ಶುಕ್ರವಾರ, ಆಗಸ್ಟ್ 2, 2024

ಎಸಿಪಿ ಚಂದನ್ ಅಮಾನತ್ತುಗೊಳಿಸುವಂತೆ ಹಿಙದೂ ಜಾಗರಣ ವೇದಿಕೆ ಆಗ್ರಹ



ಸುದ್ದಿಲೈವ್/ಶಿವಮೊಗ್ಗ 


ಬೆಂಗಳೂರಿಗೆ ಅಕ್ರಮ ಮತ್ತ ಕಳಪೆ ಮಾಂಸವನ್ನು ಸರಬುರಾಜು ಮಾಡುವವರ ಮೇಲೆ ಕ್ರಮ ಜರುಗಿಸಬೇಕು ಮತ್ತು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಮಾಡಿದ ಎಸಿಪಿ ಚಂದನ್ ಕುಮಾರರವರನ್ನು ಅಮನಾತು ಮಾಡಬೇಕು ಮತ್ತು ರಾಮನಗರದ ಹೆಸರನ್ನು 'ದಕ್ಷಿಣ ಬೆಂಗಳೂರು' ಎಂದು ಮರುನಾಮಕರಣ ಮಾಡಬಾರದು. ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.


ಬೆಂಗಳೂರಿಗೆ ಕಳೆದ ಅನೇಕ ವರ್ಷಗಳಿಂದ ಅಕ್ರಮವಾಗಿ ಹೊರರಾಜ್ಯಗಳಿಂದ ಮ್ಯಾಜೆಸ್ಟಿಕ್ ರೈಲ್ವೇ ನಿಲ್ದಾಣದ ಮೂಲಕ ಬೇರೆ ಬೇರೆ ರೆಸ್ಟೋರೆಂಟ್, ಪ್ರತಿಷ್ಠಿತ ಹೊಟೆಲಗಳಿಗೆ ಅಕ್ರಮ ಮಾಂಸವು ಸರಬುರಾಜಾಗುತ್ತಿದೆ. ಈ ಮಾಂಸವನ್ನು ಅಕ್ರಮವಾಗಿ ಆಹಾರ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಸರಬುರಾಜು ಮಾಡಲಾಗುತ್ತದೆ ಮತ್ತು ಈ ಮಾಂಸವು ಸಾಗಾಣಿಕೆ ಮತ್ತು ಪುರೈಕೆಯ ಅವಧಿಯಲ್ಲಿ ಕೆಟ್ಟು ಹೋಗುತ್ತಿದ್ದು, ಅದನ್ನು ವಿವಿಧ ರಸಾಯನಿಕಗಳಿಂದ ತೊಳೆದು ಸರಬುರಾಜು ಮಾಡಲಾಗುತ್ತಿದೆ. 

ಈ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಹಾಗು ಹಿಂದೂ ಕಾರ್ಯಕರ್ತ ಶ್ರೀ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಮಾಡಿದ ಎಸಿಪಿ ಚಂದನ್ ಕುಮಾರರವರನ್ನು  ಕರ್ತವ್ಯದಿಂದ ಅಮನಾತುಗೊಳಿಸಬೇಕು. ಹಾಗು ರಾಮನಗರದ ಹೆಸರನ್ನು 'ದಕ್ಷಿಣ ಬೆಂಗಳೂರು' ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಆದೇಶವನ್ನು ರದ್ದು ಪಡಿಸಲು ಕೋರಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಿದರು


ಇದನ್ನೂ ಓದಿ-https://www.suddilive.in/2024/08/108.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ