ಸೋಮವಾರ, ಆಗಸ್ಟ್ 19, 2024

ಅಂದರ್ ಬಾಹರ್ ಅಡ್ಡೆ ಮೇಲೆ ದಾಳಿ



ಸುದ್ದಿಲೈವ್/ಶಿವಮೊಗ್ಗ


ಕುಂಸಿ ಸಮೀಪದ ಚಿಕ್ಕದಾ ನಂದಿ ಗ್ರಾಮದ ಹತ್ತಿರ ನೀಲಿಗಿರಿ ಪ್ಲಾಂಟೇಶನ್ ನಲ್ಲಿ  ಅಂದರ್ ಬಾಹಾರ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ  ಕುಂಸಿ ಪೊಲೀಸರು ದಾಳಿ ನಡೆಸಿ 21 ಸಾವಿರ ರೂ ಹಣ ಹಾಗೂ 10 ಜನರನ್ನ ವಶಕ್ಕೆ ಪಡೆದಿದ್ದಾರೆ.


ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹರೀಶ್ ಕೆ ಪಟೇಲ್. ರವರು ತಮ್ಮ ಸಿಬ್ಬಂದಿಗಳಾದ ಪಿಎಸ್ಐ ಶಾಂತರಾಜ್. ಹೆಡ್ ಕಾನ್ಸ್ಟೇಬಲ್ ಪ್ರಕಾಶ್. ಕಾನ್ಸ್ಟೇಬಲ್ ಶಶಿಧರ್ ನಾಯಕ್. ವಿನಾಯಕ್. ರಘು. ನಿತಿನ್. ಪ್ರಶಾಂತ್ ನಾಯ್ಕ. ಆದರ್ಶ. ಶಶಿ. ಜಿ ಚಾಲಕ ಶಿವಪ್ಪ. ಹೋಮ್ ಗಾರ್ಡ್ ಮುರುಳಿಧರ್ ಈ ಕಾರ್ಯಾಚರಣೆಯಲ್ಲಿದ್ದರು.  


ನಿನ್ನೆ ನಡೆದ ಇಸ್ಪೀಟ್ ಅಡ್ಡ ಮೇಲೆ ದಾಳಿಯ ವೇಳೆ 21,190 ರೂ. ಹಣ ಹಾಗೂ 10 ಜನರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗಿದೆ.‌ ಈ ಬಗ್ಗೆ   ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ