬ್ಬರಿಗೆ ಪಾಸಿಟಿವ್ ಬಂದಿತ್ತು. ಮತ್ತೊಬ್ಬನಿಗೆ ಗಾಂಜಾ ಪತ್ತೆ ಮಾಡಲು ಕಿಟ್ ಕೊರತೆಯಾಗಿತ್ತು. ಈ ಘಟನೆಯ ಮೇಲೆ ನಿನ್ನ ಸುದ್ದಿಲೈವ್ ಮೆಗ್ಗಾನ್ ನಲ್ಲಿ ಗಾಂಜಾ ಪತ್ತೆ ಮಾಡುವ ಕಿಟ್ ಖಾಲಿಯಾಗಿದೆ. ಡಾ.ಸುರಗೀಹಳ್ಳಿಯವರು ನೀಡಿದ್ದ ಕಿಟ್ ಖಾಲಿಯಾಗಿದೆ.


ಹೊಸದಾಗಿ ಡಿಹೆಚ್ ಒ ಆಗಿ ಬಂದ ಡಾ.ನಟರಾಜ್ ನಾಲ್ಕು ತಿಂಗಳು ಕಳೆದರೂ ಒಂದು ಕೊಟ್ಟಿಲ್ಲ ಎಂದು ಸುದ್ದಿ ಮಾಡಲಾಗಿತ್ತು. ಸುದ್ದಿಯ ಬೆನ್ನಲ್ಲೇ ಸ್ಪಂಧಿಸಿದ ಡಾ.ಸಿದ್ದನಗೌಡ 8 ಸಾವಿರ ಕಿಟ್ ಗಳಿಗೆ ಆರ್ಡರ್ ಮಾಡಿದ್ದಾರೆ. ಗುರುವಾರದ ಒಳಗೆ ಕಿಟ್ ಪೂರೈಕೆ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲಿಯವರೆಗೆ ತಾತ್ಕಾಲಿಕ ಕಿಟ್ ನ್ನ ತರಲಾಗಿದೆ ಎಂದು ತಿಳಿಸಿದ್ದಾರೆ. ಇದು ಸುದ್ದಿಲೈವ್ ನ ಫಲಶೃತಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ