ದೀಪಕ್ ಎಂಎಸ್ ಕುಂಸಿ ಪೊ.ಠಾಗೆ, ಕುಂಸಿಯಲ್ಲಿದ್ದ ಹರೀಶ್ ಪಟೇಲ್ ಕೋಟೆಗೆ ವರ್ಗ

 


ಸುದ್ದಿಲೈವ್/ಶಿವಮೊಗ್ಗ


ಮೊನ್ನೆ ತಾನೆ 15 ಜನ ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಮುಂದಯವರೆದ ಬೆನ್ನಲ್ಲೇ ಇಂದು ಮತ್ತೆ 12 ಜನ ರಾಜ್ಯದ ವಿವಿಧ ಪೊಲೀಸ್ ಇನ್ ಸ್ಪೆಕ್ಟರ್ ವರ್ಗವಾಗಿದ್ದಾರೆ. 


ಸೆನ್ ಪೊಲೀಸ್ ಠಾಣೆಯಿಂದ ಸ್ಥಳ ನಿರೀಕ್ಷೆಯಲ್ಲಿದ್ದ ದೀಪಕ್ ಎಂ ಎಸ್ ಕುಂಸಿ ಪೊಲೀಸ್ ಠಾಣೆ ಪಿಐ ಆಗಿ ವರ್ಗವಾಗಿದ್ದಾರೆ. ಅದರಂತೆ ಕುಂಸಿ ಠಾಣೆ ಪಿಐ ಆಗಿದ್ದ ಹರೀಶ್ ಪಟೇಲ್ ಕೋಟೆ ಪೊಲೀಸ್ ಠಾಣೆಗೆ ವರ್ಗವಾಗಿದ್ದಾರೆ. 


ಎಸ್ ಬಿ ಆರ್ ಬಿಗೆ ವರ್ಗವಾಗಿದ್ದ ಶ್ರೀಕಾಂತ್ ಎಫ್ ತೋಟಗಿ ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣೆಗೆ, ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿದ್ದ ಶೈಲ ಗಾಬಿ ಖಡೇ ಬಜಾರ್ ಗೆ ಸ್ಥಳ ನಿರೀಕ್ಷಣೆಯಲ್ಲಿದ್ದ ರಮೇಶ್ ಜಿ.ಎನ್ ಡಿಸಿಆರ್ ಇ ಮೈಸೂರಿಗೆ


ಕರ್ನಾಟಕ ಲೋಕಾಯುಕ್ತದಲ್ಲಿದ್ದ ಆಂಜನೇಯ ನೀಲಪ್ಪ ಹರಿಜನ ಹಾವೇರಿ ಜಿಲ್ಲೆಯ ಹಾನಗಲ್ ವೃತ್ತಕ್ಕೆ, ಸಂಗಪ್ಪ ಎಂ ಶಿರಗುಪ್ಪಿ ಗದಗ ಜಿಲ್ಲೆ ಸೆನ್ ಠಾಣೆಯಿಂದ ವಿಜಯಪುರ ಸೆನ್ ಠಾಣೆಗೆ ವರ್ಗವಾಗಿದ್ದವರು, ಗದಗಿನ ಸೆನ್ ಠಾಣೆಯಲ್ಲೇ ಮುಂದು ವರೆಯಲಿದ್ದಾರೆ. 


ವಿಜಯಪುರ ಸೆನ್ ಠಾಣೆಯಿಂದ ಸ್ಥಳ ನಿರೀಕ್ಷಣೆಯಲ್ಲಿದ ರಮೇಶ್ ಸಿ ಅವಜಿ‌ ಅವರನ್ನ ವಿಜಯಪುರ ಸೆನ್ ಠಾಣೆಯಲ್ಲಿಯೇ ಪಿಐ ಆಗಿ ಮುಂದುವರೆಯಲಿದ್ದಾರೆ. ಹೊಸಪೇಟೆ ಸಂಚಾರ  ಪೊಲೀಸ್ ಠಾಣೆಯಲ್ಲಿದ್ದ ಶ್ರೀನಿವಾಸ ಚಂದ್ರಪ್ಪ ಮೇಟಿ ಅವರನ್ನ ಲೋಕಸಭೆ ಚುನಾವಣೆ ವೇಳೆ ಹುಬ್ಬಳ್ಳಿ-ಧಾರವಾಡ ನಗರ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಅಲ್ಲೇ‌ ಪಿಐಆಗಿ ಮುಂದುವರೆಯಲಿದ್ದಾರೆ. 


ರಾಜ್ಯ ಗುಪ್ತವಾರ್ತೆಯಲ್ಲಿದ್ದ ಹುಬ್ಬಳ್ಳಿ-ಧಾರವಾಡದ ಬೆಂಡೆಗೆರೆ ಪೊಲೀಸ್ ಠಾಣೆ ಪಿಐ ಆಗಿ, ರಾಧಕೃಷ್ಣ ಟಿ.ಎಸ್ ಹೊಸದಾಗಿ ಸೃಜನವಾದ ಜೆಪಿ ನಗರ ಪೊಲೀಸ್ ಠಾಣೆ ಪಿಐ ಆಗಿ, ಬೆಳಗಾವಿ ಡಿಎಸ್ ಬಿಯಿಂದ ಖಾನಾಪುರದ ಪಿಟಿಎಸ್ ಗೆ ವರ್ಗವಾಗಿದ್ದ ಬಜವರಾಜ್ ಭೋಜಪ್ಪ ಲಮಾಣಿ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗವಾಗಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು