ಶುಕ್ರವಾರ, ಆಗಸ್ಟ್ 9, 2024

ಮೌಡ್ಯತೆ ವಿರುದ್ಧ ಜಾಗೃತಿ



ಸುದ್ದಿಲೈವ್/ಆಯನೂರು


ಮಾನವ ಬಂಧುತ್ವ ವೇದಿಕೆ ಸೊರಬವತಿಯಿಂದ ಆಯನೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮೌಢ್ಯತೆ ವಿರುದ್ಧ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನಾಗರ ಕಲ್ಲಿಗೆ ಹಾಲನ್ನು ಎರೆಯುವದನ್ನ  ತಪ್ಪಿಸಿ ಮೂಢನಂಬಿಕೆಯ ಬಗ್ಗೆ ಅರಿವು ಮೂಡಿಸಿ ಪೌಷ್ಟಿಕ ಆಹಾರವಾದ ಹಾಲನ್ನು ಮಕ್ಕಳಿಗೆ ನೀಡಲಾಯಿತು


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆ ಸೊರಬ ತಾಲೂಕು ಅಧ್ಯಕ್ಷರಾದ ರಾಜೇಶ್ ಸಿ ಕಾನಡೆ ಅವರು ವಹಿಸಿದ್ದರು ಹಾಗೂ ಆಯನೂರು  ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಲತಾ ಅವರು ಹಾಗೂ ಆಸರೆ ಮಹಿಳಾ ಸಂಘದ ಅಧ್ಯಕ್ಷರಾದ ಶಿಲ್ಪ ಆರ್ ಅವರು ಹಾಗೂ ಆಸರೆ ಸಂಘದ ಕಾರ್ಯದರ್ಶಿಯಾದ ವಿಶಾಲಾಕ್ಷಮ್ಮ ಹಾಗೂ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಾಗರಾಜ್ ಬಿ ಟಿ, ಹಾಗೂ ಮಾನವ ಬಂದುತ್ವ ವೇದಿಕೆ ಸೊರಬ ಹೊಸಗುಡಿಗಿನಕೊಪ್ಪದ ಗ್ರಾಮ ಸಂಚಾಲಕರಾದ 


ವೀರಭದ್ರ ಸ್ವಾಮಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ತನೀಕಾ ಸಮಿತಿ ಸೊರಬದ ತಾಲೂಕು ಅಧ್ಯಕ್ಷರಾದ ಲತಾ ಟಿ ಎಚ್  ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ ಹಾಲು ಬ್ರೆಡ್ ಸ್ಲೇಟ್ ಹಾಗೂ ಚಾಪೀಸ್ ನೀಡಿ ಬಸವ ಪಂಚಮಿಯನ್ನು ಆಚರಿಸಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ