ಶುಕ್ರವಾರ, ಆಗಸ್ಟ್ 16, 2024

ನಡುರಸ್ತೆಯಲ್ಲೇ ಬಸ್ ಬಿಟ್ಟು ಠಾಣೆಗೆ ತೆರಳಿದ ಚಾಲಕ



ಸುದ್ದಿಲೈವ್/ಶಿರಾಳಕೊಪ್ಪ


ಶಿರಾಳಕೊಪ್ಪದಲ್ಲಿ ಕೆಎಸ್ಆರ್ ಟಿ ಸಿ ಬಸ್ ವೊಂದು ನಡುರಸ್ತೆಯಲ್ಲಿ ನಿಂತಿದ್ದು ಕಂಡಕ್ಟರ್ , ಚಾಲಕ ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ. 


ಶಿರಾಳಕೊಪ್ಪದಲ್ಲಿ ರಾಣೇಬೆನ್ನೂರು, ಹಿರೇಕೆರೂರು ಮೂಲಕ ಶಿರಾಳಕೊಪ್ಪಕ್ಕೆ ತಲುಪಬೇಕಿದ್ದ ಎನ್ ಡಬ್ಲೂ ಕೆಎಸ್ ಆರ್ ಟಿಸಿ ಬಸ್ ಶಿರಾಳಕೊಪ್ಪದ ನಡುರಸ್ತೆಯಲ್ಲಿ ನಿಲ್ಲಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು  ಕೆಲ ಪ್ರಯಾಣಿಕರು ಮತ್ತು  ಬಸ್ ಚಾಲಕ ಮತ್ತು ನಿರ್ವಾಹಕರ ನಡುವೆ ವಾಗ್ವಾದ ನಡೆದಿದೆ. 





ಕೆಲವರ ಪರ ಕೈ ನೀಡಿದ್ದಲ್ಲಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ವಾಗ್ವಾದ ನಡೆದಿದೆ. ಇದರಿಂದ ಹತ್ತಿರದ ಪೊಲೀಸ್ ಠಾಣೆಗೆ ಬಸ್ ಚಾಲಕ ನಡುರೆಸ್ತೆಯಲ್ಲಿ ಬಿಟ್ಟು ಠಾಣೆಗೆ ತೆರಳಿದ್ದಾರೆ. 


ಕೆಎ 27 ಎಫ್ 669 ಕ್ರಮಸಂಖ್ಯೆಯ  ಹಾವೇರಿ ವಿಭಾಗದ ಎನ್ ಡಬ್ಲುಕೆಆರ್ ಟಿಸಿ ಬಸ್ ಆಗಿದೆ. ಠಾಣೆಯಲ್ಲಿ ಪೊಲೀಸರು ವಿಚಾರಿಸಿದ್ದು ಈ ಮೊದಲು ಶಿರಾಳಕೊಪ್ಪದ ಹಳೇ ಪೆಟ್ರೋಲ್ ಬಂಕ್ ಬಳಿ ಸ್ಟಾಪ್ ನೀಡದ ಕಾರಣ ಈ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.


ಸರ್ಕಾರಿ ಸಾರಿಗೆ ಬಸ್ ನಿಲುವಿನ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗುತ್ತದೆ. ಆದರೆ ಈ ನೋಟಿಫಿಕೇಷನ್ ಹೊರಡಿಸಲಾಗುತ್ತದೆ. ಆದರೆ ಕೆಲ ಬಸ್ ಗಳು ಇಲ್ಲಿ ನಿಲುಡೆ ಕೊಡಲಾಗುತ್ತೆ ಕೆಲ ಬಸ್ ಗಳು ಕೊಟ್ಟಿಲ್ಲ. ಕೆಎ 27 ಎಫ್ 669 ಕ್ರಮಸಂಖ್ಯೆಯ ಬಸ್ ಸ್ಟಾಪ್ ಕೊಡದ ಕಾರಣ ಈ ಪ್ರಯಾಣಿಕರು ಗಲಾಟೆ ನಡೆಸಿದ್ದಾರೆ. 


ಠಾಣೆ ಮೆಟ್ಟಿಲೇರಿದ ಈ ಗಲಾಟೆ ವಿಚಾರದಲ್ಲಿ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಮೌಕಿಖವಾಗಿ ಎಚ್ಚರಿಸಿ ಕಳುಹಿಸಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ