ಸೋಮವಾರ, ಆಗಸ್ಟ್ 5, 2024

ಸಕ್ರೇಬೈಲಿನಲ್ಲಿ ಹೋಟೆಲ್ ಕಟ್ಟಿಕೊಳ್ಳಲು ಅವಕಾಶವಿದೆಯಾದರೆ, ಬಡವರಿಗೆ ಮನೆ ಕಟ್ಟಿಕೊಳ್ಳಲು ಅವಕಾಶವೇಕೆಯಿಲ್ಲ? ಪ್ರಶ್ನೆಗೆ ಉತ್ತರಿಸುತ್ತಾ ಅರಣ್ಯ ಇಲಾಖೆ?




ಸುದ್ದಿಲೈವ್/ಶಿವಮೊಗ್ಗ


ಬಡವನೋರ್ವನ ಸಣ್ಣಸೂರಿಗೆ ಆಕಾಶವೇ ಬಿದ್ದಂತೆ ಆಡುವ‌ ಅರಣ್ಯಾಧಿಕಾರಿಗಳಿಗೆ ಸಕ್ರೇಬೈಲಿನ ಹೋಟೆಲ್ ಗಳ ಬಗ್ಗೆ ಕಣ್ಣಿಗೆ ಕಾಣೋದಿಲ್ವಾ ಎಂಬ ಸಂದೇಶವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಅಲ್ಲಿ ನೂತನವಾಗಿ ತಲೆ ಏಳುತ್ತಿರುವ ಹೋಟೆಲ್ ನ ನೂತನ ಕಟ್ಟಡದ ಫೋಟೋವೊಂದು ವೈರಲ್ ಮಾಡಲಾಗುತ್ತಿದೆ. 


ಹೇಳೋರಿಲ್ಲ ಕೇಳೋರಿಲ್ಲಾ ಬಡವನೊಬ್ಬ ಸಣ್ಣ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡರೆ,  ಬಂದು ಕಿತ್ತು ಎಸೆಯುವ ಅರಣ್ಯ ಇಲಾಖೆ ,ಪರಿಸರ ಸೂಕ್ಷ್ಮ ಪ್ರದೇಶದ ವೈಲ್ಡ್ ಲೈಫ್ ಜಾಗದಲ್ಲಿ ಶೆಟ್ಟಿಹಳ್ಳಿ ಅಭಾಯರಣ್ಯ ಸಕ್ಕರೇಬೈಲು ರೇಂಜಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ನಡೆಯುವ ಹೋಟೆಲ್ ದಂಧೆಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ.‌ 


ತುಂಗಾ ನದಿ ತೀರದ  ವನ್ಯಜೀವಿ ವಿಭಾಗದ ಜಾಗದಲ್ಲಿ ಬೃಹದಾಕಾರದ ಕಟ್ಟಡ ನಿರ್ಮಾಣ ಆಗುತ್ತಿದೆ ಆದರೆ ಬಡವರ ರಕ್ತ ಹೀರುವ ಅರಣ್ಯ ಇಲಾಖೆ ಎಲ್ಲಿದೆ?  ವನ್ಯಜೀವಿ ವಿಭಾಗ ನಿದ್ದೆ ಮಾಡ್ತಾ ಇದೆಯಾ? ಎಲ್ಲಿದೆ ಸೆಟ್ ಲೈಟ್ ಮ್ಯಾಫ್?,ಎಲ್ಲಿದ್ದಾರೆ ಡಿ ಎಫ್ ಓ?ಎಲ್ಲಿದ್ದಾರೆ ಆರ್ ಎಫ್ ಓ,? ಎಲ್ಲಿದ್ದಾರೆ ಫಾರೆಸ್ಟ್? ಆಫಿಸರ್,ಎಲ್ಲಿದ್ದಾರೆ ಗಾರ್ಡ?   ಹೇಳೋರಿಲ್ಲಾ ಕೇಳೋರಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. 


ಬಡವರ ಮೇಲೆ ಮಾತ್ರ ದೌರ್ಜನ್ಯ ನಡೆಸುವ ಅರಣ್ಯ ಕಾನೂನು ಪಿಕ್ ಅಂಡ್ ಚೂಸಾ? ರಸ್ತೆ ಮಾಡಲು ಅಡ್ಡ ಬರುವ, ಬಡ ರೈತ ಒಂದು ಗುದ್ದಲಿ ಮಣ್ಣು ತೆಗೆಯಲು ಕೂಡ ಅವಕಾಶ ಕೊಡದ ವನ್ಯಜೀವಿ ವಿಭಾಗ ಈಗೆಲ್ಲಿದೇ ಈ ಕಟ್ಟಡ ಕಟ್ಟಲು ಒಪ್ಪಿಗೆ ಕೊಟ್ಟಿದೆಯಾ? ಅನುನತಿ ಕೊಟ್ಟಿದ್ದರೆ ಇತರೆ ಕಟ್ಟಡಗಳಿಗೆ ಮನೆಗಳಿಗೆ ಯಾಕೆಯಿಲ್ಲ? 


ಈ ರೀತಿ ಇನ್ನೂ ಹತ್ತಾರು ಹೋಟೆಲ್ ನಡೆಸಲು ಅನುಮತಿ ಇರುವುದಾದರೆ,  ಬಡವರ ಮನೆಗಳಿಗೆ ವಾಸಿಸುವ ಜಾಗಗಳಿಗೆ ಯಾಕೆಯಿಲ್ಲ? ಬಡವರ ಉದ್ದಾರಕರೆಂದು ಹೇಳಿಕೊಳ್ಳುವ  ಜನಪ್ರತಿನಿಧಿಗಳೇ ಎಲ್ಲಿದ್ದೀರಿ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಲಾಗುತ್ತಿದೆ. ಅರಣ್ಯ ಇಲಾಖೆ ನಿದ್ದೆಯಿಂದ ಏಳುತ್ತಾ? ಅಥವಾ ಬಡವರಿಗೂ ಸೂರು ಕಟ್ಟಿಕೊಳ್ಳಲು ಅವಕಾಶ ಕೊಡುತ್ತಾ ಕಾದು ನೋಡಬೇಕಿದೆ. 

ಇದನ್ನೂ ಓದಿ-https://www.suddilive.in/2024/08/blog-post_60.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ