ಶನಿವಾರ, ಆಗಸ್ಟ್ 10, 2024

ದೇವಿ ರೇಣುಕಮ್ಮನಿಗೆ ಮಡ್ಲಕ್ಕಿ ತುಂಬಿದ ಸಚಿವ

 


ಸುದ್ದಿಲೈವ್/ಚಂದ್ರಗುತ್ತಿ


ಐತಿಹಾಸಿಕ ದೇವಸ್ಥಾನ ಚಂದ್ರಗುತ್ತಿ ರೇಣುಕಮ್ಮ ದೇವಾಲಯಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದರು.‌


ದೇವಸ್ಥಾನದ ಸರ್ವಾಂಗಿಣ ಅಭಿವೃದ್ಧಿಗಾಗಿ ಇಂದು ಅಧಿಕಾರಿಗಳ ಸಭೆ ನಡೆಯುವ ಮುನ್ನಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯಾಶೀರ್ವಾದ ಪಡೆದರು.


ಈ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿಗೆ ಸಚಿವರಿಂದ ಹುಡಿತುಂಬಿಸಲಾಯಿತು. ಸಚಿವರಿಗೆ ಏಸಿ ಯತೀಶ್ ಯವರು ಮೈಸೂರು ಪೇಟೆ ತೊಡಿಸಿ ಸನ್ಮಾನಿಸಲಾಯಿತು.


ಈ ವೇಳೆ ಅಂಗಡಿ ಮಾಲೀಕರು ಸಚಿವರಿಗೆ ಮನವಿನೀಡಿದ್ದಾರೆ. ದೇವಿಯ ದರ್ಶನ ಮುಗಿಸಿಕೊಂಡು ಹೊರ ಬರುವ ವೇಳೆ ಅಂಗಡಿ ಮಾಲೀಕರು ಚಂದ್ರಗುತ್ತಿ ದೇವಸ್ಥಾನದ ಸುತ್ತಮುತ್ತ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲು ಮನವಿ ಸಲ್ಲಿಸಿದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ