ಸೋಮವಾರ, ಆಗಸ್ಟ್ 19, 2024

ಕೋಡಿ ಬಿದ್ದ ಅಬ್ಬಲಗೆರೆ ಕೆರೆ-ಶಾಲೆ ಆವರಣನೂ ಕೆರೆಯಂತಾಗಿದೆ



ಸುದ್ದಿಲೈವ್/ಶಿವಮೊಗ್ಗ


ಕಳೆದೆರಡು ದಿನಗಳಿಂದ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿಯುತ್ತಿರುವ ಮಳೆ ಸಣ್ಣಪ್ರಮಾಣದಲ್ಲಿ ತಲೆನೋವು ತಂದೊಡ್ಡಿದೆ. ಒಂದು ಕಡೆ ಸಂತೋಷ ಪಡುವ ವಿಷಯವಾದರೂ ಮತ್ತೊಂದೆಡೆ ಆತಂಕವನ್ನ ತಂದೊಡ್ಡಿದೆ.


ಇಲ್ಲಿಂದ ಆರು ಕಿಲೋಮೀಟರ್ ನಷ್ಟು ದೂರದ ಅಬ್ಬಲಗೆರೆಯ ಕೆರೆ ಕೋಡಿ ಬಿದ್ದಿದೆ. ಈ ಕೆರೆ ಕಳೆದ ವರ್ಷನೂ  ಕೋಡಿ ಬಿದ್ದಿತ್ತು. ಆದರೆ ಬೇಸಿಗೆಗೆ ನೀರೇ ಇಲ್ಲದಂತಾಗಿತ್ತು. ಮಣ್ಣನ್ನೂ ಸಹ ತೆಗೆದ ಪರಿಣಾಮ ಈ ಕೆರೆ ತುಂಬುವುದೇ ಕಷ್ಟ ಎನ್ನಲಾಗುತ್ತಿತ್ತು. ಆದರೆ ಈ ಬಾರಿ ಮತ್ತೆ ಕೋಡಿ ತುಂಬಿದೆ.‌ ಜಲಪಾತದಂತೆ ಸೃಷ್ಠಿಯಾಗಿದೆ. ಇದೇ ರೀತಿ ಮಳೆ ವಾರಕ್ಕೆ ಬೀಳುವ ಮಳೆ ಒಂದು ದಿನಕ್ಕೆ ಬಿದ್ದರೆ ಸವಳಂಗ ರಸ್ತೆಯಲ್ಲಿ ಓಡಾಡಲು ವಾಹನಗಳಿಗೆ ಅಡಚಣೆ ಉಂಟಾಗಲಿದೆ.  



ಅದರಂತೆ ಮಧ್ಯಾಹ್ನ ಸುರಿದ ಮಳೆ ಬಸವಗಂಗೂರಿನ ಸರ್ಕಾರಿ ಶಾಲೆಯ ಒಳಗೆ ಹರಿದಿದೆ. ಈ ರೀತಿ ಮಧ್ಯಾಹ್ನದ ಮಳೆ ಅವಾಂತರ ಸೃಷ್ಠಿಸಿದೆ.

ಬೊಮ್ಮನ್ ಕಟ್ಟೆಗೆ ಕಾಂತೇಶ್ ಭೇಟಿ


ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಕೆರೆ ಕೊಡಿ ಒಡೆದು ನೀರು ನುಗ್ಗಿದ್ದು ಮಾಜಿ ಡಿಸಿಎಂ ಅವರ ಪುತ್ರ ಕೆ.ಈ.ಕಾಂತೇಶ್  ಮನೆಗಳಿಗೆ  ಭೇಟಿ ನೀಡಿ ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ.‌

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ