ಬುಧವಾರ, ಆಗಸ್ಟ್ 21, 2024

ವಿಲ್ಸನ್ ಬಾಬು ಹತ್ಯೆಯೂ ಹಾಗೂ ಕೇರಂ ಜೂಜಾಟವೋ

 


ಸುದ್ದಿಲೈವ್/ಭದ್ರಾವತಿ


ಅನುಮಾನಸ್ಪದ ಸಾವಾದ ಬೆನ್ನಲ್ಲೇ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಬು ಟಿ ಅಲಿಯಾಸ್ ಜೋಶ್ವಾ, ಜೋಯೆಲ್ ಮತ್ತು ಜೋಸೆಫ್ ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ವಿಲ್ಸನ್ ಬಾಬು ಎಂಬ 32 ವರ್ಷದ ಹುಡುಗನನ್ನು ಹಳೇ ಬುಳ್ಳಾಪುರದ ಪಿರಿಯಾಪಟ್ನದಮ್ಮನ ದೇವಸ್ಥಾನದ ಬಳಿ ಹೀನಾಮಾನವಾಗಿ ಹೊಡೆದು ನಂತರ ಆತನ ಸ್ನೇಹಿತನಿಗೆ ಕರೆ ಮಾಡಿ ವಿಲ್ಸನ್ ಬಾಬು ಕುಡಿದು ಮಲಗಿದ್ದಾನೆ ಎಂದು ತಿಳಿಸಿದ್ದಾರೆ.




ವಿಲ್ಸನ್ ಬಾಬು ಅವನ ಸ್ನೇಹಿತ ಸಂತೋಷ್ ಬಂದು ಎದ್ದೇಳಿಸಿದರೂ ಏಳದ ಬಾಬುವನ್ನ ಇದೇ ಜೋಯೆಲ್, ಜೋಶ್ವಾ, ಜೋಸೆಫ್ ಎತ್ತಾಕಿಕೊಂಡು ಬೈಕ್ ನಲ್ಲಿ ಕೂರಿಸಿದ್ದಾರೆ. ಈ ವೇಳೆ ವಿಲ್ಸನ್ ಉಸಿರಾಡುತ್ತಿದ್ದನು.


ಇತ್ತ ಮಗ ಬಂದಿಲ್ಲವೆಂದು ತಡರಾತ್ರಿ ಹುಡುಕಾಡಿದ ತಂದೆ ಮನೆಗೆ ವಾಪಾಸ್ ಬಂದಾಗ ಮನೆಯ ಮೊದಲನೇ ಹಾಲ್ ನಲ್ಲಿದ್ದಕಾಟ್ ಮೇಲೆ ಮಲಗಿಸಿ ಹೋಗಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವಿಲ್ಸನ್ ಬಾಬು ಕೊನೆ ಉಸಿರೆಳಿದಿದ್ದಾನೆ.


ಆತನನ್ನ ಸ್ನೇಹಿತರಾದ ಬಾಬು ಟಿ ಅಲಿಯಾಸ್ ಜೋಶ್ವಾ, ಜೋಯೆಲ್ ಮತ್ತು ಜೋಸೆಫ್ ಅವರೆ ಹೊಡೆದು ಕೊಂದಿರುವುದಾಗಿ ಎಫ್ಐಆರ್ ದಾಖಲಾಗಿದೆ. ದೇವಸ್ಥಾನದ ಆವರಣದಲ್ಲಿ ಕೇರಂ ಜೂಜಾಟದಲ್ಲಿ ಕೊಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ